ಪುಟ:ನವೋದಯ.pdf/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

449

"ಏನು ಹೇಳಬೇಕೋ ತೋಚ್ತಾ ಇಲ್ಲ."
"ನನಗೆ ಗೊತ್ತು. ಹೆಚ್ಚು ಸಂತೋಷವಾದಾಗ ಯಾವಾಗಲೂ ಹೀಗೆಯೇ
ಆಗುತ್ತೆ!"
ಆ ದಿನದ ಸಂಭಾಷಣೆ ಅಲ್ಲಿಗೆ ಮುಗಿಯಿತು.
ಮಾರನೆಯ ದಿನ ಹೆಚ್ಚಿನ ಸುದ್ದಿಯೊಡನೆ ನಂಜುಂಡಯ್ಯ ಬಂದರು.
"ಬರುವ ವರ್ಷ ಸರ್ವೋದಯದ ದಿವಸ ಕಟ್ಟಡದ ಶಂಕುಸ್ಥಾಪನೆ ಮಾಡಿಯೇ
ಬಿಡೋಣ. ಎಷ್ಟು ತಡ ಅಂದರೂ ಮಳೆಗಾಲ ಮುಗಿಯೋದರೊಳಗೆ ಕಟ್ಟಡ ಸಿದ್ಧ
ವಾಗುತ್ತೆ. ಹೊಸ ರಾಜ್ಯ ಸ್ಥಾಪನೆಯಾದ ತಕ್ಷಣವೆ ನಮ್ಮೂರಿನ ಪ್ರೌಢಶಾಲೆಯ
ಉದ್ಘಾಟನೆಯನ್ನೂ ಮಾಡಿಸೋಣ. ಕರ್ನಾಟಕ ಪ್ರಾಂತದಲ್ಲಿ ಹೊಸದಾಗಿ ಸ್ಥಾಪಿತ
ವಾಗೋ ಶಾಲೆಗಳಲ್ಲೆಲ್ಲಾ, ನಮ್ಮದೇ ಮೊದಲಿನದಾಗಬೇಕು. ಏನ್ಹೇಳ್ತೀರಾ?"
ಶೀಘ್ರವಾಗಿ ಬದಲಾಗುತಿದ್ದ ಚಿತ್ರ. ಆ ಕಲ್ಪನೆ ರಮ್ಯವಾಗಿತ್ತು.
"ಯೋಜನೆ ಚೆನ್ನಾಗಿದೆ_ಸೊಗಸಾಗಿದೆ."
"ಚೆನ್ನಣ್ಣನವರ ಕೊಡುಗೆಯ ವರದಿ ಆಗಲೆ ಪತ್ರಿಕೆಗಳಿಗೆ ಹೋಗಿದೆ. ಅಲ್ಲಿ
ಯಾರಿಗಾದರೂ ಬರೆದು, ನಮ್ಮೂರಿನ ವಾರ್ತೆಗಳು ಸರಿಯಾಗಿ ಬರೋಹಾಗ್ಮಾ
ಡ್ಬೇಕು."
...ಲಕ್ಕಪ್ಪಗೌಡರು ಊರಿನಿಂದ ಬಂದರು. ಬೇಗನೆ ಜರಗಲಿದ್ದ ಮಂಡ್ಯ
ಸಮ್ಮೇಳನದ ಸಿದ್ಧತೆಯನ್ನು ಅವರು ಬಾಯ್ದಣಿಯೆ ಬಣ್ಣಿಸಿದರು:
“ಈ ಸಮ್ಮೇಳನದ ಉದ್ದೇಶ ಸಾಧುವಾದದ್ದೂಂತ ನನಗೆ ಅನಿಸೋದಿಲ್ಲ,"
ಎಂದ ಜಯದೇವ.
“ನಿಮಗೆ ತಿಳಿವಳಿಕೆ ಬರೋ ಹೊತ್ತಿಗೆ ಎಷ್ಟೋ ಬದಲಾವಣೆಗಳಾಗಿರ್‍ತವೆ,
ನೋಡ್ತಿರಿ!" ಎಂದರು ಲಕ್ಕಪ್ಪಗೌಡರು.
"ಅದೇ ಮಾತನ್ನು ನಿಮಗೂ ಅನ್ವಯಿಸಬಹುದೆ?" ಎಂದು ನಂಜುಂಡಯ್ಯ
ಮೆಲುದನಿಯಲ್ಲಿ ಕೇಳಿದರು.
“ತಮಗಲ್ಲ ಸಾರ್ ನಾನು ಹೇಳಿದ್ದು," ಎಂದು ಗೌಡರು ಸಿಡಿನುಡಿದರು.
ನಂಜುಂಡಯ್ಯನಿಗೆ ರೇಗಿತು. ಅವರೂ ಸ್ವರವೇರಿಸಿ ಅಂದರು:
"ನಿಮ್ಮ ಜತೇಲಿ ಈ ವಿಷಯ ನಾನಿನ್ನು ಮಾತೇ ಎತ್ತೋದಿಲ್ಲ. [ಮತ್ತಷ್ಟು
ಗಟ್ಟಿಯಾಗಿ] ಕಿರಾತರ ಹಾಗೆ ಯಾಕೆ ಕಿರಿಚ್ಕೋತೀರಾ? ಮನುಷ್ಯರ ಹಾಗೆ ಮಾತಾ
ಡೋಕೆ ಕಲೀರಿ."
"ತಮ್ಮಿಂದ ನಾನದನ್ನು ತಿಳಕೋಬೇಕಾದ್ದಿಲ್ಲ."
"ಸಂತೋಷ."
ಜಯದೇವ, ಈ ಸಂಭಾಷಣೆಯನ್ನು ತಡೆಯಬೇಕೆಂದು, "ಯಾಕ್ಸಾರ್ ಆದ

57