ಪುಟ:ಜ್ವರ.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚಾಕ, ಯವಾಗು, ವಿರೇಪಿ, ಮಾಂಡ, ಅಕ್ಕಿ ಗಂಜಿ, ಹೆಸರು ಹಾಗು ತೊಗರಿ ಬೇಳೆ ತೊವ್ವ, ಅಡವೆಹಾಗಲಕಾಯಿ, ಹಾಗಲಕಾಯಿ, ಹುಳಚುಕ್ಕ, ತವಾಕ್ಷಕ, (ಆರಾರೋಟ) ಕಿರಕಸಾಲಿ, ತಾಳಿ೦ಬ, ದೀಪದ್ರಾಕ್ಷಿ, ಕರೇದ್ರಾಕ್ಷಿ, ಹವೀಜ, ಕೆಂಪುತೊಗರಿ, ಬಿಸಿನೀರು, ಹೆಸರು, ಮಡಕಿ, ಹನಗನಸೊಪ್ಪು, ಒಳೊಳ್ಳಿ, ಆಡಿನ ಹಾಲು, ಆಕಳ ತುಪ್ಪ-ಹಾಲು-ಬೆಣ್ಣಿ, ಹುರುಳಿ, ಪಡುವಲಕಾಯಿ, ಕೆಂಪು ನೆಲ್ಲಕ್ಕಿ, ನುಗ್ಗೇಕಾಯಿ, ಎಳೇಮಲಂಗಿ, ಬನ್ನಂಗಿ, ಆಮಸಲ, ಅಂಚಣ ಸೋಲು, ಬೆಳವಲಹಣ್ಣು, ಹರಿವಿ, ಸಾಬಕ್ಕಿ, ಜೇನುತುಪ್ಪ, ಸಕ್ಕರೆ, ಕಾಲ್ಪಿ ಸಕ್ಕರಿ, ಖಾರಗೆಣಸು ಇತ್ಯಾದಿ ಜೀನಸುಗಳು ಪಥ್ಯಕರವಾಗಿವೆ. ೪೮ ಸರ್ವ ಜ್ವರಗಳಿಗೂ ಸಾಧಾರಣವಾದ ಅರಣ್ಯ, ಹೆಚ್ಚು ತಿನ್ನುವದು, ಜಡಾನ್ನ, ದಾಹ ಹೆಚ್ಚಿಸುವ ಜೀನಸುಗಳು, ಕೆಟ್ಟ ನೀರು, ಉಪ್ಪು-ಕಾರ-ಹುಳಿ ಪದಾರ್ಥಗಳು, ತಾಂಬ, ಕಲ್ಲಂಗಡಿ ಹಣ್ಣು, ಹಲಸಿನಕಾಯಿ-ಹಣ್ಣು, ಹೊಸ ಧಾನ್ಯಗಳು, ಉಂಡಿ, ಹಿಟ್ಟಿನ ಪದಾರ್ಥ, ಆಂಬೊಡಿ, ಭಜಿ, ಅವಲಕ್ಕಿ, ಪೌಷ್ಠಿಕ ಜೀನಸುಗಳು, ವಿಷ್ಠಾನ, ಸ್ನಾನ, ಜಾಗರಣೆ, ಕರಿದ ಜೀನಸು, ಕರಿದ ಕವರು, ಒಗ್ಗರಣೆಯು ಕವರು, ತಂಗಾಳಿ, ತಣ್ಣೀರು, ಆರಿದ ಪದಾರ್ಥಗಳು, ಕಡ್ಡಿ, ಗೋದಿ, ದುಂಡಕಡಲೆ, ಅವರೆ ಮುಂತಾದ ಜಡಧಾನ್ಯಗಳು, ತಂಗಳನ್ನ, ಸ್ತ್ರೀಸಂಗ, ವ್ಯಾಯಾಮ, ಶ್ರಮವಾಗು ವಂಥ ಕಲಸ ಇವೆಲ್ಲ ವರ್ಜ್ಯಗಳಾಗಿವೆ. ರ್೪ ಜ್ವರಮುಕ್ತವಾದ ಬಳಿಕ ಮಾರತಕ್ಕ ಶುಶೂಷೆಯು, ರೋಗಿಯು ಜ್ವರಮುಕ್ತನಾದ ನಂತರ ಅವನಿಗೆ ತಾನು ಅಮಂಗಲಕರ ನೆಂದೆನಿಸುತ್ತದೆ, ಮೈ ಕಡಿತವೇಳುವದರಿಂದ ಸ್ನಾನ ಮಾಡುವ ಇಚ್ಛೆಯಾಗು ಇದೆ. ಆದ್ದರಿಂದ ಮೊದಲು ಬೇವಿನ, ಲೆಕ್ಕಿಯ ಗಜಗದ, ಹುಲುಗುಲಿಯ ಅಥವಾ ಔಡಲ ಈ ಸಂಪ್ಪುಗಳಲ್ಲಿ ಯಾವವು ಸಿಗುವವೋ, ಅವುಗಳನ್ನು ತಕೊಂಡು ೧ ಕೊಡ ನೀರಲ್ಲಿ ಹಾಕಿ ೧-೨ ಕುದಿ ಬರುವ ವರೆಗೆ ಆ ನೀರು ಕಾಸಿ, ಅದರಲ್ಲಿ ತಣ್ಣೀರು ಬೆರಿಸದೆ, ಹವಣಿಯಾಗುವ ವರೆಗೆ ಆಕೆ ಗೊಟ್ಟು ಬಳಿಕ ಒಳಗಿನ ಸೊಪ್ಪನ್ನೆಲ್ಲ ತೆಗೆದೆಗದು ರೋಗಿಯನ್ನು ಮರೆಯ. (ಗಾಳಿಬಡಿಯದ) ಸ್ಥಳದಲ್ಲಿ ಒಚ್ಚಲದಲ್ಲಿ ಕೂಡಿಸಿ, ಸ್ನಾನ ಮಾಡಿಸಿ, ಒಣ ಅರಿವೆ ಯಿಂದ ಒರಿಸಿ ಸ್ವಚ್ಛವಾದ ಹಾಸಿಗೆಯ ಮೇಲೆ ಮಲಗಿಸಿ ದಪ್ಪವಾದ ಹೊದಿಕೆ