ಪುಟ:ನವೋದಯ.pdf/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

417

ತಿಮ್ಮಯ್ಯ ಒದಗಿಸಿದ್ದರು. ಆದರೆ ಬರಿಯ ಖಂಡನೆಯಿಂದ, ಆಕ್ರೋಶದಿಂದ,
ಪ್ರಯೋಜನವಿತ್ತೆ?
ಆತ ಕೇಳಿದ:
"ಇಷ್ಟಿದ್ದರೂ ನಾವೆಲ್ಲ ಜತೆ ಸೇರ್‍ಕೊಂಡೇ ಕೆಲಸ ಮಾಡ್ಬೇಕಲ್ಲ? ಉದಾಹರಣೆಗೆ
ನಮ್ಮ ಶಾಲೆಯನ್ನೇ ತಗೊಳ್ಳಿ. ನಾವು ಮೂವರೂ ಒಟ್ಟಾಗಿ ಕೆಲಸ ಮಾಡದೆ ಇದ್ರೆ
ಆ ನೂರಾರು ಹುಡುಗರ ಗತಿ ಏನಾಗ್ಬೇಕು?"
“ಈವರೆಗೆ ಆದ ಗತಿಯೇ ಮುಂದಕ್ಕೂ ಆಗುತ್ತೆ."
"ಹಾಗಾದರೆ ನಮ್ಮ ದೇಶವೂ ಅಷ್ಟೆ. ಈಗಿರೋ ಹಾಗೆಯೇ ಮುಂದೆಯೂ
ಇರುತ್ತೆ."
"ಅಲ್ದೆ ಇನ್ನೇನು? ಈ ರಾಷ್ಟ್ರಭಕ್ತರನ್ನ ನಾನು ಬಹಳ ನೋಡಿದೀನಿ. ಪಕ್ಕದ್ಮ
ನೇಲಿ ಒಂದು ಮನುಷ್ಯ ಪ್ರಾಣಿ ಉಪವಾಸ ಬಿದ್ದು ಸಾಯ್ತಿದ್ರೂ 'ಏನಾಯ್ತಪ್ಪಾ
ನಿನೆಗೇಂತ ಕೇಳೋವರಿಲ್ಲ. ಬಾಯಿತೆರೆದರೆ ಮಾತ್ರ, ಮಾರುದ್ದ ದೇಶೋದ್ಧಾರದ
ಭಾಷಣ. ನೀಚ ನನ್ಮಕ್ಳು!"
ಹೊಗೆಯಾಡುತ್ತಿದ್ದ ಜ್ವಾಲಾಮುಖಿ ಆ ಬಡಕಲು ಜೀವ. ಆ ಮೂಳೆಯ
ಹಂದರದೊಳಗೆ ಅಷ್ಟೊಂದು ಬಲವಾದ ಉಗ್ರವಾದ ಭಾವನೆಗಳಿದ್ದುವೆಂದು ಊಹಿಸು
ವುದು ಯಾರಿ೦ದಲೂ ಸಾಧ್ಯವಿರಲಿಲ್ಲ.
ತಿಮ್ಮಯ್ಯ ತಟ್ಟೆಯಲ್ಲಿ ಕೈ ತೊಳೆಯಲು ಒಪ್ಪಲೇ ಇಲ್ಲ. ತಾನೂ ಎದ್ದು
ಜಯದೇವನೂ ಏಳುವಂತೆ ಮಾಡಿದರು. ಮರಳಿ ಕುಳಿತಾಗ ಜಯದೇವ ವಿದ್ಯಾ
ಸುಧಾರಣೆಯ ಮಾತನ್ನೆತ್ತಿದ.
"ಈಗಿನ ಪ್ರಾಥಮಿಕ ಮಾಧ್ಯಮಿಕ, ನಾಲ್ಕು ನಾಲ್ಕು ವರ್ಷ ಸೇರಿಸಿ, ಎಂಟು
ವರ್ಷಗಳ ಪ್ರಾಥಮಿಕ ಶಿಕ್ಷಣ ಇರಬೇಕೂಂತ ಕೊನೇದಾಗಿ ತೀರ್ಮಾನಮಾಡಿದಾರೆ. ಆ
ಮೇಲಿಂದಕ್ಕೆ ಕಾಲೇಜಿನ ಒಂದು ವರ್ಷವನ್ನೂ ಸೇರಿಸಿ ನಾಲ್ಕು ವರ್ಷಗಳ ಸೆಕೆಂಡರಿ
ಶಿಕ್ಷಣ ಅಂತ ಮಾಡ್ತಾರೆ. ಅದು ಮುಗಿಯೋ ಹೊತ್ತಿಗೆ ಹೆಚ್ಚಿನ ಹುಡುಗರು,
ಏನಾದರೂ ಸಂಪಾದನೆ ಮಾಡೋ ಸಾಮರ್ಥ್ಯ ಗಳಿಸಿರ್‍ಬೇಕು. ಅದಾದ್ಮೇಲೆ ಇಷ್ಟ
ಇರೋರಿಗೆ-ದುಡ್ಡಿರೋರಿಗೆ-ಮೂರು ವರ್ಷಗಳ ಕಾಲೇಜು ಶಿಕ್ಷಣ. ಏನನಿಸುತ್ತೆ
ನಿಮಗೆ?"
ತಿಮ್ಮಯ್ಯ ಪಿಳಿಪಿಳಿ ಕಣ್ಣು ಬಿಡುತ್ತ ಹೇಳಿದರು:
"ಏನೂ ಇಲ್ಲ. ಏನನಿಸ್ಬೇಕು? ಯಾರು ಎಂಥ ಸುಧಾರಣೆ ಮಾಡಿದ್ರೆ ಈ ಬಡ
ಉಪಾಧ್ಯಾಯನಿಗೇನ್ರಿ?"
"ಹಾಗಲ್ಲ ತಿಮ್ಮಯ್ಯನವರೆ. ಈಗಿನ ಹಾಗೆ ಬರೇ ಪರೀಕ್ಷೆಗೋಸ್ಕರ ಓದೋದು
ತಪ್ಪಿ, ಮಕ್ಕಳಿಗೆ ಒಳ್ಳೇ ವಿದ್ಯಾಭ್ಯಾಸ ಸಿಗುತ್ತೇಂತ ಅವರ ಅಭಿಪ್ರಾಯ."

53