ಪುಟ:ನವೋದಯ.pdf/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

456

ಸೇತುವೆ

“ಇವತ್ತು ಹಬ್ಬ ಅಂತ ಊರಿಗೆ ಹೋಗಿರ್ತಾನೆ. ನಾಳೆ ಸಿಗಬಹುದು.
ನೋಡೋಣ."
ಶ್ರೀಪತಿರಾಯರು ಮಗಳನ್ನು ನೋಡುತ್ತ ಕೇಳಿದರು:
"ಸಿನಿಮಾ ನೋಡ್ಬೇಕೇನೆ ನಿಂಗೆ?"
"ಇವತ್ತು ಗದ್ದಲ ಜಾಸ್ತಿ," ಎಂದ ವೇಣು.
ಮಗಳೆಂದಳು:
"ಆ ಮೇಲೆ ನೋಡಿದರಾಯ್ತು."
ಆರಾಮ ಕುರ್ಚಿಯ ಮೇಲೆ ಕುಳಿತು, ತಮ್ಮ ಪುಟ್ಟ ಸಂಸಾರವನ್ನು ದಿಟ್ಟಿಸಿ
ನೋಡುತ್ತ, ಶ್ರೀಪತಿರಾಯರೆಂದರು:
"ನಮ್ಮ ವೇಣು ತಲೆಹರಟೆ ಮಾಡ್ತಿದಾನೆ. ಸ್ವಲ್ಪ ಬುದ್ಧಿವಾದ ಹೇಳ್ಬಿಟ್ಟು
ಹೋಗು, ಜಯಣ್ಣ."
"ಏನಣ್ಣ ಅದು?" ಎಂದು ವೇಣು, ಗಟ್ಟಿಯಾಗಿ ಗದರುವ ಧ್ವನಿಯಲ್ಲಿ ನುಡಿದ.
"ಅದೇನೊ ಸಮಾಚಾರ?" ಎಂದು ಕೇಳಿದ ಜಯದೇವ.
“ಓಹ್ಹೋ! ಏನೋ ಇದೆ," ಎಂದಳು ಸುನಂದಾ.
ಶ್ರೀಪತಿರಾಯರು ನಕ್ಕು ಅಂದರು:
"ಇನ್ನು ಐದು ವರ್ಷ ಆತನ ಮದುವೆಯ ಮಾತು ಎತ್ಕೂಡದಂತೆ!"
ಜಯದೇವ ನಕ್ಕ.
“ಅಷ್ಟೇನಾ?"
"ಆ ವಿಷಯ ನಿಲ್ಸಿ! ಇಲ್ದೇ ಇದ್ರೆ ಹೊರಗೆ ಹೊರಟ್ಹೋಗ್ತೀನಿ!" ಎಂದ
ವೇಣು.
ಎಲ್ಲರೂ ನಗುತ್ತ ಸಂತೋಷಪಡುತ್ತಿದ್ದರೂ ಆತನ ಮುಖ ಮಾತ್ರ ಕೆಂಪಗೆ
ಉರಿಯುತ್ತಿತ್ತು.
ಜಯದೇವನೆಂದ:
"ಒಳ್ಳೇ ಹುಡುಗಿ ಗೊತ್ಮಾಡಿ ಮಾವ. ಆ ಮೇಲಿಂದು ಆ ಮೇಲೆ."
....ಹಬ್ಬದ ರಾತ್ರೆ ಹಾಸಿಗೆಗಳೆಲ್ಲ ಅತ್ತಿತ್ತ ಚಲಿಸುತ್ತಿದ್ದುದನ್ನು ಕಂಡು ಜಯ
ದೇವ ಕೇಳಿದ:
“ಏನು ವೇಣು ಇದು?"
"ನನ್ನ ಕೊಠಡಿ ಖಾಲಿಮಾಡ್ತಿದೀನಿ ಕಣೋ. ಇದು ನಿಮಗೆ, ದಂಪತಿಗೆ."
"ಛೆ! ಛೆ! ಏನೂ ಬೇಡ, ನಾನೂ ನೀನೂ ಇಲ್ಲೇ ಮಲಕೊಳ್ಳೋಣ...."
ಒಳಗೆ ಸುನಂದೆಯೂ ಅಮ್ಮನಿಗೆ ಹೇಳಿದಳು:
"ನಾನು ನಿನ್ನ ಜತೇಲಿ ಮಲಕೊತೀನಿ ಅಮ್ಮ."
"ಹುಚ್ಚಿ!" ಎಂದು ಆ ತಾಯಿ, ಮಗಳನ್ನು ಟೀಕಿಸಿದರು.