ಪುಟ:ನವೋದಯ.pdf/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

454

ಸೇತುವೆ

"ನಮ್ಮೂರು ಚಿಗುರೆಲೆ ಮೈಸೂರು ಚಿಗುರೆಲೆಗಿಂತ ವಾಸಿ. ದುಂಡುಮಲ್ಲಿಗೆ
ಇದೆ. ಮೈಸೂರು ಸಂಸ್ಥಾನದಲ್ಲೇ ಇಲ್ಲ-ಅಂಥಾದ್ದು ಇನ್ನು ಆ ಬದನೇಕಾಯಿ__"
"ನಿಮಗೆ ಬೇರೇನೂ ಕೆಲಸ ಇರ್ಲಿಲ್ಲಾಂತ ತೋರುತ್ತೆ, ಅಲ್ಲ?"
"ಇಲ್ಲ. ಊಟ ಹಾಕಿ. ರಾತ್ರೆ ಇಲ್ಲೇ ಮಲಗ್ತೀನಿ. ಬೆಳಗ್ಗೆ ನಿಮ್ಮಿಬ್ಬರನ್ನೂ
ಬಸ್ಸು ಹತ್ತಿಸಿ ನಮ್ಮ ಹಳ್ಳಿಗೆ ಹೋಗ್ತೀನಿ."



೧೪

ವೇಣು, ರೈಲು ನಿಲ್ದಾಣಕ್ಕೆ ಬಂದಿದ್ದ. ಶ್ರೀಪತಿರಾಯರೂ ಅವರಾಕೆಯೂ
ಅಳಿಯನನ್ನೂ ಮಗಳನ್ನೂ ಆದರದಿಂದ ಬರಮಾಡಿಕೊಂಡರು.
ಮಗಳ ಕಡೆಯಿಂದ 'ಆ ಸುದ್ದಿ'ಯೇ ಇರಲಿಲ್ಲವೆಂದು ಸುನಂದೆಯ ತಾಯಿಗೆ
ಒಂದು ರೀತಿಯ ಆತಂಕವೆನಿಸಿತ್ತು. ಈಗ ಮಗಳನ್ನು ಕಂಡ ಬಳಿಕ ವಿಷಯ ತಿಳಿದು
ಆಕೆ ಹಿರಿ ಹಿರಿ ಹಿಗ್ಗಿದಳು. [ವಯಸ್ಸಾದ ಯಾವ ಹೆಂಗಸಿಗೆ ತಾನೇ ಇಲ್ಲ, ಮೊಮ್ಮಕ್ಕ
ಳನ್ನು ಕಾಣುವ ಆಸೆ?]
ಮಡದಿಯಿಂದ ಅದನ್ನು ತಿಳಿದ ಶ್ರೀಪತಿರಾಯರು, ನರೆತ ಮೀಸೆಯನ್ನು
ಬೆರಳಿಂದ ಮುಟ್ಟಿ, ಮುಗುಳುನಗೆಯನ್ನು ಮರೆಸಿಕೊಂಡರು.
ಹಬ್ಬಕ್ಕೆಂದು ವೇಣುವಿಗಿದ್ದುದು ಒಂದೇ ದಿನದ ರಜಾ. ಆದರೆ, ಭಾವನ ಮತ್ತು
ತಂಗಿಯ ಜತೆ ಇರಬೇಕೆಂದು ಆತ ಮತ್ತೂ ಎರಡು ದಿನಗಳ ರಜಾ ಪಡೆದ.
ಸುನಂದಾ ಹೇಳಬೇಕಾಗಿದ್ದ ವಿಷಯಗಳೇನು ಕಡಮೆಯೆ? ನೋಡಲೇ ಬೇಕಾದ
ಊರು ಎಂದು ಬಾಯಲ್ಲಿ ನೀರೂರುವಂತಹ ಬಣ್ಣನೆ.
"ನಿನ್ನ ನೆನಪು ಮಾತ್ರ ಆಗಾಗ್ಗೆ ಆಗ್ತಿತ್ತಮ್ಮ. ಒಮ್ಮೊಮ್ಮೆ ಹೊರಟು ಬಂದ್ಮಿಡಲೆ
ಅನಿಸ್ತಿತ್ತು."
ಅಂತಹ ಮಾತು ಕೇಳಿದಾಗ ತಾಯಿಯ ಮುಖವರಳುತಿತ್ತು.ಆಕೆ ಮಗಳನ್ನು
ದೃಷ್ಟಿಯಿಂದಲೆ ಮುದ್ದಿಸುತ್ತ ಹೇಳುತ್ತಿದ್ದರು:
"ಹುಚ್ಚು ಹುಡುಗಿ!"
ರೇಡಿಯೊ ಒಂದಿರಲಿಲ್ಲ ಆಕೆಯ_ಗಂಡನ_ಮನೆಯಲ್ಲಿ.
"ಆಕಾಶವಾಣಿ ಬೆಂಗಳೂರಿಗೆ ಬಂದ್ಮೇಲೆ ತುಂಬಾ ಚೆನ್ನಾಗಿ ಕೇಳಿಸುತ್ತೆ. ಅಲ್ವೆ
ಅಮ್ಮ?"
"ನೀನು ಹೋದ್ಮೇಲೆ ಅದನ್ನ ಸರಿಯಾಗಿ ಹಾಕೋರೂ ಇಲ್ಲ ಕಣೇ."
ಸುನಂದಾ ರೇಡಿಯೋದ ಕಿವಿತಿರುವಿದಳು. ನಭೋಮಂಡಲದಲ್ಲಿ, ಪ್ರಪಂಚದ