ಪುಟ:ನವೋದಯ.pdf/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

464

ಸೇತುವೆ

ಲಕ್ಷಣವೇನೂ ಮುಖದ ಮೇಲೆ ಇರಲಿಲ್ಲ. ಮಿತಿಮೀರಿದ ಧೂಮಪಾನದಿಂದ ತುಟಿ
ಗಳು ಕಪ್ಪಗಾಗಿದ್ದುವು. ತಲೆಯಮೇಲೆ ಕ್ರಾಪಿತ್ತು.
ಆಚಾರಿಯೇ? ಆಚಾರ್ಯರೇ?
'ಥೂ! ಇದೇನು? ನಾನೂ ಬೇರೆಯವರ ಮಟ್ಟಕ್ಕೆ ಇಳಿದೆನಲ್ಲಾ,' ಎಂದು
ಜಯದೇವ ತನ್ನ ಮೇಲೆಯೆ ರೇಗಿದ.
"ಯಾವತ್ತು ಬಂದಿರಿ ನೀವು?"
"ದೀಪಾವಳಿಯ ಮಾರನೆ ದಿವಸವೆ ಬಂದೆ ಸಾರ್."
ಮಾವನ ಮನೆಯಲ್ಲಿ ಇರಲಿಲ್ಲವೆಂದಾಯಿತು ಆತ. ಒಂಟಿ ಜೀವ.
"ఒಬ್ಬರೇ ಇದೀರಾ ?"
"ಹೂಂ ಸಾರ್."
ಲಕ್ಕಪ್ಪಗೌಡರು ಉತ್ಸಾಹದ ಧ್ವನಿಯಲ್ಲಿ ಹೇಳಿದರು:
“ಕರ್ನಾಟಕ ಪ್ರಾಂತ ಬೇಡ ಅನ್ನೋದೆಲ್ಲಾ ಒಕ್ಕಲಿಗರ ರಾಜಕೀಯಾಂತ ಈ
ವರೆಗೂ ಭಾವಿಸಿದ್ರಿ, ಅಲ್ವೆ? ಈಗ್ನೋಡಿ. ಆಚಾರ್ರ ಅಭಿಪ್ರಾಯವೂ ನನ್ನ ಅಭಿ
ಪ್ರಾಯವೂ ಒಂದೇ."
"ಹಾಗೇನು? ನಿಮಗೊಬ್ಬರು ಜತೆಗಾರ ಸಿಕ್ಕಹಾಗಾಯ್ತು. ಆದರೆ ಒಂದು,
ಲಕ್ಕಪ್ಪಗೌಡರೆ. ಈ ವಿಷಯದಲ್ಲಿ ಅಭಿಪ್ರಾಯವೆಲ್ಲ ಜಾತಿಯ ಮೇಲೆ ಹೋಗು
ತ್ತೇಂತ ನಾನು ಯಾವತ್ತೂ ಹೇಳಿಲ್ವಲ್ಲ."
"ನೀವು ಹೇಳದೇ ಇದ್ದರೂ ಪರಿಸ್ಥಿತಿ ಇರೋದು ಹಾಗೆ ತಾನೆ ?"
"ಏನೋಪ್ಪ. ನಾನಂತೂ ಎಲ್ಲರ ಅಭಿಪ್ರಾಯಗಳಿಗೂ ಗೌರವ ಕೊಡ್ತೀನಿ.
ವಿಚಾರಮಾಡಿ ಸಾಧುವಾದದ್ದನ್ನ ಒಪ್ಕೊಳ್ಳೋದು ನಮ್ಮ ಕರ್ತವ್ಯ."
ಅಷ್ಟರಲ್ಲೆ ನಂಜುಂಡಯ್ಯ ಬಂದರು. ಮೂವರೂ ಜತೆಯಲ್ಲಿದ್ದುದನ್ನು
ಕಂಡು ಅವರೆಂದರು:
"ಪರಸ್ಪರ ಪರಿಚಯ ಆಯ್ತು ತಾನೆ?"
"ಆಯ್ತು ಸಾರ್," ಎಂದ, ಹೊಸಬನಾದ_ಎಲ್ಲರಿಗಿಂತಲೂ ಕಿರಿಯವನಾದ_
ರಾಮಾಚಾರಿ.
ಮೇಜಿನ ಮೇಲೆ ದೃಷ್ಟಿಹಾಯಿಸಿ, ಜವಾನನನ್ನು ಕರೆದು, ನಂಜುಂಡಯ್ಯ
ಗದರಿದರು:
"ಪ್ರತಿ ದಿವಸವೂ ಬೆಳಗ್ಗೆ ಈ ಟ್ರೇ ಖಾಲೀ ಮಾಡಿಡೂಂತ ಎಷ್ಟು ಸಲವೊ
ಹೇಳೋದು ನಿಂಗೆ? ಕತ್ತೆ!"
ಸೇದುವವರು ಇಬ್ಬರಾದುದರಿಂದ, ಭಸ್ಮಕುಂಡದೊಳಗೆ ಡುಬ್ಬವೆದ್ದು, ಮೇಜಿನ
ಸ್ವಲ್ಪ ಭಾಗ ಬೂದಿ ಬಳೆದುಕೊಂಡಿತ್ತು.
"ಸಿಗರೇಟು ಸೇದೋಕೆ ಹೆಡ್ಮೇಸ್ಟ್ರಿಗೂ ಒಬ್ಬರು ಜತೆಗಾರರಾದ ಹಾಗಾಯ್ತು,"