ಪುಟ:ನವೋದಯ.pdf/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

465

ಎಂದ ಜಯದೇವ. ಆ ಸ್ವರದಲ್ಲಿ, ಗೌರವದ, ಸಲಿಗೆಯ ಭಾವಗಳೆರಡೂ ಬೆರೆತಿದ್ದುವು.
"ಹೌದು," ಎಂದರು ನಂಜುಂಡಯ್ಯ, ಒತ್ತಾಯಕ್ಕೋಸ್ಕರ ಸಣ್ಣನೆ ನಕ್ಕು.
ಹೊಸಬನ ಕಡೆ ಅವರು ನೋಡಲೇ ಇಲ್ಲ.
'ಹೆಸರು ಕೇಳಿದೀನಿ', ಎಂದು ಆ ಹೊಸಬ ಹೇಳಿದ್ದುದು ನೆನಪಾಗಿ ಜಯ
ದೇವನೆಂದ:
"ನೀವು ಈ ವರ್ಷ ಜಿಲ್ಲಾ ಸಮ್ಮೇಳನಕ್ಕೆ ಬಂದಿದ್ರಾ ರಾಮಾಚಾರ್?"
[ಜವಾನ ಭಸ್ಮಕುಂಡವನ್ನು ಹೊರಕ್ಕೆ ಒಯ್ದಿದ್ದುದರಿಂದ ರಾಮಾಚಾರಿ, ಉರಿ
ಯುತ್ತಿದ್ದ ಸಿಗರೇಟಿನ ಕೊನೆಯ ತುಂಡನ್ನೆಸೆಯುವುದು ಕಷ್ಟವಾಯಿತು. ಆತ, ಅತ್ತಿತ್ತ
ನೋಡಿ, ಕಿಟಕಿಯ ಮೂಲಕ ಅದನ್ನು ಹೊರಕ್ಕೆಸೆದ.]
ನಂಜುಂಡಯ್ಯ ಅಸಮ್ಮತಿ ಸೂಚಿಸುವ ಧ್ವನಿಯಲ್ಲಿ ಅಂದರು:
"ಹಾಗೆ ಎಸೀ ಬೇಡಿ!"
ರಾಮಾಚಾರಿಯೆಂದ:
"ಸಾರಿ."
ಪದ ವಿಷಾದಸೂಚಕವಾಗಿತ್ತೇ ಹೊರತು, ಸ್ವರದಲ್ಲಿ ಆ ಭಾವವಿರಲಿಲ್ಲ.
ಜಯದೇವನೆಡೆಗೆ ತಿರುಗಿ ರಾಮಾಚಾರಿ ಹೇಳಿದ:
"ಇಲ್ಲ ಸಾರ್. ಬರಬೇಕೂಂತಿದ್ದೆ. ಅನುಕೂಲವಾಗ್ಲಿಲ್ಲ. ನಮ್ಮಲ್ಲಿಂದ
ಹೋಗಿದ್ದೋರೊಬ್ಬರು ಹೇಳಿದ್ರು_ನಿಮ್ಮ ಭಾಷಣ ತುಂಬಾ ಚೆನ್ನಾಗಿತ್ತೂಂತ."
ಜಯದೇವ ನಕ್ಕ.
"ನಾನು ಭಾಷಣ ಮಾಡೇ ಇಲ್ವಲ್ಲ!"
ರಾಮಾಚಾರಿ ತಬ್ಬಿಬ್ಬಾದ.
ಆತನ ನೆರವಿಗೆ ಬರಲು ಬಯಸುತ್ತ ಜಯದೇವ ಮುಂದುವರಿದ:
"ನಾನು ನಿರ್ಣಯಗಳನ್ನ ಕಳಿಸಿದ್ದು ಎಷ್ಟೋ ಅಷ್ಟೆ. ಆ ಸಂದರ್ಭದಲ್ಲಿ ಸ್ವಲ್ಪ
ಗಲಾಟೆಯಾಯ್ತು."
"ಇರಬೇಕು ಸಾರ್. ಅವರು ಹೇಳಿದ್ದು ಆ ವಿಷಯವೇ ಇರಬೇಕು."
ಜಯದೇವ ಆ ರಾಮಾಚಾರಿಯನ್ನು ಮತ್ತೊಮ್ಮೆ ದಿಟ್ಟಿಸಿ ನೋಡಿದ. ಆತನಿ
ಗೆನಿಸಿತು:
'ಈತ ಮಹಾ ಅಪಾಯಕಾರಿ. ಮೆಚ್ಚಿಸುವ ಪ್ರವೃತ್ತಿಯ ಮುಖವಾಡದ
ಹಿಂದೆ, ಹಾಲಿಗೆ ಹುಳಿ ಹಿಂಡುವ ಮನೋವೃತ್ತಿ ಇರೋ ಹಾಗಿದೆ.'
ನಂಜುಂಡಯ್ಯ ಹೇಳಿದರು:
"ವರ್ಗ ಮಾಡೋದಕ್ಕೂ ಈಗ ಹೊತ್ತು ಗೊತ್ತು ಅನ್ನೋದಿಲ್ಲ. ವರ್ಷದ
ಕೊನೇಲಿ ಅದೇನೂಂತ ಕಳಿಸ್ತಾರೊ? ನೋಡಿ ಜಯದೇವ್, ಪಾಠಗಳನ್ನ ಹೀಗೆ

59