ಪುಟ:ನವೋದಯ.pdf/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

432

ಸೇತುವೆ

"ಇವರು ಯಾರು?"
"ಸಮೀಪದ ಹಳ್ಳೀಲಿದಾರೆ. ಒಬ್ಬ ದೊಡ್ಡ ಜಮೀನ್ಥಾರರು. ಹೆಜ್ಜೆ ಹೆಜ್ಜೆಗೂ
ನಮ್ಮ ಪ್ರಯತ್ನಕೈ ಕಲ್ಲು ಹಾಕ್ತಾ ಬಂದಿರೋದು ಅವರೇನೇ."
"ಇಪ್ಪತ್ತು ಸಾವಿರ ಸಂಗ್ರಹವಾಗುತ್ತೆ ಅಂತೀರಾ?"
"ಧಾರಾಳವಾಗಿ. ಒಂದು ಸಲ ನಾವು ಉತ್ತರ ಕರ್ನಾಟಕಕ್ಕೆ ಪ್ರವಾಸ ಹೋಗಿ
ಬಂದರೆ ಸಾಕು. ನಿಮಗೆ ಗೊತ್ತಿಲ್ಲ ಜಯದೇವ್. ಅಲ್ಲಿಯ ಜನ ಧಾರಾಳಿಗಳು."
"ಸಂತೋಷ ಸಾರ್. ಒಟ್ಟಿನಲ್ಲಿ ಹೈಸ್ಕೂಲು ಆಗುತ್ತೆ ಅನ್ನೋದು ಸಮಾ
ಧಾನದ ವಿಷಯ."
"ನಾನೇನೋ ಅದನ್ನ ನನ್ನ ಜೀವನದ ಧ್ಯೇಯವಾಗಿಯೆ ಇಟ್ಕೊಂಡಿದೀನಿ,"
ಎಂದರು ನಂಜುಂಡಯ್ಯ.
ಕರಡು ಕಾಗದವನ್ನು ಜಾಗರೂಕತೆಯಿಂದ ಜಯದೇವ ಮಡಚುತ್ತಿದ್ದುದನ್ನು
ಕಂಡು ಅವರೆಂದರು:
"ಇದರದೊಂದು ಕನ್ನಡ ಭಾಷಾಂತರ ಮಾಡ್ಕೊಡಿ ಜಯದೇವ್. ನನ್ನ ಕನ್ನಡ
ಅಷ್ಟು ಚೆನ್ನಾಗಿಲ್ಲ ಅನ್ನೋದು ನಿಮಗೆ ಗೊತ್ತೇ ಇದೆ."
"ಆಗಲಿ ಸಾರ್. ಅದಕ್ಕೇನು?"
ಆ ರಾತ್ರೆ ಒಳ್ಳೆಯ ಕನ್ನಡ ಭಾಷಾಂತರವನ್ನು ಜಯದೇವ ಸಿದ್ಧಗೊಳಿಸಿದ:
ಅಷ್ಟೇ ಅಲ್ಲ, ಇಂಗ್ಲಿಷ್ ಕರಡಿನಲ್ಲಿ ಮುಖ್ಯವೆಂದು ತೋರಿದ ಕೆಲ ತಪ್ಪುಗಳನ್ನೂ
ತಿದ್ದಿದ.
ತರ್ಜುಮೆಯೊಡನೆ ಕರಡುಪ್ರತಿಯನ್ನು ಹಿಂತಿರುಗಿಸಿದಾಗ, ಕಂಡೂ ಕಾಣದಂತೆ
ಮಾಡಿದ್ದ ತಿದ್ದುಪಡಿಗಳ ವಿಷಯ ಆತ ಹೇಳಲಿಲ್ಲ.
...ರಾಜ್ಯ ಪುನರ್ವಿಂಗಡಣೆಗೆ ಸಂಬಂಧಿಸಿ, ಜಯದೇವನನ್ನು ವಿಲೀನ ವಿರೋಧಿ
ಯಾಗಿ ಮಾಡಲು ಲಕ್ಕಪ್ಪಗೌಡರು ಪಟ್ಟ ಪ್ರಯತ್ನ ಅಷ್ಟಿಷ್ಟಲ್ಲ. ದಿನಪತ್ರಿಕೆಯಿಂದ
ಸ್ಛೂರ್ತಿ ಪಡೆಯುತ್ತಿದ್ದ ಅವರ ವಾದಗಳು, ಪ್ರತಿ ದಿವಸವೂ ಏಕನಾದವನ್ನೆ ಹೊರಡಿ
ಸಿದುವು.
_"ಡಿ.ವಿ.ಜಿ. ಕೂಡ ಹೇಳಿದಾರಲ್ರೀ."
_"ದೇಭರ್ಗೇನ್ರಿ ಗೊತ್ತು ನಮ್ಮ ಪರಿಸ್ಥಿತಿ?"
ಜಯದೇವನ ಸಹನೆಯನ್ನೂ ಗಾಂಭೀರ್ಯವನ್ನೂ ಯಾವುದೂ ಕದಡದೆ
ಇದ್ದಾಗ ಗೌಡರೆಂದರು:
"ಉತ್ತರ ಕರ್ನಾಟಕದಲ್ಲಿ ಈ ಜನ ಬ್ರಾಹ್ಮಣರಿಗೆ ಎಂಥ ಹಿಂಸೆ ಕೊಡ್ತಾರೆ
ಅನ್ನೋದು ನಿಮಗೆ ತಿಳೀದು ಸಾರ್."
ಆ ಒಂದು ಮಾತಿಗೆ ಜಯದೇವ ಉತ್ತರವಿತ್ತ:
"ನಾನು ಬ್ರಾಹ್ಮಣನಲ್ಲ, ಯಾವ ಜಾತಿಯವನೂ ಅಲ್ಲ. ಒಂದು ಪಂಗಡ