ಪುಟ:ತೊಳೆದ ಮುತ್ತು.pdf/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರಥಮ ದರ್ಶನದ ಪ್ರೇಮ

೧೯

ಬರಿಯುವದೇನು ?

ನನ್ನ ದೇನಾದರೂ ಆಗಲಿ, ಈ ಕಧಾನಾಯಕನ ಅವಸ್ಥೆಯೇನು ? ದೃಢಾಂಗರೂ ತೇಜಸ್ಸುಳ್ಳ ರಕ್ತದವರೂ ಅದವರ ವಿಕಾರವಶತೆಯು ಅಧಿಕವಾಗಿರಲೇಬೇಕು. ಅವರು ಅಂಧ ವಿಕಾರವಶತೆಯನ್ನು ವಿವೇಕದಿಂದ ದಬ್ಬಿಡಬಹುದು. ಆದರೆ ಆ ವಿವೇಕ ಸಾಮರ್ಥ್ಯವಷ್ಟಿರಬೇಕು ಬಲ್ಲಿರಾ? "ಧ್ರುವರಾಯನ ಬಲವು ಕುಂದಿಹೋಗಿದೆ. ಅವರ ಮುಖವು ಕಳೆಗುಂದಿ ಹೋಗಿದೆ. ಅವರ ಅಭ್ಯಾಸಕ್ಕೆ ಮವು ನಿಂತುಹೋಗಿದೆ." ಎಂದು ಪ್ರತ್ಯಕ್ಷ ಪಂಡಿತಜಿಯವರು ಚಿಂತಾತುಲರಾಗಿದ್ದರೆ ಹಿಂಡಿ ತಜಿಯವರ ತರುವಾಯ ಈ ಕಾಲೇಜದ ಚಾಲಕರು ಧು ವರಾಯರೇ ಎಂದು ರಾದಾ ದೀನದಯಾಲರೇ ಮುಂತಾದ ಮಹಾತ್ಮರು ಆಕೆಯನ್ನು ತಳೆದಿರಲು ನನಗೋಸ್ಕರವಾಗಿ ಚಿಂದ ಮಹತರ್ಯದ ಹಾನಿಯಾಗುವ ಹೊತ್ತು ಬಂದೊದಗಿದಂಗಿದೆ, ಏನು ಮಾಡಲಿ ? ಬಹಳೊತ್ತು ಅವಳು ಆಲೋಚಿಸಿದಳು ಬಹಳೊತ್ತು ಅಡ್ಡಾಡಿದಳು, ಬಗೆ ಹರಿಯಲಿಲ್ಲ, 4 ಆಗಲಿ, ನಾಳಿನತನಕ ಅವಕಾಶವಿರುವದು; ಅಷ್ಟರಲ್ಲಿ ದೇವರು ಬುದ್ಧಿ ಕೊಟ್ಟಂತೆ ಮಾಡಬಹುದು."

ಬೆಳಗಾಗುವದರೊಳಗಾಗಿ ಧುವರಾಯನ ಕೈಯಲ್ಲಿ ರಮಾಸುಂದರಿಯ ಬರೆದ ಕಾರ್ಡು :

ಶಾರದಾಪ್ರಸಾದ ಕಾಲೇಜದ "ಫೆಲೋ” ಇವರಿಗೆ ಮಾಸುಂದರಿಯ ವಿನಂತಿ :

ಏನು ನಿಮಿತ್ತವೂ ತಲೆನೋವು ಹೆಚ್ಚಾಗಿದೆ. ಅದಕ್ಕಾಗಿ ಇಂದು ವಿದ್ಯಾಮಂದಿರಕ್ಕೆ ಬರುವದಾಗುವದಿಲ್ಲ. ಶ್ರುತವಿರಬೇಕು.

ತಮ್ಮ ವಿಧೇಯಳಾದ
ರಮಾಸುಂದರಿ

ಧ್ರುವರಾಯನು ಆ ಕಾರ್ಡನ್ನು ಮೇಜಿನಮೇಲಿಟ್ಟು ಅದರ ಮೇಲೆ ತನ್ನ ಹಸ್ತವನ್ನು ಒಳಿತಾಗಿ ಅಪ್ಪಳಿಸಿದನು. ಆ ರಭಸದ ಹೊಡೆತಕ್ಕೆ ಮೇಜು ಒಳಿತಾಗಿ ಆದರಿತು ಆಫೀಸದ ಕೋಣೆಯಲ್ಲೆಲ್ಲ "ಧಮ್ಮೆಂದು" ದರವು ಹಿಡಿಯಿತು. "ಏನು ಮಾಡಿದಳೀಕೆ! ಇಂದು ನಾನು ಅವಳ ಸನ್ನಿಧಾನಕ್ಕೆ ಬರುವನೆಂದು ಬೇಡಿಕೊಂಡಿದ್ದೆವು. ನಾನು ಬರಬಾರದೆಂಬದೇ ಈ ಕಂಡೀನ