ಪುಟ:ನಡೆದದ್ದೇ ದಾರಿ.pdf/೩೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಧೈರ್ಯದ ಮನುಷೈ

   ೧೯೪೫ರ ಕೊನೆಯ ತಿ೦ಗಳುಗಳು.ಕೆಲವಾರು ವರ್ಷಕಾಲ ಭೀಕರವಾಗಿ ನಡೆಯುತ್ತಲಿದ್ಡ ಎರಡನೆಯ ಮಹಾಯುದ್ದವೂ,ಹಿರೋಶಿಮಾ-ನಾಗಾಸಾಕಿ ನಗರಗಳ ಮೇಲೆ ಆಮೇರಿಕೆ ಬಾ೦ಬು ಹಾಕಿದ ಕೂಡಲೆ,ಆನಿರೀಕ್ಷಿತವಾಗಿ ಒಮ್ಮೆಲೆ ಮುಕ್ತಾಯದ ಹ೦ತಕ್ಕೆ ಬ೦ದಿತ್ತು.ನಮ್ಮ ರೆಜಿಮೆ೦ಟು ಆಗ ಮಲಯಾದಲ್ಲಿತ್ತು.ಬರ್ಮಾ,ಸಿ೦ಗಾಪೂರ,ಫ್ರೆ೦ಚ್ ಇ೦ಡೋಚಾಯನಾ,ಮಲಯಾ ಇತ್ಯದಿಗಳಲ್ಲೆಲ್ಲ ಜಪಾನಿ ಪಡೆಗಳು ಶರಣಾದವು.ಯುದ್ದ ಮುಗಿಯಿತೆ೦ದು ಮಿತ್ರ್ ರಾಷ್ಟ್ರಗಳು ಸಾರಿದವು.ಆದರೆ ಆಧಿಕೃತವಾಗಿ ಯುದ್ದವು ಕೊನೆಗೊ೦ಡಿತೆ೦ದು ಉಭಯ ಪಕ್ಷಗಳು ಹೇಳಿಕೆ ಕೊಟ್ಟರೂ ಜಾವಾ,ಸುಮಾತ್ರಾ,ಬೋರ್ನಿಯೊ ಇತ್ಯಾದಿ ಒಳಪ್ರದೇಶಗಳಲ್ಲಿ ಜಪಾನೀಯರ ಜೊತೆಗೆ ನಮ್ಮ ಹೋರಾಟವಿನ್ನೂ ಸಾಗಿಯೇ ಇತ್ತು.ಆವರೆಲ್ಲ 'ಶಿಂಟೋಯಿಜಮ್'ನ ಕಟ್ಟಾಪಾಲಕರಾಗಿದ್ದರು.ಆವರ ನ೦ಬಿಕೆಯ ಪ್ರಕಾರ ಯಾವುದೇ ಯುದ್ದದ ಆ೦ತ್ಯಕ್ಕೆ ಎರಡೇ ಎರಡು ಸಾಧ್ಯತೆಗಳಿದ್ದವು;ಒ೦ದೋ ಆವರು ವಿಜಯಿಗಬೇಕು,ಇಲ್ಲವೆ,ಹೋರಾಡುತ್ತಲೇ ಸಯಬೇಕು.ಹೀಗಾಗಿ ಜಪಾನವು ಶರಣಾಗಿದೆಯೆ೦ದು ನಮ್ಮ ಪಡೆಗಳು ವಾಯರ್ಲೆಸ್ ಮೂಲಕ ಹೇಳಿದರು ಆವರು ನ೦ಬಲಿಲ್ಲ.ಕೊನೆಗೆ ಜಪಾನಿನ ಆರಸು ಹಿರೊಹಿಟೋ ಸ್ವತಃ ರೇಡಿಯೋನ ಮೂಲಕ ಆವರಿಗೆಲ್ಲ ಶರಣಾಗಲು ಆಜ್ಞಪಿಸಿದ.ಆದರೂ ಆವರು ಇದೇನೋ ಮಿತ್ರ ರಾಷ್ಟ್ರಗಳ ಕುತ೦ತ್ರವಿರಬೇಕು,ಆದು ತಮ್ಮ ಆರಸನ ಧ್ವನಿಯಾಗಿರಲಾದು,ಆತನೆ೦ದು ಹಾಗೆ ಹೇಳಲು ಶಕ್ಯವಿಲ್ಲ,ಎ೦ದೇ ನ೦ಬಿ ಹೋರಾಟ ಮು೦ದುವರಿಸಿದರು,ಹೀಗಾಗಿ ಆವರನ್ನೆಲ್ಲ ಫ್ಲಶ್ ಜೌಟ್ ಮಾಡಲು ನಮ್ಮ ಪಡೆಗಳು ಕಾರ್ಯಪ್ರವೃತ್ತವಾದವು.ನೇರ ಯುದ್ಧಕ್ಕಿ೦ತ ಇದು ಕಷ್ಟದಾಯಕವಾದ ಕೆಲಸವಾಗಿತ್ತು.ಯಾಕ೦ದರೆ ಜಾವಾ-ಸುಮಾತ್ರಾಗಳ ದಟ್ಟ ಕಾಡುಗಳಲ್ಲಿ ಸೇರಿಕೊ೦ಡ ಆಳಿದುಳಿದ ಜಪಾನೀಯರನ್ನು ಹುಡುಕುವುದು ಹಾಗೂ ಎದುರಿಸುವುದೆ೦ದರೆ ಸಾವಿನ ಗವಿಯನ್ನು ಹೊಕ್ಕ೦ತೆಯೇ ಎ೦ದು ನಮಗೆಲ್ಲ ಗೊತ್ತಿತ್ತು.ಆದರೂ ನಮ್ಮಲ್ಲಿ ಆನೇಕರು ಜೀವದ ಹ೦ಗುದೊರೆದು ಆಸಾಧಾರಣ ೦ದ ಈ ಕೆಲಸ ಮಾಡಿ ಬ್ರಿಟಿಶ್ ಮೇಲಧಿಕಾರಿಗಳ ಮೆಚ್ಚುಗೆ ಪಡೆದರು.ಹಾಗೆ ಸುಮಾತ್ರಾದ ರಜಧಾನಿ ಮೆಡಾನ್ ನಗರವನ್ನು ಜಪಾನಿ