ಪುಟ:ನವೋದಯ.pdf/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

459

ರೀತಿಯೇ ಉತ್ತರವನ್ನು ಸಾರುತ್ತಿತ್ತು.
"ಊ ಹೂಂ. ಈಗ್ಲೇ ಬೇಡ," ಎ೦ದಳು ಸುನ೦ದಾ.
ಶ್ರೀಪತಿರಾಯರು ಅಳಿಯನ ಮರೆಹೊಕ್ಕರು.
"ನಿಮ್ಮದು ಪ್ರಬಲವಾದ ಆಕ್ಷೇಪವೇನೂ ಇಲ್ಲವಾದರೆ__"
[ಕೊನೆಯ ಪಕ್ಷಕ್ಕೆ ಅದಾದರೂ ಒ೦ದು ಉಡುಗೊರೆ?]
"ದಯವಿಟ್ಟು ಬೇಡಿ. ಇನ್ನೂ ಸ್ವಲ್ಪ ದಿವಸ ನಾವು ಮನೆಗೆ ರೇಡಿಯೋ ತರ
ಬಾರದೂ೦ತ ಮಾಡಿದೀವಿ."
"ನಿಮ್ಮಿಷ್ಟ."
ಹೆಚ್ಚು ಒತ್ತಾಯಿಸುವುದರಿ೦ದೇನೂ ಪ್ರಯೋಜನವಿದ್ದ೦ತೆ ಅವರಿಗೆ
ತೋರಲಿಲ್ಲ.
ಸುನ೦ದೆಯನ್ನು ಹುಡುಕಿಕೊ೦ಡು ಆಕೆಯ ಸ್ನೇಹಿತೆಯರು ಬ೦ದರು.
__"ಕಳ್ಳಿ! ಎಷ್ಟು ದಿವಸವಾಯ್ತೆ ಬ೦ದು?"
__"ಕಾಗದ ಬರೀತೀನಿ ಅ೦ದವಳು, ನೋಡೇ. ಊರು ಬಿಟ್ಟಿದ್ದೇ ತಡ.
ಎಷ್ಟು ಬೇಗ ಮರೆತ್ಬಿಟ್ಲೂ೦ತ!"
__"ಹೋಗಲಿ. ಆ ಊರಿನ ಸಮಾಚಾರವಾದರೂ ಇಷ್ಟು ಹೇಳು."
ಸುನಂದಾ ಹೇಳಿದಳು. ಎಷ್ಟು ಬೇಕೋ ಅಷ್ಟನ್ನೇ.
ಅವರಿಂದ ಆಕೆ ತಿಳಿಯುವ ವಿಷಯಗಳೂ ಇದ್ದುವು.
ಲೆಕ್ಚರರ್ ಪ್ರಮೀಳಾ ಚಂದ್ರಕಾಂತಮ್ ಗೆ ಮದುವೆ. ["ಯಾರೇ ಗಂಡು?"]
"ಚಂಪಕಾಗೆ ಈಗೊಂದು ಮಗುವಾಗಿದೆ ಕಣೇ." [ತನ್ನ ರಹಸ್ಯವೆಲ್ಲಿ ಬಯಲಾಗು
ವುದೋ ಎಂಬ ಭಯ.] "ಶುರೂನಲ್ಲಿ ಮಣಿಪುರಿ ಪೀಸು ತುಂಬಾ ಚೆನ್ನಾಗಿತ್ತು. ಈಗ
ಎಲ್ರೂ ಅದನ್ನೇ ತೊಟ್ಕೋತಾರೆ. ಬೇಜಾರಮ್ಮ."
ದಿಟ್ಟೆಯಾದ ಒಬ್ಬಳು ಮಾತ್ರ ಕೇಳಿದಳು:
"ಸಿಹಿ ಯಾವತ್ತು ಕೊಡಿಸ್ತೀಯೆ?"
ನಟನೆ ಯಶಸ್ವಿಯಾಗಲೇಬೇಕೆಂಬ ದೃಢ ನಿರ್ಧಾರದಿಂದ ಸುನಂದಾ ಹೆಳಿದಳು:
"ಸಾರಿ ಕಣೇ. ಇನ್ನೂ ಬಹಳ ದಿವಸ ನೀನು ಕಾಯ್ಬೇಕಾಗುತ್ತೆ."
"ಯಾಕಮ್ಮಾ?"
"ಯಾಕೆ ಅಂದರೆ!"
ಆ ದಿಟ್ಟೆ ಬೇಸ್ತು ಬಿದ್ದಳು. ಸುನಂದಾ ಮನಸ್ಸಿನೊಳಗೇ ನಕ್ಕಳು.
ಸಂಜೆ ವೇಣು, ಜಯದೇವ, ಸುನಂದೆಯರು ಪೃಭಾತ್ ಚಲಚ್ಚಿತ್ರ ಮಂದಿರಕ್ಕೆ
ಭೇಟಿ ಕೊಟ್ಟರು.
ಮಾರನೆಯ ದಿನ ವೇಣುವಿಗೆ ಬಿಡುವಿರಲಿಲ್ಲ. ಆತ ಕೆಲಸಕ್ಕೆ ಹೋದ. ಜಯ
ದೇವನೊಬ್ಬನೆ ಮಾಧುವಿದ್ದ ವಿದ್ಯಾರ್ಥಿ ನಿಲಯಕ್ಕೆ ಹೋಗಿ, ಹಿಂದಿನ ದಿನವಷ್ಟೆ