ಪುಟ:ನವೋದಯ.pdf/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

327


... ಬಸ್ಸು ಆಗೊಮ್ಮೆ ಈಗೊಮ್ಮೆ ನಿಂತಾಗಲೆಲ್ಲ, ಧೂಳು ಒಳಕ್ಕೆ ನುಗ್ಗುತ್ತಿತ್ತು.
ಆಗ 'ಇಸ್ಸಿಯಪ್ಪ' ಎನ್ನುತಿತ್ತು ಸುನಂದೆಯ ಮನಸ್ಸು. ಮೊದಲ ಸಾರೆ ಧೂಳು
ನುಗ್ಗಿದಾಗಲಂತೂ 'ಈ ಬದೀಲಿ ನಾನು ಕೂತ್ಕೋಬಾರದಾಗಿತ್ತು' ಎನಿಸಿತು ಆಕೆಗೆ.
ಎಳೆಯ ಹುಡುಗರ ಹಾಗೆ ಹೊರಗೆ ನೋಡುತ್ತ ಕುಳಿತಿರದಿದ್ದರೆ ಏನು ಕೊಳ್ಳೆ ಹೋಗುತ್ತಿತ್ತೊ_ಎಂದುಕೊಂಡಳು. ಮರುಕ್ಷಣವೆ, ಸ್ವಾಥ್ರಿ ತಾನು: ಅವರು ಕುಳಿ
ತಿದ್ದರೆ ಅವರಿಗೇ ಧೂಳಿನ ಸ್ನಾನ ಆಗುತಿತ್ತು; ತಾನು ಕುಳಿತು ಅದನ್ನುತಪ್ಪಿಸಿದ
ಹಾಗಾಯಿತು, ಈಗ_ಎಂದು ಸಮಾಧಾನಪಟ್ಟುಕೊಂಡಳು.
ಓಡುತ್ತಿದ್ದ ಮೋಟಾರನ್ನು ಬೆನ್ನಟ್ಟಿ ಬರುತ್ತಿದ್ದ ಸೂರ್ಯ. ಹಿಂದಿನಂತೆಯೇ,
ಹೊರಗೆ ಉರಿ ಹೆಚ್ಚಿದಂತೆ ಒಳಗೆ ಅಸಹನೆ ಹೊಗೆಯಾಡಿತು.
ಯಾರೋ ಒಬ್ಬರು ಕಡ್ಡಿಗೀರಿದರು.ಬೀಡಿಸುಟ್ಟ ವಾಸನೆ ಹೊರಟಿತು.
"ಯಾರ್ರೀ ಅದು? ಆರಿಸ್ರಿ ಬೀಡೀನಾ!"
ಕಂಡಕ್ಟರನ ಧ್ವನಿಯಲ್ಲಿ ದರ್ಪವಿತ್ತು, ಬೇಸರ ನೀಗಲು ಒಂದು ಅವಕಾಶ
ದೊರೆಯಿತು ಜನರಿಗೆ. ಕಂಡಕ್ಟರನ ದೃಷ್ಟಿಯನ್ನೆ ಹಿಂಬಾಲಿಸಿ
ಅವರು, ಹೊಗೆ ಹೊರ
ಟಿದ್ದ ಮೂಲೆಯನ್ನು ಕಂಡರು.
"ಸರ್ಕಾರಿ ಬಸ್ಸಪ್ಪೋ!" ಎಂದ ಇನ್ನೊಬ್ಬ ಯಾವನೋ.
ಕಂಡಕ್ಟರು ಮತ್ತೊಮ್ಮೆ ಗದರಿ ನುಡಿಯುವ ಅಗತ್ಯವೇ ಇಲ್ಲದಂತೆ, ಉರಿಯು
ತ್ತಿದ್ದ ಬೀಡಿಯೊಂದು ಹೊರಬಿದ್ದು ಕಿಡಿ ಹಾರಿಸುತ್ತ ಧೂಳಿನ ಮೋಡದ ಎಡೆಯಲ್ಲಿ
ಮರೆಯಾಯಿತು.
ಬಿಸಿಲು ಬಲವಾಗಿ ಮೈಗಳು ಬೆವರೊಡೆದುವು.
"ಸೆಖೆ!" ಎಂದಳು ಸುನಂದಾ.
ಜಯದೇವನೆಂದ:
"ಬದೀಲಿ ಬಿಸಿಲು ಜಾಸ್ತಿ.ಧೂಳು ಬೇರೆ.ಈಚಗೆ ಕೂತ್ಕೋತೀಯಾ?"
"ಬೇಡಿ!"
ವಯಸ್ಸಾದ ಹೆಂಗಸರಿಬ್ಬರು ಮುಂದೆ ಕುಳಿತಿದ್ದರು. ಎಳೆಯರಿರಲಿಲ್ಲ. ಅಳುವ
ಮಕ್ಕಳಿರಲಿಲ್ಲ. ಅವರ ಕಡೆಯ ಗಂಡಸೊಬ್ಬರು, ಉಣ್ಣೆಯ ಪೋಷಾಕು ಧರಿಸಿ ತಲೆಗೆ
ಜರೀಪೇಟ ಸುತ್ತಿದ್ದ ವ್ಯಕ್ತಿ. ಬೇಗೆ ತಡೆಯಲಾಗದೆ ಅವರು ಕತ್ತೆತ್ತಿ ತಲೆಯನ್ನು
ಅತ್ತಿತ್ತ ಆಡಿಸಿದರು. ಬಳಿಕ ಪಕ್ಕದಲ್ಲಿದ್ದವರನ್ನು ನೋಡಿ ನಸುನಕ್ಕು ಅವರೆಂದರು: "ಈ ಬಸ್ಸುಗಳಿಗೆಲ್ಲ ಫ್ಯಾನು ಹಾಕಿಸ್ಬೇಕಪ್ಪಾ!יי
"ಹೊ ಹ್ಹೋ!"ಎಂಬ ನಗೆಯಷ್ಟೇ ಅವರಿಗೆ ದೊರೆತ ಉತ್ತರ.
ತೂಕಡಿಸಿದಂತಾಗಿ ಸುನಂದಾ ಜಯದೇವನ ಭುಜಕ್ಕೆ ಒರಗಿದಳು.ಆತನ
ಕಣ್ಣುಗಳಿಗೂ ನಿದ್ದೆ ಒತ್ತರಿಸಿಬರುತ್ತಿತ್ತು.
ತಲೆ ಭಾರವಾಗಿ ಮುಂದಕ್ಕೆ ಬಾಗಿದಾಗ ಒಮ್ಮೆಲೆ ಎಚ್ಚರಗೊಂಡ ಜಯದೇವ.