ಪುಟ:ದಾಮಿನಿ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

14 ಶ್ರೀಕೃಷ್ಣ ಸೂಕ್ತಿ ಮುಕ್ತಾವಳಿ. • , , , , , , , ,

  • * * - *
  • */* ** * * * * * * *

- - * = ? ಮೇಲೆ ಎದ್ದೆನು; ಒಳ್ಳೆಯ ಬಟ್ಟೆಗಳನ್ನು ಹಾಕಿಕೊಂಡು, ಇನ್ನೇನು?- ಹೊರಡ ಬೇಕೆಂದು ಯೋಚಿಸಿ, ಆ ಕತ್ತಲೆಯಲ್ಲಿಯೂ ನಸ್ಯದ ಡಬ್ಬಿಯನ್ನು ಹುಡುಕಿ ತೆಗೆದು, ಒಂದು ಚಿಟಿಕೆಯ ನಸ್ಯವನ್ನು ಅಭ್ಯಾಸವಿಲ್ಲದಿದ್ದರೂ ಮೂಗಿಗೆ ಏರಿಸಿದೆನು, ಇಂತಹ ಕಾರ್ಯಗಳಲ್ಲಿ ಯೆಲ್ಲ ನಸ್ಯವಿಲ್ಲದಿದ್ದರೆ, ಆಗುವುದೇ ಇಲ್ಲ. ಆ ಮೇಲೆ ನೋಡಿ ದೆನು;--ಮೆಯ್ಯಲ್ಲಿ ಬೆಮರಾಗಿದ್ದಿತು; ಬೆವರಿನಿಂದ ಸರ್ವಾಂಗವೂ ತೊಯ್ದು ಹೋಗಿದ್ದಿತು, ಈ ಎಲ್ಲ ಕಾರ್ಯಗಳಿಗೂ ಬೆಮರುವುದು ಒಳ್ಳೆಯದಲ್ಲ;- ಆ ಮೇಲೆ ಆ ಯವನರು ಹಿಂದಿರುಗಿ ಓಡಿಹೋದರೆ? - ಏನು ಮಾಡಲಿ? ಎಂದಾಲೋಚಿಸಿ, ಗಾತ್ರಮಾರ್ಜನಿಯನ್ನು ತೆಗೆದುಕೊಂಡು, ವಿಲಕ್ಷಣವಾಗಿ ಮೆಯ್ಯನ್ನೊರಸಿಕೊಂಡೆ ನು. ಎಲ್ಲ ವಿಚಾರಗಳೂ ಒಮ್ಮೊಟ್ಟಿಗೆ ನೆನಪಾಗುವುದಿಲ್ಲ! ಮೆಯ್ಯನ್ನೂ ರಸಿಕೊಂಡ ಮೇಲೆ ಅಸ್ತದ ನೆನಪಾಯಿತು, ಅಸ್ಯವಿಲ್ಲದೆ ಹೋಗಿ ಮಾಡುವದೇನು? ಬಡಿ ಗೋಲನ್ನು ತಂದುಕೊಡೆಂದು ಆಕೆಗೆ ಹೇಳಿದೆನು, ಅವಳು ತರುವಳೆ? ಅದರಿಂದ ಕೆಲಸವಿಲ್ಲವೆಂದು ಹೇಳಿಬಿಟ್ಟಳು. ಕೊನೆಗೆ, ಒಂದು ಮಗು, - -ಆ ನನ್ನ ಏಳನೆಯ ಮಗು-ಒಂದು ಇಟ್ಟಿಗೆಯನ್ನು ತಂದುಕೊಟ್ಟಿತು. ಅದನ್ನು ತೆಗೆದುಕೊಂಡು, ಬಿಸಿಲು ಮಾಳಿಗೆಯ ಮೇಲೆ ಹತ್ತಿ, ನೋಡುತ್ತೇನೆ;- ಏನನ್ನು ನೋಡುವುದು? ದುವ್ಯತ್ಯರೆಲ್ಲ ರೂ ಆಗಲೇ ಹಿಂದಿರುಗಿಹೋಗುತ್ತಿದ್ದಾರೆ. ಇನ್ನು ಇಟ್ಟಿಗೆಯಿಂದ ಫಲವೇನೆಂದು, ಅದನ್ನು ಹಾಗೆಯೇ ಎಸೆದುಬಿಟ್ಟೆನು.”- ಗಣೇಶಚಂದ್ರನು ಈ ಪರಿಯಾಗಿ ಆತ್ಮಶೌರ್ಯವನ್ನು ಪರಿಚಯಮಾಡಿಕೊಡು ತಿದ್ದನು. ಆ ವೇಳೆಗೆ ಒಕ್ಕಲಿಗನೊಬ್ಬನು ಅಲ್ಲಿಗೆ ಬಂದು, ವರ್ತಮಾನಕೊಟ್ಟನು: -- 'ಫೌಜುದಾರ'ನ ಮಗನು ಮಾರ್ಗದಲ್ಲಿಯೆ ಸತ್ತು ಬಿದ್ದಿದ್ದಾನೆ; ಹೊಡೆದವರಾ ರೆಂಬುದು ಇನ್ನೂ ಗೊತ್ತಾಗಿಲ್ಲ.” ಅತ್ಯಾನಂದದಿಂದ ಗಣೇಶಚಂದ್ರನು- “ಹಾಗಾದರೆ, ಸರಿ! ನಾನೇ, ನನ್ನ ಇಟ್ಟಿಗೆಯೇಟಿನಿಂದಲೇ ಅವನಿಗೆ ಮರಣ! ನಿಜವಾಗಿಯೂ ಹೇಳುತ್ತೇನೆ;•ಯವನ ನನ್ನು ನಾನೇ ಕೊಂದೆನು, ನನ್ನ ಗುರಿಯೆಂದರೆ ಏನು? ಸಾಮಾನ್ಯವೇ?” ಎಂದನು. ಇನ್ನೊಬ್ಬನು ಸ್ವಲ್ಪ ನಕ್ಕು,-“ಅಂತಹ ಮಾತನ್ನು ಆಡುವುದೇ ಒಳ್ಳೆದಲ್ಲ. ಸತ್ತವನು 'ಫೌಜುದಾರ'ನ ಏಕಮಾತ್ರ ಪುತ್ರನು, ಅಂತಹ ಮಗನನ್ನು ಆವನು ಕೊಂದಿರುವನೋ ಅವನ ಅದೃಷ್ಟದಲ್ಲಿ ಶೂಲವೇ ಬರೆದಿರುವುದು!”-ಎಂದನು. ಈ ಬಾರಿ ಭಯದಿಂದ ಗಣೇಶನು ನಡುಗಿದನು. ಕಂಪಿತಸ್ವರದಿಂದ ಮೆಲ್ಲ ಮೆಲ್ಲನೆ ಹೇಳತೊಡಗಿದನು: “ನಿಜವಾಗಿಯೂ ಇದುವರೆಗೂ ಹಾಸ್ಯವಾಡುತ್ತಿದ್ದೆ