ಪುಟ:ನವೋದಯ.pdf/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

444

ಸೇತುವೆ

ಯಾವುದರ ಮೇಲಿನ ನಿರ್ಣಯ ಎಂಬುದು ತಿಳಿದಾಗಲಂತೂ ಅವರಿಗಾದ
ಸಂತೋಷ ಅಷ್ಟಿಷ್ಟಲ್ಲ. 'ಧೈರ್ಯ ಇದ್ದಿದ್ದರೆ ಅವರು ಅದನ್ನು ಓಟಿಗೆ ಹಾಕಬೇಕಾ
ಗಿತ್ತು!'-ಎಂದು ಈಗ ಶೌರ್‍ಯದಿಂದ ಅವರು ಮಾತನಾಡಿದರು.
ವಯಸ್ಸಾಗಿದ್ದ ಒಬ್ಬರು ಮಾತ್ರ ಅಂದರು:
"ನಿಮಗಿನ್ನು ಬೇಗನೆ ವರ್ಗವಾಗುತ್ತೆ ನೋಡಿ!"
ಜಯದೇವ ನಸುನಕ್ಕ.
ಪ್ರತಿನಿಧಿಗಳಾಗಿ ಬಂದಿದ್ದ ಉಪಾಧ್ಯಾಯಿನಿಯರ ಕಿವಿಗೂ ಜಯದೇವನ
ಸಾಹಸದ ವರದಿ ತಲಪಿತು. ಮೆಚ್ಚುಗೆಯ ನೋಟಗಳಿಗೆ ಕೊರತೆ ಇರಲಿಲ್ಲ.
ವೃದ್ಧೆಯಾಗಿದ್ದ ಒಬ್ಬಾಕೆ ಹೇಳಿದರು:
"ಪಾಪ! ಇನ್ನೂ ಚಿಕ್ಕ ವಯಸ್ಸು."
"ಯಾಕೆ? ಅವರನ್ನು ಗಲ್ಲಿಗೇರಿಸ್ತಾರೇನು?" ಎಂದು ಯುವತಿಯೊಬ್ಬಳು
ನಗುತ್ತ ಕೇಳಿದಳು. [ಆ ವಿದ್ಯಾಧಿಕಾರಿಯ ವಿಷಯದಲ್ಲಂತೂ ಆಕೆಗೆ ಒಳ್ಳೆಯ ಅಭಿ
ಪ್ರಾಯವಿರಲಿಲ್ಲ.]
......ಕತ್ತಲಾದೊಡನೆಯೆ ವಿವಿಧ ವಿನೋದಾವಳಿ ಕಾರ್ಯಕ್ರಮ ಆರಂಭ
ವಾಯಿತು. ಭಾಗವಹಿಸಿದವರೆಲ್ಲ ಆ ಊರಿನ ಮಾಧ್ಯಮಿಕ ಶಾಲೆಯ ಬಾಲಕರು;
ಹುಡುಗಿಯರ ಶಾಲೆಯ ಬಾಲಿಕೆಯರು. ಅವರು ಆಡಿದ ನಾಟಕಗಳಿಗೂ ಆ ಸಮ್ಮೇಳ
ನಕ್ಕೂ ಯಾವ ಸಂಬಂಧವೂ ಇರಲಿಲ್ಲ. ಸ್ವತಃ ಆ ಉಪಾದ್ಯಾಯರಲ್ಲೇ ನಟರಿರಲಿಲ್ಲ
ವೆಂದೆ? ನಾಟಕಕಾರರಿರಲಿಲ್ಲವೆಂದೆ? ಹಾಡುಗಾರರಿರಲಿಲ್ಲವೆಂದೆ? ಪ್ರತಿಭೆಗೆ ಬರಗಾಲವಿರ
ದಿದ್ದರೂ ಅದು ಬಯಲಿಗೆ ಬರಲು ಅಷ್ಟೊಂದು ಅಡೆತಡೆ...
ಶಾಲೆಯೊಳಗೆ ಕತ್ತಲಿತ್ತು. ಎಲ್ಲ ಶಾಲೆಗಳಂತೆಯೇ ಅಲ್ಲಿಯೂ ದೀಪವಿರಲಿಲ್ಲ.
ಬೆಳಗ್ಗೆ 'ಹಣ ಕಲೆಕ್ಷನ್' ಮಾಡುತಿದ್ದವರು ಕುಳಿತಿದ್ದ ಕುರ್ಚಿ, ಅಲ್ಲಿಯೇ ಇತ್ತು
ಇನ್ನೂ. ಚಪ್ಪರದೊಳಗಿನ ಕಾರ್ಯಕ್ರಮ ಮುಗಿದ ಬಳಿಕ, ಎರಡು ಬೆಂಚುಗಳನ್ನು
ಜೋಡಿಸಿ ಮಲಗಿಕೊಂಡರಾಯಿತೆಂದು ಜಯದೇವ ಆ ಕುರ್ಚಿಯ ಮೇಲೆ ಕುಳಿತ.
ಆ ದಿನದ ಘಟನೆಗಳನ್ನೆಲ್ಲ ಮನಸ್ಸು ಮೆಲುಕು ಹಾಕತೊಡಗಿತು. ಆತನ ವಿಚಾರ
ಧಾರೆಯವರೇ ಆ ಗುಂಪಿನಲ್ಲಿ ಖಂಡಿತವಾಗಿಯೂ ಇದ್ದರು. ಕೆಲವರೊಡನೆ ಮಾತ
ನಾಡಿದ ಸ್ವಲ್ಪ ಹೊತ್ತಿನಲ್ಲೆ ಅದನ್ನು ಆತ ತಿಳಿದಿದ್ದ. ಅಂಥವರೆಲ್ಲ ಒಂದಾಗಿ ಬಲ
ವಾದೊಂದು. ಸಂಘಟನೆಯನ್ನು ಸ್ಥಾಪಿಸುವುದು ಸಾಧ್ಯವಾದರೆ? ಆ ವಿದ್ಯಾಧಿಕಾರಿ
ಯಂತೂ ತನ್ನನ್ನು ಇನ್ನು ಮರೆಯಲಾರರು. ಎಂಥ ಭೂಪತಿ!
ರಂಗರಾಯರಂಥವರು ಹೆಚ್ಚು ಜನ ಈ ಸಮ್ಮೇಳನದಲ್ಲಿ ಇದ್ದಿದ್ದರೆ? ಆದರೆ,
ಅವರು :ಎದ್ದು ನಿಂತು ಮೂಕರಿಗೆ ವಾಣಿಯಾಗುತ್ತಿದ್ದರೋ ಇಲ್ಲವೋ.
ಹಿಂದೆಯೊಮ್ಮೆ ಅವರೇ ತನಗೆ ಹೇಳಿದ್ದರು:
'ಈ ಪ್ರಪಂಚದಲ್ಲಿ ನಾವು ಯಾವಾಗ್ಲೂ ಹೆಚ್ಚು ನಿರೀಕ್ಷೆ ಇಟ್ಕೋಬಾರ್‍ದು