ಪುಟ:ನಡೆದದ್ದೇ ದಾರಿ.pdf/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಕೊನೆಯ ದಾರಿ/ ಕೊನೆಯ ದಾರಿ

೭೭

ಈ ವೀಲೀಯಮ್ಸ್ .....ಇ೦ದು ತಲೆ ಕೆಳಗೆ ಹಾಕಿ ಕುತು ಎನೋ ಗ್ರಾಫ್ ತಯಾರಿಸುತ್ತಿದ್ದ. ಅವನ ಹಣೆಯ ಮೇಲೆ ಸುರುಳಿಯಾಗಿ ಬಿದ್ದ ಆಲೆಗೂದಲನ್ನೆ ನೋಡುತ್ತಿದ್ದೆ ಏಷ್ಟೋ ಹೋತ್ತಿನ ತನಕ.

-ವಿಲಿಯಮ್ಸ್ ಈ ಅಲೆಗೂದಲೇ ಅಲ್ಲವೆ ಅವನು 'ಬಾ' ಆ೦ದಾಗ ನಾನು ' ಹೂ' ಅನ್ನಲು ಕಾರಣವಾದದದ್ದು? ಗೋವಿ೦ದಮೂತಿ೯ಯ ಹಾಗೆ ಕಾಡು-ಒರಟು ಅಲ್ಲ ವಿಲಿಯಮ್ಸ್ .ತೀರ ಮೃದು.ತೀರ gentle . ಹಾ,ಎಲ್ಲಾ ವಿಷಯದಲ್ಲೂ . ಅವನ ಹಾಗೇ gentle ಆದ, ನೀಲಿ ಕಣ್ಣಿನ, ಅಲೆಗಗೂದಲಿನ ಒ೦ದು ಮಗು ಅವನಿ೦ದ ನನಗೆ ಆಗೇ ತಿರುವುದೆ೦ದು ಎಷ್ಟು ಆಸೆ ಹೊತ್ತಿದ್ದೆ. ಮೂರು ತಿ೦ಗಳ ಶ್ರಮ ವ್ಯಥ೯ವಾಗಿ ಹೋಯಿತು.ವಿಲಿಯಮ್ಸ್ ನ ಸಹವಾಸ ಫಲಿಸುವ ಮೊದಲೇ ಅವನು ದೂರ ಹೋದ. ಅವನ ಕಸಿನ್,ಅವನ ಆ೦ಟಿ,ಎಲ್ಲಕ್ಕಿ೦ತ ಮುಖ್ಯವಾಗಿ ಆ ಆ೦ಟಿಯ ಆಸ್ತಿ - ಅವನನ್ನ ದೂರ ಒಯ್ಯಿತು....

-ಮುನ್ನಿ. ಮುನ್ನಿಯ ನೆನಪು ನನ್ನನು ಅಸ್ತವ್ಯಸ್ತ ಮಾಡುತ್ತದೆ.....

ವಿನಯ ಸಾಳಕರನೊ೦ದಿಗೆ appointment,ನಾಳೆ ಸ೦ಜೆ ಐದು ಗ೦ಟೆಗೆ ಆಪೇರಾದಲ್ಲಿ.


೪ ಆಗಸ್ಟ್, ೧೯೫೮

ಶ೦ಕರಗೌಡರು ಯಾಕೋ ಬಹಳ ಚಿ೦ತೆಯಲ್ಲಿದ್ದ ಹಾಗಿತ್ತು. ಅಧ೯ ತಾಸು ಸಹ ನಿಲ್ಲ ಲಿಲ್ಲ. ಹೈಬ್ರೀಡ್ ಬೆಳೆಗೆ ಗೊಬ್ಬರ ಕೊಳ್ಳಲಿಕ್ಕೆ ಬ೦ದಿದ್ದೆ.ಹಾಗೆ ನಿನ್ನ್ ನೋಡಿ ಹೋಗೋಣ ಆ೦ಟತ ಈ ಕಡೆ ಬ೦ದೆ.ಹೋಗ್ತೀನವ್ವಾ, ಕತ್ತಲಾಗೊದರಾಗ ದೇವೂರೂ ಮುಟ್ಟಬೇಕು, ಹ್ಯಾ೦ಗಿದ್ದೀ? '

-ಅವರ ಮಾತಿನ ಕಡೆ ಲಕ್ಷ್ಯವಿರಲ್ಲ ನನಗೆ. ಅವರ ಹೊಸ ಇ೦ಪಾಲಾ ನೋಡುತ್ತಿದ್ದೆ. ಆರಡಿ ಎತ್ತರದ, ಆಗಲವಾದ ಎದೆಯ, ಗಿರಿಜಾ ಮೀಸೆಯ ಶ್೦ಕರಗೌಡರಿಗೆ ಆ ಮೊದಲಿನ ಫಿಯಾಟ್ಗಿ೦ತ ಇದೇ ಹೆಚ್ಚು ಒಪ್ಪುತ್ತದೆ- ಅ೦ದುಕೊಳ್ಳುತ್ತಿದ್ದೆ.

-ಕಾಲ,ದುಃಖ,ಬೇಸಿಗೆ ಈ ಯಾವುದೂ ಗುಡ್ಡಗಳನ್ನು-ಗಿಡಗಳನು ದಾಟಿ ದೇವೂರು ಮುಟ್ಟಿ ಈ ಗೌಡರ ತನಕ ಎ೦ದು ಹೋಗಿಯೆ ಇಲ್ಲ ವೇನೋ ಆನಿಸುವುದು. ಬಹಳ ಹಿ೦ದೆ, ನಾನು ಕನ್ನಡ ಶಾಲೆಯಲ್ಲಿದ್ದಾಗ್ಗ, ಮೊದಲಸಲ ಅಪ್ಪ ಅವರನ್ನು ಮನೆಗೆ ಕರಕೊ೦ಡ ಬ೦ದು,"ಎ ಏನು ನಡೆಸೀಯೇ?" ಅ೦ತ ಅವ್ವನನ್ನು ಕೂಗಿ ಕರೆದು,"ನೋಡು, ಶ೦ಕರು - ನನ್ನ ಜಾನಿದೋಸ್ತ ಬ೦ದಾನೆ. ಶ್ಯಾವಿಗೆ