ಗಿರಬೇಕು; ಶರಚ್ಚಂದ್ರನು ದೋಷಿಯೇ ಅಲ್ಲವೇ ಎಂಬು ದನ್ನು ಅವರು ಚೆನ್ನಾಗಿ ಅರಿತಿರುವರು ನನಗೆಮಾತು ನಿಜವಾದ ಸಂಗತಿಯನ್ನು ತಿಳಿಸಲಿಲ್ಲ. ಅದೇತಕೆ ಗೋಪ್ಯ ವಾಗಿಟ್ಟುಕೊಂಡಿರುವರೋ, ಅದು ಮಾತ್ರ ನನಗೆ ಗೊತ್ತಾ, ಗಲಿಲ್ಲ, ಎಂದು ಯೋಚಿಸುತ್ತಾ ಆ ಸ್ಥಳವನ್ನು ಬಿಟ್ಟು ಕದಲಿದನು. ಹದಿನೈದನೆಯ ಅಧ್ಯಾಯ ಅರಿಂದಮನು ಮಹಡಿಯಿಂದ ಕೆಳಗೆ ಇಳಿದುಬರಲು, ಮಾರ್ವಾಡಿಹೆಂಗಸು ಮೊದಲಿನಂತೆಯೇ ಅಲ್ಲಿ ನಿಂತಿದ್ದಳು. ಅರಿಂದಮನು ಆಕೆಯನ್ನು ನೋಡಿದಕೂಡಲೆ, ಅವಳಎರ ಡು ಕೈಗಳನ್ನೂ, ಬಲವಾಗಿ ಹಿಡಿದುಕೊಂಡು ನಾನು ಬರು ವು ದಕ್ಕೆ ಮುಂಚೆ ಮಹಡಿಯ ಮೇಲೆ ಯಾರು ಯಾರು ಇದ್ದ ರು? ಖಂಡಿತವಾಗಿ ಹೇಳು; ಸುಳ್ಳು ಹೇಳುವುದಾದರೆ ನಿನ್ನ ನ್ನು ನಾನು ಇಲ್ಲಿಯೇ ಕೊಂದುಬಿಡುವೆನು ಎಂದು ಭಯಂ ಕರವಾದ ಧನಿಯಿಂದ ಮಾತನಾಡಿಸಿದನು. ಹೆಂಗಸು ಹಠಾತ್ತಾಗಿ ಸಂಭವಿಸಿದ ಈ ವಿಪತ್ತಿನಿಂದ ಉದ್ದಾರವಾಗಲೋಸುಗ 7 ಟಿಯಾಗಿ ಕಿರಿಚಲಾರಂಭಿಸ ಲಾಗಿ, ಅರಿಂದಮನು ಅವಳ ಕುತ್ತಿಗೆಯನ್ನು ಅ ' ವಿ ಹಿಡಿದು ಕೊಂಡು-ರಂಡೆ ! ಕಿರಿಚುವುದಾದರೆ ಇಲ್ಲಿಯೇ ನಿನ್ನನ್ನು ತುಳಿ ದುಬಿಡುವೆನು, ಎಂದನು. ಇದನ್ನು ಕೇಳಿ ಹೆಂಗಸು ನನ್ನನ್ನು ಏತಕ್ಕೆ ಗೋಳಾ ಡಿಸುವೆ? ಎಂದು ಅಂಗಲಾಚಿಕೊಂಡಳು. ಅದನ್ನು ಕೇಳಿ ಅರಿಂದಮನು-ನಾನು ಯಾರೆಂದು ತಿಳಿದಿರುವೆ ? ನಾನು ಪೋ