ಪುಟ:ಜ್ವರ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

-[ ೭೨ ](೮) ಕರ್ಣಕ ಸನ್ನಿಪಾತ ಜ್ವರ. ಲಕ್ಷಣ:-ಬಡಬಡಿಕ, ಮೋಹ, ದನಿ ಕುಗ್ಗು ವದು, ಕಿವಿಮಂದವಾ ಗುವದು, ಒಡ್ಡಮುರಿಯುವದು; ಜೊಲ್ಲು ಸೋರುವದು, ಜ್ವರ, ಸಂತಾಪ, ಕಿವಿ ಮತ್ತು ಗಲ್ಲಗಳಿಗೆ ವ್ಯಥೆ ಇಲ್ಲವೆ ಕಿಎಯು ಬೆಣ್ಣೆಗೆ ಗಂಟಾಗುವದೇ ಮುಂತಾದ ಲಕ್ಷಣಗಳಾಗುತ್ತವೆ, ಕರ್ಣಕಸನ್ನಿಪಾತಕ್ಕ ಉಪಾಯಗಳು, ೧ ರಾಸನೆ, ನೆಲಗುಳ ಬೇಕು, ಅಳಲೇಕಾಯಿ, ಕಟು, ಕಟುಕರಣ, ಜೇಕಿನಗಡ್ಡಿ, ತಾವರೆ ಗಡ್ಡೆ, ದುಷ್ಟಪುಚಟ್ಟು, ನೆಲ್ಲಿಚೆಟ್ಟ, ಗಂಟುಭಾರಂಗಿ ಇವುಗಳ ಕಷಾಯವನ್ನು ಕಾಡುವದು, ೨ ಸನ್ನಿಪಾತ ವಿಧ್ವಂಸ ರಸವನ್ನು ಕೊಡತಕ್ಕದ್ದು. (ಇದು ಪ್ರಸಿದ್ಧ ವೈದ್ಯರ ಕಡೆಗೆ ದೊರೆಯುತ್ತದೆ.) ೩ ಮೆಣಸು, ದಶವುಲ, ಹಿಪ್ಪಲಿ, ತ್ರಿಫಳ, ಅರಿಷಿಣ, ಶುಂಠಿ, ಕಟುಕ ರಣ, ನೆಲಬೇವು ಇವುಗಳ ಕಷಾಯದಲ್ಲಿ ಸೈಂಧಲವಣ ಹಾಕಿ ಕೊಟ್ಟರೆ, ಕರ್ಣಕಸನ್ನಿಪಾತವು ಗುಣವಾಗುತ್ತದೆ. ೪ ಗಂಟುಭಾರಂಗಿ, ಕಾಡುಬನ್ನಿ, ತಾವರೆಗಡ್ಡೆ, ನೆಲಗುಳ ಬೇಕು, ಕಟು, ಬಜಿ, ಶೀ ಸರಣಗ, ದುಪ್ಪಪುಚಟ್ಟು, ಕಟುಕರೋಣ, ರಾಸನೆ ಇವುಗಳ ಕವಾಯವು ಈ ಸನ್ನಿಪಾತವನ್ನು ನಾಶಗೊಳಿಸುತ್ತದೆ. ೫ ಗಂಟು ಕರ್ಣನದಲ್ಲಿ ಎದ್ದಿದ್ದರೆ, ಕಣವಲದ ಮೇಲಿನ ಉಪಾಯಗಳನ್ನು ಮಾಡಬೇಕು, (6) ಭೂತ್ರ ಸನ್ನಿಪಾತಜ್ವರ, ಲಕ್ಷಣ:-ಬಲಕ್ಷಯ, ಸ್ಮತಿನಾಶ, ಶ್ವಾಸ, ಬಡಬಡಿಕ, ಮೋಹ, ಸಂತತಜ್ವರ, ವಕ್ರದೃಷ್ಟಿ, ಭ್ರಮೆ, ನಡುಗು, ಬಾವು, ಕೆಮ್ಮು, ಕಣ್ಣು ಸೆಟೆದಿರು ವದು ಮತ್ತು ಕಣ್ಣು ನಿಸ್ತೇಜವಾಗುವದು ಇವೆಲ್ಲ ಲಕ್ಷಣಗಳಿರುತ್ತವೆ. ಈ ಸನ್ನಿಪಾತದಿಂದ ರೋಗಿಯುತಿ ೮ ದಿನಗಳಲ್ಲಿ ಇಲ್ಲವೆ ತಾತ್ಕಾಲದಲ್ಲಿ ಸಾಯುತ್ತಾನೆ. ಇದು ಮಹಾಬೋದಿ ಸನ್ನಿ ಪಾಶವಿರುತ್ತದೆ, ಭೂಗೋತ್ರ ಸನ್ನಿಪಾತಕ್ಕೆ ಉಪಾಯಗಳು. ೧ ಹಿರೇಮದ್ದಿನ ಬೇರು, ಉಪ್ಪು, ಬಜಿ, ಹಿಪ್ಪಲಿ, ಮೆಣಸು, ಜೇಷ್ಠ ವಧು, ದಾಳಿಂಬರಹಣ್ಣಿನ ತೊಗಟೆ, ಬಳ್ಳೋಳ್ಳಿ, ಶುಂಠಿ ಇವುಗಳ ಜರ್ಣ ಪನ್ನು ಕೂತಿನ ಆಯ್ದೆಯಲ್ಲಿ ಅರೆದು ಮುಗಿನಲ್ಲಿ ಹಿಂಡಬೇಕು.