ಪುಟ:ನವೋದಯ.pdf/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



330

ಸೇತುವೆ

"ಇಡೋದು ಯಾಕ್ಬುದ್ಧೀ? ನಡೀರಿ. ಎಲ್ಲಾ ಒತ್ಕೊಂಡು ಬತ್ತೀನಿ."
ಆತನ ಕಣ್ಣಿದ್ದುದು ಸಂಪಾದನೆಯ ಮೇಲೆ.
"ಟ್ರಂಕೊಂದನ್ನ ಹೊತ್ಕೊಂಡು ಬಾಪ್ಪ ನೀನು.”
"ಅಂಗೇ ಆಗ್ಲಿ."
ಉಳಿದ ಸಾಮಾನುಗಳೆರಡು ಅಂಗಡಿಯ ಪಕ್ಕಕ್ಕೆ ಸರಿದುವು. ಧೂಳಾಗದಂತೆ
ಆಳು ಬೆಡ್ಡಿಂಗನ್ನು ಗೋಣಿಯ ಮೇಲಿರಿಸಿದ.
ಜಯದೇವ ಹೊರಡುತಿದ್ದಂತೆ ಆ ಯುವಕ ಕೇಳಿದ:
"ನನ್ನ ಗುರುತು ಸಿಗ್ಲಿಲ್ವೆ ಸಾರ್?"
"ಇಲ್ವಲ್ಲಾ..."
"ನೀವು ಮೊದಲ್ನೇ ಸಲ ಬಂದಾಗ ಆ ಹೋಟ್ಲಲ್ಲಿ ಸಪ್ಲಯರ್ ಆಗಿದ್ದೆ."
(ಜಯದೇವ ನೆನಪಿನ ಭಂಡಾರದೊಳಕ್ಕೆ ಇಣಿಕಿದ.
'ನೀನು ಸ್ಕೂಲಿಗೆ ಹೋಗ್ತೀಯಾ?'
'ಇಲ್ಲಾ ಸಾರ್...')
"ಹೌದಲ್ಲ! ಎಷ್ಟೊಂದು ಬೆಳೆದುಬಿಟ್ಟಿದೀರಪ್ಪಾ!"
(ಬಹುವಚನ ಈ ಸಾರೆ.)
ಆ ಯುವಕನ ಮುಖವರ್ಣ ನಸುಗೆಂಪಿಗೆ ತಿರುಗಿತು.
"ಈಗ ಸ್ವಂತದ ಅಂಗಡಿ ಇಟ್ಟಿದೀನಿ."
"ಸಂತೋಷ."
"ಆಗಾಗ್ಗೆ ಬರ್ತಾ ಇರಿ ಸಾರ್.""ಹೂನಪ್ಪಾ."
ಜಯದೇವನನ್ನು ಸುನಂದಾ ಹಿಂಬಾಲಿಸಿದಳು. ಆಕೆಯ ದೃಷ್ಟಿ ಮಾತ್ರ ಸುತ್ತು
ಮುತ್ತೆಲ್ಲ ಸಂಚರಿಸಿತು.
ಜಯದೇವ ಕೇಳಿದ:
"ಹ್ಯಾಗಿದೆ ಊರು?"
"ಚೆನ್ನಾಗಿದೆ."



ಶಿಕ್ಷಕ ವೃತ್ತಿಯನ್ನು ಅವಲಂಬಿಸಿ ಒಂದು ವರ್ಷದ ಅನುಭವದೊಡನೆ
ಬೆಂಗಳೂರಿಗೆ ಹಿಂತಿರುಗಿದಾಗ ಜಯದೇವ, ನೇರವಾಗಿ ಸುನಂದೆಯ ಮನೆಗೆ ಹೋಗಿದ್ದ.