ಪುಟ:ನವೋದಯ.pdf/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

434

ಸೇತುವೆ

ವಿರುತ್ತೇಂತ ಒಪ್ಕೋತೀನಿ. ಆದರೆ ನಮ್ಮಂಥ ಸಣ್ಣ ಮನುಷ್ಯರನ್ನ ಭಾರದೋರು
ತುಳಿದು ಅಪ್ಪಚ್ಚಿ ಮಾಡಬಾರದು, ಅಷ್ಟೆ. ನಮ್ಮ ಮೇಲೇನಾದರೂ ಸವಾರಿ ಮಾಡಿ
ದರೆ, ಒಕ್ಕಲಿಗರ ರಾಜ್ಯವೂ ಇರೋದಿಲ್ಲ, ಲಿಂಗಾಯತರ ರಾಜ್ಯವೂ ಇರೋದಿಲ್ಲ;
ನಾವೆಲ್ಲ ಸತ್ತು ಪಿಶಾಚಿಗಳಾಗಿ ಹುಟ್ಟಿ, ಭೂತರಾಜ್ಯ ಸ್ಥಾಪಿಸ್ತೇವೆ!"
ಆ ಮಾತುಗಳನ್ನು ಮೆಲುಕು ಹಾಕುತ್ತ ಜಯದೇವ ಹೇಳಿದ:
"ಭೂತರಾಜ್ಯ ಅಂತ ಒಂದು ನಾಟಕವನ್ನೇ ಬರೀಬಹುದು, ಅಲ್ವೆ? ಸತ್ತಿರೋ
ಉಪಾಧ್ಯಾಯರೆಲ್ಲ ಎದ್ದು ಬಂದು, ಕಾಲಗತಿ ವಿಷಯ ಚರ್ಚೆ ಮಾಡೋದು..."
"ಚೆನ್ನಾಗಿರುತ್ತೆ. ನಾನು ಭೂತವಾಗೋಕ್ಮುಂಚೆ ಅಂಥದೊಂದು ಖಂಡಿತ ಬರೀ
ತೀನಿ."
ಎಷ್ಟೋ ದಿನಗಳ ಬೇಸರ ಕಳೆಯಲೆಂದು ಬಂದಿದ್ದ ತಿಮ್ಮಯ್ಯ, ಬಹಳ ಹೊತ್ತು
ಜಯದೇವನ ಮನೆಯಲ್ಲೆ ಹರಟೆ ಹೊಡೆಯುತ್ತ ಕುಳಿತರು.
ದಂಪತಿ ಒತ್ತಾಯಿಸಿದರೆಂದು ಅವರು ಊಟಕ್ಕೆ ಅಲ್ಲಿಯೇ ಎದ್ದರು.
ಆ ದಿನವೆಲ್ಲ ತನ್ನೆದುರು ತಿಮ್ಮಯ್ಯ ನಶ್ಯ ಹಾಕಿಕೊಂಡಿರಲಿಲ್ಲವೆಂಬುದನ್ನು
ಗಮನಿಸಿದ ಜಯದೇವ ಕೇಳಿದ:
"ನಶ್ಯದ ಬುರುಡೆ ತಂದೇ ಇಲ್ವೆ ಇವತ್ತು?"
"ಇಲ್ಲ, ಮರೆತ್ಬಿಟ್ಟೆ."
ಜಯದೇವನಿಗೇನೋ ಸಂದೇಹ ಬಂದು ತಿಮ್ಮಯ್ಯನವರ ಕೋಟಿನ ಜೇಬನ್ನು
ಮುಟ್ಟಿ ನೋಡಿದ. ಡಬ್ಬ ಅಲ್ಲಿತ್ತು.
"ಇದೇನಿದು?"
ಸುಳ್ಳು ಹೇಳಿ ಸಿಕ್ಕಿಬಿದ್ದ ಮಗುವಿನಂತಿತ್ತು ತಿಮ್ಮಯ್ಯನವರ ಮುಖ.
"ಖಾಲಿ ಡಬ್ಬ," ಎಂದರು ಅವರು. ಮತ್ತೂ ಒಂದು ಮಾತು ಸೇರಿಸಿದರು:
"ಡಬ್ಬವೂ ಖಾಲಿ. ಜೇಬೂ ಖಾಲಿ."
"ನಡೀರಿ, ಅಂಗಡಿ ಬೀದಿಗೆ ಹೋಗೋಣ," ಎಂದ ಜಯದೇವ.
ಅಲ್ಲಿ, ಒಂದು ತೊಲೆ ಹೊಸ ನಶ್ಯ ಕಟ್ಟಿಸಿಕೊಳ್ಳುತ್ತಿದ್ದಂತೆ ತಿಮ್ಮಯ್ಯ
ಹೇಳಿದರು:
"ಹುಬ್ಬಳ್ಳಿ ಕಡೆ ಭರ್ಜರಿಯಾದ ನಶ್ಯ ತಯಾರಿಸ್ತಾರೆ."


೧೨

ಜಿಲ್ಲೆಯ ಮಾಧ್ಯಮಿಕ ಶಾಲಾ ಉಪಾಧ್ಯಾಯರ ಸಮ್ಮೇಳನವನ್ನು ಪಕ್ಕದ
ತಾಲ್ಲೂಕು ಕೇಂದ್ರದವರು ಕರೆದಿದ್ದರು. ವರ್ಷಕ್ಕೊಮ್ಮೆಯೊ ಎರಡು ವರ್ಷಗಳಿ