ಪುಟ:ನವೋದಯ.pdf/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

470

ಸೇತುವೆ

"ಏನೇನೂ ಇಲ್ಲ."
ರಾಮಾಚಾರಿ ಬೀದಿಗಳ ಕಡೆ ನೋಡಿದಾಗ ಜಯದೇವ ಹೇಳಿದ:
"ನೋಡಿ. ಅದೇ ರಸ್ತೆ. ನೇರವಾಗಿ ಹೋಗಿ. ಆನಂದವಿಲಾಸ ಸಿಗುತ್ತೆ."
...ಮನೆಯಲ್ಲಿ ಸುನಂದಾ ಕೇಳಿದಳು:
"ರೇಡಿಯೋ ಸರಿಯಾಗಿತ್ತೆ? ಯಾಕೆ ಇಷ್ಟು ಹೊತ್ತು?"
"ಸರಿಯಾಗಿತ್ತು. ಆದರೆ ಹೊರಟವನಿಗೆ ಇನ್ನೊಂದು ರೇಡಿಯೋ
ಅಂಟ್ಕೊಳ್ತು."
"ಯಾರು?"
"ರಾಮಾಚಾರ್‍ಯ ಆಂತ. ಹೊಸ ಮೇಸ್ಟ್ರು."
"ಓ, ಚೆನ್ನಾಗಿ ಕೊರೀತಾರಾ?"
"ಕೊರೆಯೋದೆ? ಸಾಮಾನ್ಯ ಭೈರಿಗೆಯಲ್ಲ ಕಣೇ. ಅದು ವಿಷದ ಭೈರಿಗೆ!"



೧೬

ವರ್ಷಕ್ಕೊಮ್ಮೆ ನಡೆಯಬೇಕಾದ ಶಾಲಾ ಸಂದರ್ಶನಕ್ಕಾಗಿ ನ೦ಜು೦ಡಯ್ಯ
ರೇಂಜ್ ಇನ್ಸ್ಪೆಕ್ಟರನ್ನು ಇದಿರು ನೋಡಿದರು.
ಜಯದೇವ ಕೇಳಿದ:
"ರಾಧಾಕೃಷ್ಣಯ್ಯನವರಿಗೆ ವರ್ಗವಾದ್ಮೇಲೆ ಇವರು ಬಂದರೂಂತ ಕಾಣುತ್ತೆ.
ಅಲ್ವೆ?"
"ಹೌದು....ಆ ರಾಧಾಕೃಷ್ಣಯ್ಯ! ನೆನಪಿದೆ ತಾನೆ ನಿಮಗೆ? ಅವರೇನಪ್ಪ,
ವೆಂಕಟರಾಯರು ನಿಮ್ಮ ವಿಷಯವಾಗಿ ಕಳಿಸಿದ ವರದೀನ ಕಸದ ಬುಟ್ಟಿಗೆ ಎಸೆ
ದೋರು."
ಹಿಂದೆ ನಂಜುಂಡಯ್ಯನೂ ಆ ರಾಧಾಕೃಷ್ಣಯ್ಯನನ್ನು ಟೀಕಿಸಿದ್ದರು.
"ಈಗ ಅವರೆಲ್ಲಿದಾರೆ ಸಾರ್?"
"ಚಿತ್ರದುರ್ಗದಲ್ಲೀಂತ ಕಾಣುತ್ತೆ."
ಜಯದೇವ, ಬಹಿರಂಗವಾಗಿ ರಾಧಾಕೃಷ್ಣಯ್ಯನ ಗುಣಗಾನ ಮಾಡಲಿಲ್ಲ.
ಆದರೆ, ಅಂತರಂಗದಲ್ಲಿ ಅವರ ನೆನಪು ಬಹುವಾಗಿ ಆತನನ್ನು ಕಾಡಿತು.
ಒಳ್ಳೆಯ ಮನುಷ್ಯ. ತನ್ನಲ್ಲಿ ಸ್ಫೂರ್ತಿ ತುಂಬುವ ಎಷ್ಟೊಂದು ಮಾತುಗಳನ್ನು
ಅವರು ಆಡಿದ್ದರು!
_'ನಿಮ್ಮಂಥ ಒಂದು ಸಾವಿರ ಜನ ಇದ್ರೆ ಸಂಸ್ಥಾನದಲ್ಲಿ ವಿದ್ಯಾ ಕ್ಷೇತ್ರದಲ್ಲಿ