ಪುಟ:ದಾಮಿನಿ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಕೃಷ್ಣ ಸೂಕ್ತಿ ಮುಕ್ತಾವಳಿ. YYYYY••••

  • * * * * * **ww' !

ದ್ದೇನೆ; ಇನ್ನೆಂದಿಗೂ ನಿನ್ನನ್ನು ಬಿಟ್ಟಿರುವುದಿಲ್ಲ!”- ಎಂದು ಹೇಳಿ, ಅಳತೊಡಗಿದನು. - ದಾಮಿನಿಯಾವ ಉತ್ತರವನ್ನೂ ಕೊಡಲಿಲ್ಲ. ರಮೇಶನು ನೆಲದ ಮೇಲೆ ಬಿದ್ದು ಹೊರಳಾಡುತ್ತೆ, ಚೀತ್ಕಾರಮಾಡತೊಡಗಿದನು- “ಈ ಬಾರಿ ಮಾತನಾಡು. ನಿನ್ನ ಆ ಮಾತುಕತೆಗಳನ್ನು ಎಷ್ಟೋ ದಿನಗಳಿಂದ ಕೇಳಲಿಲ್ಲ; ದಾಮಿನಿ! ಈ ಬಾರಿ ಯಾದರೂ ಮಾತನಾಡು!” ಎಂದು ಗೋಳಿಡತೊಡಗಿದನು, ಆಗಲೂ ಉತರ ವಿಲ್ಲ;-ಎಲ್ಲವೂ ನಿಶ್ಯಬ್ದ ! ರಮೇಶನಿಗೆ ಸ್ವಲ್ಪ ಮಾತ್ರ ಏನೋ ಗೊತ್ತಾಯಿತು. ರುದ್ದ ಶ್ವಾಸದಿಂದ ಹಳ್ಳಿಗೆ ಓಡಿ ದೀಪವನ್ನು ರಿಸಲು ಬೇಕಾದ ಸಾಮಗ್ರಿಗಳನ್ನು ತೆಗೆ ದುಕೊಂಡು ಬಂದು, ದೀವಿಗೆಯನ್ನು ಹಚ್ಚಿದನು. ಬೆಳಕಿನಲ್ಲಿ ನೋಡಿದನು; ಅಲ್ಲಿ ಯೆ ಇನ್ನಾರೋ ವೃದ್ಧೆಯೊಬ್ಬಳು ಕುಳಿತುಕೊಂಡು, ದಾಮಿನಿಯ ಮುಖವನ್ನು ನಟ್ಟ ದೃಷ್ಟಿಯಿಂದ ನೋಡುತ್ತಿದ್ದಳು. ದಾಮಿನಿಯು ಈ ಜನ್ಮದಲ್ಲಿ ಕಣ್ಣುಮು ಚ್ಚಿದ್ದಳು. - ರಮೇಶನನ್ನು ನೋಡಿ, ವೃದ್ದೆಯು ನಕ್ಕಳು. ಭಯಂಕರವಾದ ಆ ನಗೆಯ ನ್ನು ನೋಡಿ, ರಮೇಶನ ಮೆಯೂ ರೋಮಾಂಚಿತವಾಯ್ತು : ವೃದ್ದೆ ಯು ಎದ್ದಳು. ಎದ್ದು ನಿಂದು, ರಮೇಶನ ಮುಖವನ್ನು ಏಕದೃಷ್ಟಿಯಿಂದ ನೋಡತೊಡಗಿದಳು. ರಮೇಶನು ಗುರುತಿಸಿದನು;- ಅವಳೇ ಆ ಪೂರ್ವಪರಿಚಿತೆಯಾದ ಉನ್ಮಾದಿನಿ! ಉನ್ಮಾದಿನಿಯು ಒಂದು ಬಾರಿ ತುಟಿಯ ಮೇಲೆ ಬೆರಳನ್ನಿಟ್ಟು,- “ಸುಮ್ಮ ನಿರು! ಶಬ್ದ ಮಾಡಬೇಡ. ನನ್ನ ದಾಮಿನಿಯು ನಿದ್ದೆ ಮಾಡುತ್ತಿದ್ದಾಳೆ;-ನಿದ್ದೆ ಮಾಡು ತಿದ್ದಾಳೆ!” – ಎಂದಳು. ಒಡನೆಯೆ, ಮತ್ತೊಂದು ಬಾರಿ ವಿಕಟವಾದ ನಗುವನ್ನು ನಕ್ಕು, ರಮೇಶನ ಮೇಲೆ ಬಿದ್ದು, ಅವನ ಕೊರಲನ್ನು ವಜ್ರಾಯುಧದಂತೆ ಗಟ್ಟಿ ಯಾಗಿ ಒತ್ತಿ ಹಿಡಿದು, – “ ಗೊತ್ತಾಯಿತು' ನೀನೇ ರಮೇಶನು, ನಿನ್ನ ದೆಸೆಯಿಂದ ಲೇ ನನ್ನ ದಾಮಿನಿಯು ಮರಣಪಟ್ಟುದು!” - ಎಂದಳು. - ರಮೇಶನಿಗೆ ಶ್ವಾಸರೋಧವಾಯ್ತು; ಕಣ್ಣ ನರಗಳೆಲ್ಲವೂ ಮೇಲಕ್ಕೆ ಉಬ್ಬಿ ದುವು, ಅವನಿಗೆ ಮಾತಿಲ್ಲ; ಶಕ್ತಿಯಿಲ್ಲ, ಕೊನೆಗೆ ಅವಸನ್ನನಾಗಿ ದಾಮಿನಿಯ ಬಳಿಯಲ್ಲಿಯೆ ಬಿದ್ದು ಬಿಟ್ಟನು, ಹುಚ್ಚಿಯು ಮತ್ತೊಮ್ಮೆ ರಮೇಶನ ಕತ್ತನ್ನು ಒತ್ತಿ ಹಿಡಿದಳು, ಈ ಬಾರಿಗೆ ಎಲ್ಲವೂ ಮುಗಿಯಿತು! %%%XXX 9 ಯೋ ಅಲ್ಲಿ

(ಪ9999999 ಸಂಪಾಣಿನಿ ಇಣೆ Printed by U, N, Mallya, at the Sadananda Printing Works Co., Ltd., ೮dipi°