ಪುಟ:ದಾಮಿನಿ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಾಮಿನಿ.

  • * * *

.w \, - • • • • • • • • • • • • ಚತುರ್ಥ ಪರಿಚ್ಛೇದ. ಇ>##- ಬೆಳಗಾಯಿತು. ರಮೇಶನ ತಂದೆಯಾದ ಅದಿತಿವಿಶಾರದನು ನಾಮಾವಳಿಯನ್ನು ಹೊದೆದುಕೊಂಡು ಹೊರಗೆ ಚಾವಡಿಗೆ ಬಂದನು. ಇನ್ನೂ ಸಂಧ್ಯಾವಂದನೆಯಾಗಿ ರಲಿಲ್ಲ, ದಾಮಿನಿಯಿಲ್ಲ;-ಸಂಧ್ಯಾವಂದನೆಯ ಸಾಮಗ್ರಿಗಳನ್ನು ಇನ್ನಾರು ಒದ ಗಿಸಿಕೊಡುವರು? ವಿಶಾರದನು ಅತ್ಯಂತವಿಮರ್ಷಭಾವದಿಂದ ಒಬ್ಬನೇ ಕುಳಿತಿ ದ್ದನು. ಕ್ರಮಕ್ರಮವಾಗಿ ನೆರೆಕರೆಯವರೂ, ಗ್ರಾಮಸಿವಾಸಿಗಳೂ, ಆತ್ಮೀಯಬಂಧು ವರ್ಗದವರೂ, ತಮ್ಮತಮ್ಮ ಆತ್ಮೀಯತೆಯನ್ನು ತೋರಪಡಿಸುವುದಕ್ಕೆಂದು ಒಬ್ಬೊಬ್ಬ ರಾಗಿ ಬರಲಾರಂಭಿಸಿದರು. ಬಂದವರಲ್ಲಿ ಕೆಲಬರು- “ಆಹಾ! ಎಂತಹ ವಿಪತ್ತು! ಎಂತಹ ವಿಪತ್ತು! – ಎಂದೂ, ಕೆಲಬರು-“ಯಾವಾಗ ಯಾರಿಗೆ ಏನು ಸಂಭವಿಸು ವದೋ, ಯಾರು ಹೇಳಬಲ್ಲರು?” ಎಂದೂ, ಮತ್ತೆ ಕೆಲಬರು-“ಎಲ್ಲಕ್ಕೂ ಅದ್ಭ ಷ್ಟವೇ ಮೂಲ! ಅವನವನ ಅದೃಷ್ಟಕ್ಕೆ ಅನುಗುಣವಾಗಿಯೇ ಎಲ್ಲವೂ ನಡೆವುದು!' -- ಎಂದೂ ಬಗೆಬಗೆಯಾಗಿ ಹೇಳತೊಡಗಿದರು. ಅದಿತಿವಿಶಾರದನು ಇದೊಂದ ಕ್ಕೂ ಉತ್ತರವನ್ನೇ ಕೊಡದಿರುವುದನ್ನು ನೋಡಿ ಆ ಜನಸಮೂಹದಲ್ಲಿದ್ದ ಗಣೇಶ ಚಂದ್ರನೆಂಬ ಮಧ್ಯವಯಸ್ತನೂ ಸೂಲಶರೀರನೂ ಆದ ಪ್ರತಿವಾಸಿಯೊಬ್ಬನು ಅದಿ ತಿಯನ್ನು ಕುರಿತು ಇದರ ಸೂಚನವಾವುದೂ ಮೊದಲೇ ಇರಲಿಲ್ಲವೆ? ಎಂದರೆ, ಮೊದಲು ತಮಗೆ ಇದಾವ ವಿಷಯವೂ ಗೊತ್ತಾಗಿರಲಿಲ್ಲವೆ ಏನು?” – ಎಂದನು. ಅದಿತಿಯು ಮೆಲ್ಲ ಮೆಲ್ಲನೆ ನಿಶ್ವಾಸವನ್ನು ಪರಿತ್ಯಾಗಮಾಡಿ,-- “ಅಣ್ಣ! ಮೊದಲೇ ಗೊತ್ತಿದ್ದರೆ, ಈ ರೀತಿಯಾಗುತ್ತಿತ್ತೆ? ರಮೇಶನನ್ನು ವಿದೇಶಕ್ಕಾದರೂ ಏತಕ್ಕೆ ಕಳಿಸಿ ಕೊಟ್ಟೆನೋ? ಈ ರಾತ್ರಿ ರಮೇಶನಿದ್ದಿದ್ದರೆ, ಸೃಗಾಲಗಳಿಗೆ ಸಿಂಹದ ಗುಹೆಯನ್ನು ಪ್ರವೇಶಮಾಡುವುದು ಸಾಧ್ಯವಾಗುತ್ತಿದ್ದಿತೇನು?”... ಎಂದನು. , ಗಣೇಶ: – “ಅಹುದೆ? ಇಂತಹ ವೇಳೆಯಲ್ಲಿ ರಮೇಶನಿಂದಾದರೂ ಪ್ರಯೋ ಜನವೇನು? ನಾವೇ ತಮ್ಮ ಸೊಸೆಯನ್ನು ಉಳಿಸಬಹುದಾಗಿದ್ದಿತು. ಆದರೆ, ಏನು ಮಾಡುವ ಎಲ್ಲ ಸಮಯಗಳಲ್ಲಿ ಯೂ ಸಾಹಸವಿರುವುದಿಲ್ಲ, ಯವನರು ಸುಮಾರು ಇಪ್ಪತ್ತು ಮಂದಿ; ನಾನೊ? ಒಂಟೆಗನು. ಆದರೂ ಚಿಂತೆಯಿಲ್ಲವೆಂದರೆ, ನಾನು ಹೊರಗಣ ಕೋಣೆಯಲ್ಲಿ ಮಲಗಿದ್ದರೆ ಆಗುತ್ತಿತ್ತು; ಏನಾದರೊಂದು ಮಾಡಿ ಬಿಡುತ್ತಿದ್ದೆನು. ಆದರೆ, ತಮ್ಮ ದೌರ್ಭಾಗ್ಯದಿಂದಲೋ, - ಅಥವಾ ರಮೇಶನ ದುರ ದೃಷ್ಟದಿಂದಲೋ, ಏನೋ, - ನಾನು ಆ ಸಮಯದಲ್ಲಿ ಒಳಗೇ ಮಲಗಿಬಿಟ್ಟಿದ್ದೆನು. ಮಲಗಿದ ಮೇಲೆ ಫಕ್ಕನೆ ಏಳುವುದಕ್ಕೆ ಬರುವುದಿಲ್ಲ; ಆದರೂ, ಆಕೆ ಕೂಗಿದ

  • * ಹೆಂಡಿತ್ತಿಯ ಹೆಸರನ್ನು ಹೇಳದಿರುವುದು ಪೂರ್ವಸಂಪ್ರ ದಾಯದವರ ಪದ್ಧತಿ.