ಪುಟ:ದಾಮಿನಿ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

8(6) ++ * * * *

8(b) . ಶ್ರೀಕೃಷ್ಣ ಸೂಕ್ತಿ ಮುಕ್ತಾವಳಿ. ('ಅಮ್ಮಾ” ಎಂದು ಅಳುವುದಕ್ಕೆ ಅಭ್ಯಾಸವಾಯಿತು. ದಾಮಿನಿಯು ದಿಂಬಿನಲ್ಲಿ ಮುಖವನ್ನಿಟ್ಟು ಕೊಂಡು, ಅತ್ತು ಬಿಟ್ಟಳು. --><, - ತೃತೀಯ ಪರಿ ಚ್ಛೇ ದ. ಆವ ಗ್ರಾಮದಲ್ಲಿ ರಮೇಶನು ವಾಸವಾಗಿದ್ದನೋ ಅದರ ತೆಂಕಣ ದಿಕ್ಕಿನಲ್ಲಿ, ನದಿ ಯ ತೀರದಲ್ಲಿ ಮುರಿದುಹೋದ ಮಹಡಿಯ ಮನೆಯೊಂದಿದ್ದಿತು. ವದಂತಿ ಯೂ ಇದ್ದಿತು; ಏನೆಂದರೆ, ಆರೋ ರಾಜನೊಬ್ಬನು ಎಷ್ಟೋ ಮೊದಲು ತನ್ನ ತಾಯ ಗಂಗಾವಾಸದ ನಿಮಿತ್ತದಿಂದ ಆ ಭವ್ಯಭವನವನ್ನು ಕಟ್ಟಿಸಿದನು; ಆದರೆ, ದೈವವಶಾತ್ತಾಗಿಯೋ ಏನೋ – ಅದರಲ್ಲಿಯೇ ಒಂದು ಹತ್ಯೆಯುಂಟಾಗಲು, ರಾಜಮಾತೃವು ಅದನ್ನು ಪರಿತ್ಯಾಗಮಾಡಿದಳು; ಅಂದಿನಿಂದ, ಆರೂ ಅದರಲ್ಲಿ ವಾಸಮಾಡಿದುದಿಲ್ಲ. ಅತಏವ, ಆ ಮಂದಿರವು ಪ್ರೇತಮಂದಿರವೆಂದು ಹೆಸರ್ಗೊ೦ಡಿತು. ಭೌತಿ ಕಾಪವಾದವುಂಟಾದುದರಿಂದ, ಕೊನೆಕೊನೆಗೆ ಹಗಲುಹೊತ್ತಿನಲ್ಲಿ ಯೂ ಆರೂ ಅದರ ಹತ್ತಿರದಿಂದ ಹಾಯ್ದು ಹೋಗುವುದಕ್ಕೆ ಕೂಡ ಸಾಹಸಪಡುತ್ತಿರಲಿಲ್ಲ. ಉನ್ಮಾದಿನಿ ನೋಡಿದಳು, ವಸತಿಯಿಲ್ಲದ ಆ ಭಯಾನಕವಾದ ಭಗ್ನಮಂದಿ ರವೇ ತನ್ನ ವಾಸಕ್ಕೆ ಯೋಗ್ಯವೆಂದುಕೊಂಡಳು. ಹಾಗೆಯೆ, ಅದರಲ್ಲಿ ಗೋಪ್ಯ ವಾಗಿ ವಾಸಮಾಡಲಾರಂಭಿಸಿದಳು. ದಾಮಿನಿಯನ್ನು ನೋಡಿದ ಮೊದಲು, ಎಷ್ಟೋ, ಮನಸ್ಸು ಸುಸ್ಥವಾಗಿದ್ದಿತಾದರೂ, ಒಂದು ಬಾರಿಗೆ ಹೇಗಾದರೂ ಅವ ಳನ್ನು ಕದ್ದು ಕೊಂಡು ಬಂದು, ರಹಸ್ಯವಾದ ಈ ಸ್ಥಳದಲ್ಲಟ್ಟು, ತಾನೊಬ್ಬಳೇ ಮನ ದಣಿಯೆ ತನ್ನ ಆ ದಾಮಿನಿಯನ್ನು ನೋಡಿಬಿಡುವೆನೆಂದು ಅವಳು ಒಮ್ಮೆಯೂಮ್ಮೆ ತನ್ನ ಮನಸ್ಸಿನಲ್ಲಿಯೇ ಸ್ಥಿರಮಾಡುವಳು. ಆದರೆ, ಉತ್ತರಕ್ಷಣದಲ್ಲಿಯೆ, ಆ ಕಾ ರ್ಯದ ಅಕರ್ತವ್ಯತೆಯನ್ನು ತಿಳಿದು, ಅದನ್ನು ತನ್ನ ಹೃದಯದಿಂದ ದೂರಮಾಡಿ ಬಿಡುವಳು, ಮನಸ್ಸಿನ ಚಾಂಚಲ್ಯಕ್ಕಾಗಿ, ವಿಶೇಷವಾಗಿ ಅಲ್ಲಿಗೆ ಹೋಗಿ ಬಂದು ಮಾಡಿದರೆ, ಅಳಿಯನಿಗೆ ಸಂದೇಹವುಂಟಾಗುವುದೆಂದೂ, ಕಳಂಕವು ಸಂಭವಿಸುವು ದೆಂದೂ ಭಯದಿಂದ, ಪುನಃ ಆ ಕಡೆಗೆ ಹೋಗಲೇ ಇಲ್ಲ. ಭಗ್ನ ಮಂದಿರದಲ್ಲಿ ಒಬ್ಬ ಲೇ ಕುಳಿತು, ತನ್ನಷ್ಟಕ್ಕೆ ತಾನೇ ದಾಮಿನಿಯನ್ನು ಆದರಮಾಡುವಳು. ದಾಮಿನಿ ಯನ್ನು ಆವ ಬಗೆಯಾಗಿ ರಮೇಶನು ಆದರಮಾಡುವನೋ, ಅದರ ವಿಚಾರವನ್ನು ಕುಳಿತಲ್ಲಿಯೆ ಭಾವಿಸಿಕೊಳ್ಳುವಳು.