ಪುಟ:ನವೋದಯ.pdf/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

463

ಜಯದೇವ ಜೇಬಿಗೆ ಕೈ ಹಾಕಿದ.
"ಬಿಲ್ಲು, ದುಡ್ಡು, ತಗೊಂಡ್ಬಿಡ್ತೀರಾ?"
"ಮಿಕ್ಕಿದೆಯೇನು? ಭೇಷ್! ಈಗ ಬೇಡಿ. ಸ್ಕೂಲ್ನಲ್ಲಿ ಕೊಡುವಿರಂತೆ. ತಡ
ವಾಗುತ್ತೆ. ಹೊರಡಿ."
"ಪೆಟ್ಟಿಗೆ ಭದ್ರ!" ಎಂದ ಜಯದೇವ ಗಾಡಿಯನ್ನೇರುತ್ತ.
"ನೋಡ್ಕೊತೀನಿ. ಉದ್ಘಾಟನೆ ಸಾಯಂಕಾಲ ಇಟ್ಕೊಳ್ಳೋಣ!"
ಪಾರ್ವತಮ್ಮ ಬಂದು ಹೊರಗಿಣುಕುವುದರೊಳಗಾಗಿ ಗಾಡಿ ಹೊರಟುಬಿಟ್ಟಿತ್ತು.
.......ದೂರ ಪ್ರವಾಸಮಾಡಿ ಭಿನ್ನವಾದ ಬದುಕನ್ನು ನೋಡಿ ಅವರು ಹಿಂದಿರು
ಗಿದ್ದರು. ಆದರೆ ಇಲ್ಲಿ ಆ ಅವಧಿಯೊಳಗೆ ಯಾವ ಬದಲಾವಣೆಯೂ ಆಗಿರಲಿಲ್ಲ.
ಕಾಗೆಗಳು ಎಂದಿನಂತೆಯೆ ಮನೆಯ ಛಾವಣಿಯ ಮೇಲೆ ಕುಳಿತು ಕಾ ಕಾ ಎನ್ನು
ತ್ತಿದ್ದವು. ಊರು ಹೆಂಚುಗಳೆಡೆಯಿಂದ ಹೊಗೆ ಏಳುತ್ತಿತ್ತು. ಹುಡುಗರು ಶಾಲೆಗೆ
ಹೊರಟಿದ್ದರು...
ಆದರೆ, ಶಾಲೆಯಲ್ಲೊಂದು ಹೊಸ ವ್ಯಕ್ತಿ ಕಾದಿತ್ತು, ಸಿಗರೇಟು ಸೇದುತ್ತ.
ನಂಜುಂಡಯ್ಯನಿಗಿಂತ ಮುಂಚೆಯೇ ಶಾಲೆಯನ್ನು ತಲಪಿದ ಜಯದೇವ ಆ
ವ್ಯಕ್ತಿಯನ್ನು ನೋಡಿದ.
ಲಕ್ಕಪ್ಪಗೌಡರು ಹಸನ್ಮುಖಿಯಾಗಿ ಅವರ ಪರಿಚಯಮಾಡಿ ಕೊಟ್ಟರು.
"ಇದ್ದವರು ಮೂವರೇ ಆಗಿದ್ದೆವು ಈವರೆಗೂ. ಈಗ ನಾಲ್ಕನೆಯವರು
ಬಂದ್ಬಿಟ್ಟಿದಾರೆ. ರಾಮಾಚಾರ್ ಅಂತ."
ರಾಮಾಚಾರಿ ಎದ್ದು, ಸಿಗರೇಟನ್ನು ಎಡಗೈಗೆ ವರ್ಗಾಯಿಸಿ, ಕೈಕುಲುಕಿದರು.
ಇಂಗ್ಲಿಷಿನಲ್ಲಿ ಮಾತು: 'ನಿಮ್ಮನ್ನು ಭೇಟಿಯಾಗಲು ಸಂತೋಷವಾಗ್ತಿದೆ' ಎಂದು.
ಆ ಬಳಿಕ ಲಕ್ಕಪ್ಪಗೌಡರೆಂದರು:
"ಇವರೇ ಜಯದೇವರು ಎಂದರೆ."
ರಾಮಾಚಾರಿ ಹೇಳಿದ:
"ಹೆಸರು ಕೇಳಿದೀನಿ."
ಜಯದೇವ ವಿಚಾರಿಸಿದ:
"ಎಲ್ಲಿಂದ ವರ್ಗವಾಯ್ತು?"
"ಹೆಸರಘಟ್ಟದಿಂದ. ಇದೇ ಮೊದಲ್ನೆ ವರ್ಗ!"
"ಇವರು ಇಷ್ಟು ಚಿಕ್ಕ ವಯಸ್ನಲ್ಲೆ ಟ್ರೇನಿಂಗ್ ಮಾಡ್ಕೊಂಡಿದಾರೆ ಜಯ
ದೇವರೆ," ಎಂದರು ಗೌಡರು.
"ಸಂತೋಷ. ತರಬೇತಾದ ಒಬ್ಬ ಉಪಾಧ್ಯಾಯರಾದರೂ ನಮ್ಮ ಶಾಲೇಲಿ
ದಾರೆ ಅನ್ನೋ ಹಾಗಾಯ್ತು."
ಅಡ್ಡ ಪಂಚೆ, ಹಸುರು ಬಣ್ಣದ ಶರಟು, ಬಟ್ಟೆಯ ಕೋಟು, ಆರೋಗ್ಯದ