466
ಸೇತುವೆ
ಗೊತ್ತು ಮಾಡಿದೀವಿ. ನಾವು ಎರಡೆರಡು ಮಾಡ್ತಿದ್ದ ಕಡೆಯೆಲ್ಲ ಒಂದೊಂದು
ಅವರಿಗೆ ಕೊಟ್ಟಿದೆ. ಮುಂದಿನ ವರ್ಷ ಸರಿಯಾಗಿ ಪಾಠ ಪಟ್ಟಿ ತಯಾರಿಸೋಣ."
"ಆಗಲಿ, ಸಾರ್."
ಲಕ್ಕಪ್ಪಗೌಡರು ಮಾತ್ರ ನಸುನಕ್ಕರು.
"ಮುಂದಿನ ವರ್ಷ ಹೈಸ್ಕೂಲು ಬರೋದಿಲ್ವೆ? ಆಗ ನಾಲ್ಕು ಜನ ಎಲ್ಲಿರ್ತಾರೆ
ಈ ಶಾಲೇಲಿ?"
"ಅದಕ್ಕಿನ್ನೂ ಸಮಯವಿದೆ ಅಂದ್ರೆ."
...ಸಂಜೆ ಅಧ್ಯಾಪಕರನ್ನೆಲ್ಲ ನಂಜುಂಡಯ್ಯ ಮನೆಗೆ ಕರೆದರು.
"ಯಾಕೆ ಅಂತ ಈಗ ಹೇಳೋದಿಲ್ಲ. ಅದೊಂದು ರಹಸ್ಯ. ನೀವೆಲ್ಲ ಬನ್ನಿ.
ಬಂದ ಮೇಲೆ ಗೊತ್ತಾಗುತ್ತೆ," ಎಂದರು.
ಜಯದೇವನಿಗೂ ಅದು ರಹಸ್ಯದ ವಿಷಯವಾಗಿರಲಿಲ್ಲ. ಆದರೂ ಆತ
ನಂಜುಂಡಯ್ಯನವರ ಏರ್ಪಾಟಿಗೆ ಊನ ಬರಬಾರದೆಂದು ತುಟಿ ಎರಡು ಮಾಡಲಿಲ್ಲ.
ಆ ಊರಿನ ಏಕಮಾತ್ರ ವಿದ್ಯುತ್ ಉಪಕರಣಗಳ ಅಂಗಡಿಯ ಒಡೆಯನನ್ನು
ನಂಜುಂಡಯ್ಯ ಕರೆಸಿದರು, 'ಏರಿಯಲ್' ಹಾಕಿಸಲೆಂದು_'ಫಿಟ್' ಮಾಡಿಸಲೆಂದು.
ಲಕ್ಕಪ್ಪಗೌಡರು ಬರಲಿಲ್ಲ. ರಾಮಾಚಾರಿ ಹಾಜರಾಗಿ ಹೇಳಿದ:
"ಇದಕ್ಕೇನಾ ಸಾರ್ ಕರೆದಿದು? ತುಂಬಾ ಸಂತೋಷ ಸಾರ್."
ಜಯದೇವ, ಸುನಂದೆಗೊಮ್ಮೆ ಮುಖ ತೋರಿಸಿ, ನಂಜುಂಡಯ್ಯನ ಮನೆಯ
ಕಡೆ ಹೊರಟ. ಹಾದಿಯಲ್ಲಿ ಆತನನ್ನು ಹುಡುಕುತ್ತ ಬಂದಿದ್ದ ತಿಮ್ಮಯ್ಯ ಸಿಕ್ಕಿದರು.
"ನೀವೂ ಬನ್ನಿ. ನಂಜುಂಡಯ್ಯನವರ ಮನೇಲೊಂದು ವಿಶೇಷ ಇದೆ ಇವತ್ತು."
"ಏನು? ನಾಮಕರಣವೆ? ಗಂಡು ಹುಟ್ತೆ?"
"ಎಂಥಾ ಮಗು ಅಂತೀರಾ? ಹುಟ್ಟಿದ ತಕ್ಷಣ ಹಾಡುತ್ತೆ, ಮಾತನಾಡುತ್ತೆ."
ತಿಮ್ಮಯ್ಯನವರಿಗೆ, ಎರಡು ನಿಮಿಷಗಳಿಗಿಂತ ಹೆಚ್ಚುಕಾಲ ಅದು ಒಗಟಾ
ಗಿರಲಿల్ల.
"ಗೊತ್ತು ಬಿಡಿ! ಆ ದಿವಸ ರೇಡಿಯೋ ತರೋಕೆ ಅಂತ ನೀವು ದುಡ್ಡು
ತಗೊಂಡು ಹೋಗಿರ್ಲಿಲ್ವೆ?"
ಎಲ್ಲರೂ ಬರುವುದಕ್ಕೆ ಮುಂಚೆಯೆ ರೇಡಿಯೊವನ್ನು ಸಿದ್ಧಗೊಳಿಸಬೇಕೆಂದು
ನಂಜುಂಡಯ್ಯ ಆಶಿಸಿದ್ದರು. ಆ ಆಶೆ ಫಲಿಸಲಿಲ್ಲ. ಸುಮ್ಮನೆ ಗುರ್ ಗುರ್ ಎಂದು
ಸದ್ದಾಗುತ್ತಿತ್ತೇ ಹೊರತು ಯಾವ ನಿಲಯವೂ ಉತ್ತರ ಕೊಡುತ್ತಿರಲಿಲ್ಲ. ತಡವಾಗುತ್ತ
ದೆಂದು ತಿಮ್ಮಯ್ಯ ಹೊರಟು ಹೊದರು. ರಾಮಾಚಾರಿ ಸಿಗರೇಟು ಸುಟ್ಟ.
ಆ ವಿದ್ಯುತ್ ತಜ್ಞ ತೀರ್ಪುಕೊಟ್ಟ:
"ಮಿಶಿನ್ನಲ್ಲೇ ಏನೋ ಮಿಸ್ಟೀಕಿದೆ ಸಾರ್."
ಜಯದೇವನ ಎದೆ ಧಸಕ್ಕೆಂದಿತು. ಉಳಿದಿದ್ದ ದುಡ್ಡು ಬಿಲ್ಲು ಎರಡನ್ನೂ