ಪುಟ:ಜ್ವರ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

---[ ೫೬ } ೩೩ ಆಂಜನ:-ಬಿಳೇ ಸಾಸಿವೆ, ಗೋವತ್ರ, ಹಿಪ್ಪಲಿ, ಮೆಣಸು, ಸೈಂಧಲವಣ, ಒಳೆಳ್ಳಿ, ಮನಸೀಲ, ಬಜಿ ಇವನ್ನೆಲ್ಲ ಸಮಭಾಗ ತಕೊಂಡು ೧ ದಿವಸ ಅರೆದು ಗುಳಿಗೆ ಮಾಡಿಡಬೇಕು. ಇದರ ಆಂಜನ ಮಾಡುವದರಿಂದ ಎಚ್ಚರದಪ್ಪಿದಂಥ ರೋಗಿಗೆ ಕೂಡ ಹುವಾರಿಯಾಗುವದು, ೩೪ ನಸ್ಟಾ:-ಇಪ್ರಿಯ ಅಂಟು, ಸೈಂಧಲವಣ, ಬಜಿ, ಮೆಣಸು, ಹಿಪ್ಪಲಿ ಇವನ್ನೆಲ್ಲ ಸಮಪ್ರಮಾಣ ತಕ್ಕೊಂಡು ನೀರಲ್ಲಿ ಅರೆದು, ಮುಂದಿನಳಗೆ ಒಂದೆರಡು ಹನಿ ಬಿಡಬೇಕು. ಸ್ಮತಿದಪ್ಪಿದವನು ಎಚ್ಚರಾಗುತ್ತಾನೆ. ೩೫ ಕಿರಿಶಿವಣಿ, ಚಳ್ಳಬೇಕು, ದುಷ್ಟ ಪುಜೆಟ್ಟು, ಹಿಪ್ಪಲಿ, ಜೇನುತುಪ್ಪ ಇವಗಳ ಲೇಹ್ಯ ಮಾಡಿ ನಕ್ಕಿಸಬೇಕು. ಇದರಿಂದ ಶ್ವಾಸ, ಕಮು, ಜ್ವರ, ಕಫ ಇವುಗಳ ನಾಶವಾಗುತ್ತದೆ, ೩೬ ಗಂಟುಭಾರಂಗಿ, ನೆಲಬೇವು, ಬೇವು, ಜೇಕಿನಗಡ್ಡೆ, ಕಟುಕರಣಿ ಬಜಿ, ಶುಂಠಿ, ಮೆಣಸು, ಹಿಪ್ಪಲಿ, ಆಡಸಾಲ, ಕಾಡಕವರಿ, ರಾಸನ, ನೆಲ೫೦ಗಳ, ಕಹಿಪಡವಲ, ದೇವದಾರು, ಅರಿಷಿಣ, ಬಿಳೇಪಾದರಿ, ತುಮರಿ, ಒಂದೆಲಗ, ಮರಕ್ರಿಷಿಣ, ಅಮೃತಬಳ್ಳಿ, ತಿಗರಿ, ಅತಿಬಜಿ, ಕಳಂಜನ, ಮದರಂಗಿ, ತೊಟ್ಟಿಲಕಾಯಿ, ಗುಕ್ಕ, ಕಡಮರಕ ನಬಿಜ, ಅಳಲೇಕಾಯಿ, ತರೀ ಕಾಯಿ, ನೆಲ್ಲಿಹಿಟ್ಟು, ಕಚಕ ಇವನ್ನೆಲ್ಲ ಸಮಭಾಗ ತಕೊಂಡು ಕಾಥೆ ಮಾಡ ಬೇಕು, ಇದಕ್ಕೆ (ಒಸಿ) ೩೨ ರ ಕಷಾಯವನ್ನು ವರು, ಈ ಕಷಾಯ ದಿಂದ ೧೩ ಬಗೆಯ ಸನ್ನಿಪಾತಗಳೂ, ಶಲಿ, ಕಮು, ಬಿಕ್ಕು, ಶ್ವಾಸ, ಗುದ ರೋಗ, ಆಧ್ಯಾನ, ಉಪಸ್ತಂಭ, ಅಂತ್ರವೃದ್ಧಿ, ಗರಗ, ಅರುಚಿ, ಎಲ್ಲ ಸಂಧಿ ಗ್ರಹ ಇವುಗಳ ನಾಶವಾಗುತ್ತದೆ, ೩೭ ನೆಲಬೇವು, ಒಳೊಳ್ಳಿ, ಮಂಗರವಳ್ಳಿ, ಗಂಟುಭಾರಂಗಿ, ಅತಿಬಜಿ ಇವನ್ನೆಲ್ಲ ಸವತಿಭಾಗ ತಕ್ಕಂಡು ಗೋಮೂತ್ರದಲ್ಲಿ ಕಷಾಯ ಮಾಡಿ ಕೂಡ ಬೇಕು. ಇದು ಅತಿ ತೀಕ್ಷ್ಮವಾಗಿರುತ್ತದೆ. ೩೮ ಜ್ವರದಲ್ಲಿ ನಾಲಿಗೆಗೆ ಮುಳ್ಳು ಬಂದರೆ ಇಲ್ಲವೆ ನಾಲಿಗೆ ಒಡೆದರೆದ್ರಾಕ್ಷಿಯನ್ನು ಜೇನುತುಪ್ಪದಲ್ಲಿ ಅರೆದು ತುಪ್ಪ ಮಿಶ್ರ ಮಾಡಿ ನಾಲಿಗೆಗೆ ತಿಕ್ಕ ಬೇಕು; ಗುಣವಾಗುತ್ತದೆ. ೩೯ ಗಂಟಲು ಬಾವು ಬಂದರೆ:-ಶುಂಠಿ, ದೇವದಾರು, ಚಿತ್ರವು, ಶಾಸನ ಇವುಗಳ ಲೇಪದಿಂದ ಬಾವು ಇಳಿಯುತ್ತದೆ. ೪೦ ಕಫ ಹೆಚ್ಚಾದರೆ:-ಖಾರಿಗೆಣಸಿನ ರಸ, ಸೈಂಧಲವಣ, ಶುಂಠಿ, ಬೆಣಸು, ಹಿಪ್ಪಲಿ ಇವುಗಳನ್ನರೆದು ಕಲ್ಲುಸಕ್ಕರೆಯ ಪಾಕದಲ್ಲಿ ಗುಳಿಗೆ ಮಾಹಿತಿ