ಪುಟ:ನವೋದಯ.pdf/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

441

ನಮ್ಮ ಉಪಾಧ್ಯಾಯರು ಇರೋದನ್ನ ನೋಡುವಾಗ ನನಗೆ ನಾಚಿಕೆಯಾಗುತ್ತೆ."
[ನುಣುಪಾಗಿ ಸೊಗಸಾಗಿ ಕಾಂತಿಯುತವಾಗಿದ್ದ ಉಣ್ಣೆಯ ಸೂಟು ಧರಿಸಿ
ಹೇಗೆ ಠೀವಿಯಿಂದ ನಿಂತಿದ್ದರು ಅವರು!]
ಕೊನೆಯದಾಗಿ ಅವರ ಸಂದೇಶ:
"ಈ ಸಮ್ಮೇಳನದಿಂದ ಸ್ಫೂರ್ತಿಪಡೆದ ನೀವು నిಮ್ಮ నిಮ್ಮ ಊರುಗಳಿಗೆ
ಹೋಗಿ ಹೊಸ ಉತ್ಸಾಹದಿಂದ ವಿದ್ಯಾಚಟುವಟಿಕೆ ಆರಂಭಿಸಬೇಕು."
ಅವರು ಕುಳಿತಾಗ ಎಲ್ಲರೂ ಕರತಾಡನ ಮಾಡಿದರು.
ಜಯದೇವನ ಪಕ್ಕದಲ್ಲೆ ಇದ್ದ ಒಬ್ಬರು, ಇನ್ನೊಬ್ಬರ ಕಿವಿಗೆ ಉಸುರಿದರು:
"ಸಾಹೇಬರ ದೃಷ್ಟಿ ಯಾವ ಕಡೆಗಿರುತ್ತೆ ನೋಡಿದ್ರಾ?"
"ಹೂ೦," ಎಂದರು ಅವರ ಸ್ನೇಹಿತರು, ಮಹಿಳೆಯರು ಕುಳಿತಿದ್ದ ಕಡೆಗೊಮ್ಮೆ
ಕತ್ತುತಿರುಗಿಸಿ.
"ಕಪ್ಪು ಕನ್ನಡಕ ಹಾಕ್ಕೊಂಡ್ರೆ ಗೊತ್ತೇ ಆಗೋದಿಲ್ಲ!"
ಅದೊಂದು ಪ್ರಹಸನ. ಇಷ್ಟು ನಿರರ್ಥಕವಾಗಿ ಸಮ್ಮೇಳನ ನಡೆಯಬಹುದೆಂದು
ಜಯದೇವ ನಿರೀಕ್ಷಿಸಿರಲಿಲ್ಲ. ನಿರ್ಣಯಗಳ ಚರ್ಚೆ ಇದ್ದರೆ ಈಗ ಆಗಬೇಕು. ಆದರೆ
ಯಾರೂ ಆ ಯೋಚನೆಯನ್ನು ಮಾಡುತ್ತಿದ್ದಂತೆಯೇ ಕಾಣಲಿಲ್ಲ. ತನ್ನ ನಿರ್ಣಯ
ಗಳನ್ನು ಏನು ಮಾಡಬೇಕು? ಕೊಡಬೇಕೆ ಬೇಡವೆ?
ಅಲ್ಲೇ ನಿಂತಿದ್ದ ಯಾವನಾದರೂ ಹುಡುಗನ ಕೈಯಲ್ಲಿ ಕೊಟ್ಟು ಕಳುಹಿಸಿ
ನೋಡುವುದೇ ಸರಿಯೆಂದು ಜಯದೇವ ನಿರ್ಧರಿಸಿದ.
ಆ ಕಾಗದ ಮೊದಲು ಸ್ವಾಗತ ಕಾರ್ಯದರ್ಶಿಯ ಕೈಸೇರಿತು. ಸ್ವಾಗತಾ
ಧ್ಯಕ್ಷರೂ ಗಾಬರಿಯಾಗಿ ಅದನ್ನೋದಿದರು. ಉಧ್ಘಾಟಕರ ಸರದಿ ಬಳಿಕ.
"ಅದೇನು?" ಎಂದರು ಅಧ್ಯಕ್ಷರು.
ಕಾಗದ ತಂದ ಹುಡುಗ ಕೈಕಟ್ಟಿ ವೇದಿಕೆಯ ಬಳಿಯಲ್ಲೆ ನಿಂತ.
ಸಭಿಕರ ದೃಷ್ಟಿಯೆಲ್ಲ ಅಧ್ಯಕ್ಷರ ಮೇಲೆಯೇ ನೆಟ್ಟಿತು. ಅದನ್ನು ಯಾರು
ಬರೆದವರು? ಏನಿತ್ತು ಅದರಲ್ಲಿ?
ಜಯದೇವ ಕಾಗದ ಕಳುಹಿದುದನ್ನು ಕಂಡಿದ್ದವರು, ಸಮೀಪದಲ್ಲೆ ಕುಳಿತಿ
ದ್ದವರು, ವಿಸ್ಮಯದ ದೃಷ್ಟಿಯಿಂದ ಆತನನ್ನು ನೋಡಿದರು. ಹಲವರ ಎದೆಗುಂಡಿಗೆ
ಗಳು ಡವಡವನೆ ಹೊಡೆದುಕೊ೦ಡುವು.
ತೀಕ್ಷ್ಣವಾದ ಧ್ವನಿಯಲ್ಲಿ ಅಧ್ಯಕ್ಷರೆಂದರು:
“ಯಾರು ಈ ಜಯದೇವ? ಇಲ್ಲಿಗೆ ಕರೀರಿ!"
ಮಹತ್ವದ ಕೆಲಸವನ್ನು ನಿರ್ವಹಿಸುವವನಂತೆ, ಕೈಕಟ್ಟಿ ನಿಂತಿದ್ದ ಹುಡುಗ ಜಯ
ದೇವನೆಡೆಗೆ ಓಡಿದ.

56