ಪುಟ:ನವೋದಯ.pdf/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

453

"ಸರಿಯಾಗಿದೆ. ನೀವಾಗಿ ಕರೆದಾಗ ಬಂದು ಕೊಡೋಣಾಂತಿದ್ವಿ. ನೀವು
ಕರೀಲೇ ಇಲ್ಲ. ಕಡೆಗೆ ನಾವಾಗೇ ಬಂದ್ವಿ."
"ಕ್ಷಮಿಸೀಮ್ಮಾ. ಏನೇನೋ ಅನನುಕೂಲವಾಯ್ತು."
ಆಕೆ ನಕ್ಕರು:
“ತಮಾಷೆಗೆ ಹೇಳ್ದೆ. ಉಡುಗೊರೆ ದೀಪಾವಳಿಗೆ ಮುಂಚೆ ಕೊಟ್ಟರೂ
ತಪ್ಪೇನಿಲ್ಲ!"
ತಾಯಿ ಮಗಳು ಊಟಮಾಡಲೇ ಇಲ್ಲ. ಬರಿಯ ಪಾನಕವನ್ನಷ್ಟೆ ಕುಡಿದು
ಹೊರಟರು.
ಹೊರಡುವುದಕ್ಕೆ ಮುಂಚೆ ಇಂದಿರೆಯ ತಾಯಿ, ಅಡುಗೆ ಮನೆಯೊಳಕ್ಕೆ ಬಂದು,
ಸುನಂದೆಯ ಮು೦ಗುರುಳು ನೇವರಿಸಿ, ನೆಟಿಕೆ ಮುರಿದು ಹೇಳಿದರು:
"ಆರೋಗ್ಯ ಜೋಪಾನ ಮಗೂ!"
ಆ ತಾಯಿಗೆ ಗೊತ್ತಾಗಿ ಹೋಗಿತ್ತು!
ಸುನಂದೆಯ ಮುಖ ಲಜ್ಜೆಯಿಂದ ಕೆಂಪಾಯಿತು. ಹೊರಗೆ ಜಯದೇವ
ಹೇಳಿದ:
"ದೀಪಾವಳಿ ಮುಗಿಸ್ಕೊಂಡು ನಾವು ಬಂದ್ಮೇಲೆ ದಯವಿಟ್ಟು ನಮ್ಮ ಮನೆ
ಗೊಮ್ಮೆ ಬನ್ನಿ."
ಇಂದಿರೆಯ ತಾಯಿ ಅಂದರು:
"ಬರ್ತೀವಿ ಮೇಸ್ಟ್ರೆ. ಖಂಡಿತ ಬರ್ತೀವಿ."
ಅವರು ಹೋದ ಬಳಿಕ ಜಯದೇವ ಸುನಂದೆಯನ್ನು ಕೇಳಿದ:
"ಒಳಗೆ ಏನು ಹೇಳಿದರೆ ಅವರು?"
"ಏನಿಲ್ಲ!" ಎಂದಳು ಸುನಂದಾ, ಕತ್ತು ಕೊಂಕಿಸಿ.
"ನೀನು ಏನಂತೀಯೋ ಅಂತ ಅವರನ್ನ ಈವರೆಗೂ ಕರೀದೇ ಇದ್ದದ್ದು ಎಷ್ಟು
ತಪ್ಪಾಯ್ತು ನೋಡು."
"ಸಾಕು, ಠಕ್ಕಿನ ಮಾತು ಇನ್ನು ಮೇಲೆ ಕರೆಯೋಣ. ಆಗ ತಪ್ಪು ಮರೆತ್ಬಿ
ಡ್ತಾರೆ."
...ಹೊರಡುವ ಸಿದ್ಧತೆ. ಮನೆಯ ಉಸ್ತುವಾರಿ ನೋಡಲು ನೆರೆಹೊರೆಯವರಿಗೆ
ಪ್ರಾರ್ಥನೆ.
ರಾತ್ರೆ ತಿಮ್ಮಯ್ಯ ಬಂದರು.
"ಏನು? ಹಳ್ಳಿಗೆ ಹೋಗ್ಲಿಲ್ವೆ?"
"ಹೋಗಿ ಬಂದೆ. ನೀವು ನಾಳೆ ಬೆಳಗ್ಗೆ ಹೊರಡ್ತೀರಿ ಅನ್ನೋದು ನೆನಪಾಯ್ತು."
ಅವರ ಕಂಕುಳಲ್ಲಿದ್ದ ದೊಡ್ಡ ಪೊಟ್ಟಣ ಕೆಳಕ್ಕಿಳಿಯಿತು.
"ಏನಿದು?"