ಪುಟ:ನವೋದಯ.pdf/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

428

ಸೇತುವೆ

"ಗೊತ್ತಿರುತ್ತೆ. ನಾನದನ್ನ ಅರ್ಧ ಹೇಳ್ತೀನಿ. ನೀನು ಪೂರ್ತಿಮಾಡು."
"ಗೊತ್ತಿದ್ದರೆ ಮಾಡ್ತೀನಿ."
"ಹೂಂ. ಹೇಳ್ಲಾ?"
“ಹೇಳಿ."
“ಗಂಡ ಹೆಂಡಿರ ಜಗಳ_"
“ಉಂಡು ಮಲಗುವ ತನಕ!"


೧೧

ಕರ್ನಾಟಕವಂತೆ! ಕರ್ನಾಟಕ ರಾಜ್ಯಸ್ಥಾಪನೆಯಂತೆ!
ಎಲ್ಲರ ಬಾಯಲ್ಲೂ ಆ ಮಾತೇ. ಪತ್ರಿಕೆಗಳಲ್ಲಿ ರಾಜ್ಯ ಪುನರ್ವಿಂಗಡಣಾ
ಸಮಿತಿಯ ವರದಿ ಪ್ರಕಟವಾಗಿ ಬಿರುಗಾಳಿ ಬೀಸಿತು. ಅಲ್ಲೋಲಕಲ್ಲೋಲವಾಯಿತು
ಮಹಿಷೂರಿನ ಸರೋವರ.
ಆಗುತ್ತಿದ್ದುದು ಏನೆಂದು ಗ್ರಹಿಸಲು ಜಯದೇವ ಶಾಂತನಾಗಿದ್ದು ಪ್ರಯತ್ನಿಸಿದ.
ಆತನ ಕಣ್ಣೆದುರಲ್ಲೆ ಹೊಸ ಇತಿಹಾಸ ರೂಪುಗೊಳ್ಳುತ್ತಿತ್ತು. ಕನ್ನಡ ಮಕ್ಕಳಿಗೊಂದು
ಮನೆ. ಎರಡು ಕೋಟಿ ಕನ್ನಡಿಗರಿಗೆ ತಮ್ಮದೇ ಅದೊಂದು ರಾಜ್ಯ. ನೀರು ನಿಂತು,
ಕೆಟ್ಟು, ದುರ್ವಾಸನೆ ಹೊರಡುತ್ತಿದ್ದ ಕೆರೆಗಿನ್ನು ಹೊಸ ನೀರು. ಸರೋವರವಲ್ಲ,
ಇನ್ನಿದು ಸಾಗರ.
ಲಕ್ಕಪ್ಪಗೌಡರು ಗುಡುಗುತ್ತಲೇ ಶಾಲೆಗೆ ಬಂದರು:
“ಕಲಿಗಾಲ! ಇದು ನಮ್ಮ ರಾಷ್ಟ್ರೀಯ ನಾಯಕತ್ವದ ರಾಜಕೀಯ ದಿವಾಳಿತನ.
ಉಂಟೆ ಎಲ್ಲಾದರೂ? ಮೈಸೂರನ್ನು ನಿರ್ನಾಮಮಾಡುವುದೆಂದರೇನು? ಮಹಾ
ರಾಜರ ಕೂದಲು ಕೊಂಕಲಿ. ರಕ್ತಪಾತವಾದೀತು! ನೋಡ್ಕೊಳ್ಳಿ. ರಕ್ತಪಾತ
ವಾದೀತು! ನಾಲ್ವತ್ತೆರಡರ ಕ್ರಾಂತಿ ಸುಳ್ಳು-ಇದು ಸತ್ಯ."
"ರಾಜಭಕ್ತಿ ನಿಮ್ಮೊಬ್ಬರದೇ ಗುತ್ತಿಗೆ ಅನ್ನೋ ಹಾಗೆ ಮಾತಾಡ್ತೀರಲ್ಲಾ
ಗೌಡರೆ!” ಎಂದರು ನಂಜುಂಡಯ್ಯ, ಬಲು ಸೂಕ್ಷ್ಮವಾಗಿ ತಮ್ಮ ಸಹೋದ್ಯೋಗಿ
ಯನ್ನು ಈಕ್ಷಿಸುತ್ತ.
"ಇದರರ್ಥ ಏನು ಅನ್ನೋದು ನಮಗೆ ಗೊತ್ತಿದೆ ಸಾರ್. ನೀವು ಈ ವಿಷಯ
ಮಾತಾಡ್ಬಾರದು!"
"ಯಾಕಪ್ಪ? ಏನಾಯ್ತು?"
ಮಾತುಕತೆಯ ಹಿನ್ನೆಲೆ ಏನೆಂಬುದನ್ನು ತಿಳಿಯದೆ ಜಯದೇವ, ಗೌಡರ ಧ್ವನಿ