ಪುಟ:ನವೋದಯ.pdf/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

420

ಸೇತುವೆ

ಯಾಗದೆ ಹ್ಯಾಗಿರ್ಲಿ?”
"ಇನ್ನೊಂದ್ಸಲ ಬರುವಾಗ ನೀವು ಬರೆದಿರೋದನ್ನು ಎಲ್ಲಾ ತಗೊಂಡ್ಬನ್ನಿ."
"ಭೂಮಿ ತಾಯಿಯ ಪಾಲಿಗೆ ಎಷ್ಟೋ ದಿವಸ ಹಿಂದೆಯೇ ಮಳೆ ಬಂದಿದ್ರೂ
ನನ್ನ ಒಣಗಿದ ನೆಲಕ್ಕೆ ನಾಲ್ಕು ಹನಿ ಬಿದ್ದಿರೋದು ಇವತ್ತೇ! ಆಗಲಿ, ಬರ್‍ತೀನಿ_
ತರ್ತೀನಿ."
ತಿಮ್ಮಯ್ಯ ಹೊರಟುಹೋದ ಬಳಿಕ ಜಯದೇವ ಸುನಂದೆಯನ್ನು ಕೇಳಿದ:
"ಹ್ಯಾಗಿದಾನೆ ಮುದ್ದಣ್ಣ?"
"ಪಾಪ! ಮನೆ ಸೇರೋ ಹೊತ್ತಿಗೆ ಎಷ್ಟು ತಡವಾಗುತ್ತೊ ಏನೊ. ಒಂದು
ತುತ್ತು ಊಟ ಮಾಡ್ಕೊಂಡಾದರೂ ಹೋಗೀಂತ ಅನ್ಬಹುದಾಗಿತ್ತು."



೧೦

ಮಳೆಗಾಲ, ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಮೆಯಾಯಿತು. ಜಗಲಿ
ತು೦ಬಾ ಕೊಡೆ, ತಾಳೆಗರಿಯ ಗೊರಬೆಗಳೇ ಆದರೂ ತೋಯ್ದು ಒದ್ದೆಯಾಗಿ ನಡು
ಗುತ್ತ ಬರುತ್ತಿದ್ದವರೇ ಹೆಚ್ಚು.
"ಕಡು ಬೇಸಗೆಯಲ್ಲೂ ಇಂಥ ಮಳೆಯಲ್ಲೂ ರಜಾ ಕೊಡಬೇಕಾದ್ದು ನ್ಯಾಯ.
ಡಿಸೆಂಬರ್ ಜನವರಿಗಳ ರಜಾದಿಂದ ಯಾರಿಗೂ ಯಾವ ಪ್ರಯೋಜನವೂ ಇಲ್ಲ,"
ಎಂದ ಜಯದೇವ, ಪರಿಸ್ಥಿತಿಯನ್ನು ಕಣ್ಣಾರೆ ಕಂಡ ಬಳಿಕ ತನ್ನ ನಿರ್ದಿಷ್ಟ ಅಭಿ
ಪ್ರಾಯವನ್ನು ರೂಪಿಸಿ.
ಸಮೀಪದಲ್ಲಿ ಲಕ್ಕಪ್ಪಗೌಡರಿಲ್ಲದುದನ್ನು ಗಮನಿಸಿ ನಂಜುಂಡಯ್ಯನೆಂದರು:
"ಎಲ್ಲಿಯೋ ಕೂತು ಏನೋ ತೀರ್ಮಾನಮಾಡ್ತಾರೆ, ತೀರಿತು. ಹೇಳುವವರಿಲ್ಲ,
ಕೇಳುವವರಿಲ್ಲ."
ವಾಸ್ತವವಾಗಿ, ಊರ ಪ್ರಮುಖ ಶಂಕರಪ್ಪನವರೂ ನಂಜುಂಡಯ್ಯನವರೂ
ಸರಕಾರಿ ಪಕ್ಷವೇ. ಲಕ್ಕಪ್ಪಗೌಡರೂ ಅದೇ ಪಕ್ಷದವರೇ. ಆದರೆ, ಪಕ್ಷದ ಆವರಣ
ದೊಳಗೆ ಮಾತ್ರ ಇವರ ಜಾತಿಯ ಗುಂಪು ಬೇರೆ; ಅವರ ಜಾತಿಯ ಗುಂಪು ಬೇರೆ.
ಹೊರಗಿನ ಯಾರಾದರೂ ಸರಕಾರಿ ಪಕ್ಷವನ್ನು ಟೀಕಿಸಿದರೆ, ಇವರಿಬ್ಬರೂ ಆತನನ್ನು
ಬಯ್ಯುವವರೇ. ಆದರೆ, ಪಕ್ಷದೊಳಗೆ ಒಬ್ಬ ಏತಿ ಎಂದರೆ ಇನ್ನೊಬ್ಬ ಪ್ರೇತಿ.
ಕನಿಕರಪಡುವಂತಿತ್ತು ನಾಡಿಗೊದಗಿದ ದುರವಸ್ಥೆ ನೋಡಿ.
ಪಾವಿತ್ರ್ಯ ಎಲ್ಲಿತ್ತು?