ಪುಟ:ನಡೆದದ್ದೇ ದಾರಿ.pdf/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕೊನೆಯ ದಾರಿ } ಹೊರಟು ಹೋದವನು ೧೩೫ ಅವನಿಗೆ ಸಿಟ್ಟು ಬರುವುದಿಲ್ಲ. ಅವನ ಗೆಳೆಯರೊಂದಿಗೆ ತಿರುಗಿದರೂ ಅವನು ಏನೂ ಅನ್ನುವುದಿಲ್ಲ. ಆ ಗೆಳೆಯರ ಹೆಂಡಂದಿರಿಗೆಲ್ಲ ಮಾತ್ರ ತನ್ನ ಮೇಲೆ ವಿಪರೀತ ಸಿಟ್ಟುಆಸೂಯೆ. ಅವರೆಲ್ಲ ಕೂಡಿದಾಗ ಮರೆಯದೆ ಚರ್ಚಿಸುವ, ದೂಷಿಸುವ ವಸ್ತು ತಾನು. ಹೈು : ಗಂಡಂದಿರ ಮೇಲೆ ನಂಬಿಕೆಯಿರದ ದುರ್ದೈವೀ ಹೆಂಡಂದಿರು ಸುಂದರಿಯರಾದ ಇತರ ಹೆಂಗಸರನ್ನು ದೂಷಿಸುವುದರಿಂದಲ್ಲದೆ ಹೋದರೆ ಇನ್ನಾವುದರಿಂದ ತೃಪ್ತಿ ಹೊಂದಬೇಕು ? ಎಲ್ಲ ಕೇಳಿ, ಎಲ್ಲ ನೋಡಿ, “ನಿನ್ನ ಮೇಲೆ ವಿಶ್ವಾಸವಿದೆ' ಅನ್ನುವ ಸತೀಶನನ್ನು ಎತ್ತಿ ಅವನ ಫ್ಯಾಕ್ಟರಿಯೊಳಗಿನ ಬೆಂಕಿಯುಗುಳುವ ಬಂಬಿನಲ್ಲಿ ಹಾಕಬೇಕು ಅನ್ನಿಸುವುದು.... - ಆದರೆ ಬಹುಶಃ ಇದರಲ್ಲಿ ಅವನ ತಪ್ಪಿಲ್ಲ, ಅವನಿಗೆ ತನ್ನ ಹೆಂಡತಿಯ ಬಗೆಗಿನ ಸತ್ಯವನ್ನು ಅರಿತು ಎದುರಿಸುವ ಧೈಯ್ಯವಿರಲಾರದು ; ಅಂತೆಯೆ ಅವಳ ತಪ್ಪನ್ನು ತಾನು ಕ್ಷಮಿಸಿದ್ದೇನೆಂದುಕೊಂಡು, ಇಷ್ಟೆಲ್ಲ ಆದರೂ ಅವಳನ್ನು ಬಿಡದೆ ಪ್ರೀತಿಸುತ್ತಿರುವೆನೆಂದುಕೊಂಡು, ಅವಳಿಗಾಗಿಯೇ ಅವಳೊಂದಿಗಿದ್ದು ಅವಳನ್ನು ಜಗತ್ತಿನ ಎಲ್ಲ ದುಃಖ-ಕಷ್ಟಗಳಿಂದ ಕಾಯುತ್ತಿರುವೆನೆಂದುಕೊಂಡು, ಅವಳಿಗಾಗಿ ತ್ಯಾಗ ಮಾಡುತ್ತಿರುವೆನೆಂದುಕೊಂಡು ಸಮಾಧಾನದಿಂದಿದ್ದಾನೆ ಅವನು. ಹೈ-ತ್ಯಾಗ, ಪ್ರೀತಿಸುವ ವ್ಯಕ್ತಿಯಲ್ಲಿ ನಂಬಿಕೆಯಿದ್ದಾಗ ಮಾಡುವ ತ್ಯಾಗಕ್ಕಿಂತಲೂ, ನಂಬಿಕೆಯಿಲ್ಲದೇ ಬರೇ ಪ್ರೀತಿಗಾಗಿ ಮಾಡುವ ತ್ಯಾಗ ದೊಡ್ಡದೆಂದು ಹಿಂದೆಂದೋ ಕೇಳಿದ ನೆನಪು. ಸತೀಶನಿಗೆ ತನ್ನಲ್ಲಿ ನಂಬಿಕೆಯಿಲ್ಲವೆಂದು ತನಗೆ ಗೊತ್ತಿದೆ. ಹಾಗಾದರೆ ಪ್ರೀತಿಯಿರಬಹುದೇ ? ಯಾಕೊ ಇಷ್ಟು ವರ್ಷಗಳ ನಂತರ ಒಮ್ಮೆಲೆ ಅವನ ಬಗ್ಗೆ 'ಪಾಪ !" ಅನಿಸುತ್ತಲಿದೆ.... ಬೆಳಗು, ಮಿರಜ ಸ್ಟೇಶನ್ ಬಂತು. ಚಹಾ-ಕಾಫಿ-ವಡೆಗಳ ಧಾಂದಲೆ.... - - 'ಅಷ್ಟದೂರದಿಂದ ಇಷ್ಟೆಲ್ಲಾ ತ್ರಾಸು ಸಹನ ಮಾಡಿಕೊಂಡು ನೀ ಒಬ್ಯಾಕಿ ನೋಡವಾ ಇಲ್ಲೀ ತನಕಾ ಬಂದು ನಮ್ಮನ್ನ ನೋಡೂವಾಕಿ. ಉಳಿದ ಆಕ್ಕಾ-ತಂಗೇರು ಲಗ್ವಾದಕೂಡಲೆ ತವರಮನಿ ಮರತಬಿಟ್ಟಾರ. ನೀ ಮಾತ್ರ ಸ್ವಲ್ಕೂ ಬದಲಾಗಿಲ್ಲ. ಅವ್ವಾ-ಅಪ್ಪಾ ತೀರಿಕೊಂಡ ಮ್ಯಾಲೂ ನಿನಗ ತವರಮನೀ ಮ್ಯಾಲಿನ ಪ್ರೀತಿ ಹಾಂಗ ಆದ. ತಪ್ಪದ ಬಂದು ಬೆಟ್ಟಿ ಆಗತೀ.' – ಅನ್ನುತ್ತಾನೆ ಹುಬ್ಬಳ್ಳಿಯಲ್ಲಿಯ ತಮ್ಮ, ತಾನು ಅಲ್ಲಿಗೆ ಹೋದ ಪ್ರತಿಸಲ. ಅವನ ಹೆಂಡತಿ ಮನೆತುಂಬ ಓಡಾಡಿ ಸಿಹಿತಿಂಡಿ ಮಾಡುತ್ತಾಳೆ. ಮಧ್ಯಾಹ್ನ ಊಟ ಮುಗಿಸಿ ಅಡ್ಡಾದಾಗ ಮೆಲ್ಲನೆ ಹೇಳುತ್ತಾಳೆ, “ನಮ್ಮ ಸುಶೀಗೆ ಪರಕಾರ ಹರದುಹೋಗ್ಯಾವ ನೋಡಿದ್ರೆಲಾ ವೈನ್, ಹ್ಯಾಂಗೂ