ಪುಟ:ನವೋದಯ.pdf/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

471

ನಾವು ಏನು ಬೇಕಾದರೂ ಸಾಧಿಸ್ಬಹುದು.'
_'ನೀವು ಹ್ಯಾಗಾದರೂ ಮಾಡಿ ಕೋರ್ಸು ಮುಗಿಸ್ಬೇಕು.'
_'ಮುಂದಿನ ಆಶೆ ಏನಾದರೂ ಇದ್ರೆ ಅದು ನಿಮ್ಮಂಥ ಯುವಕರಿಂದ.'
ಭವಿಷ್ಯತ್ತಿನ ವಿಷಯವಾಗಿ ನಂಬುಗೆ ಇಟ್ಟುಕೊಳ್ಳುತ್ತ ಅವರು ಹೇಳಿದ್ದರು:
'ಯೌವನ, ಜೋಗದ ಜಲಪಾತ ಇದ್ದ ಹಾಗೆ. ಅದರ ಸದ್ವ್ಯಯ ಆಗ್ಬೇಕು.'
ಯೌವನದ ಜಲಪಾತದ ಸದ್ವ್ಯಯ! ಈ ರಾಮಾಚಾರಿ, ಲಕ್ಕಪ್ಪಗೌಡರು,
ಹೀಗೇಯೇ ಇನ್ನೆಷ್ಟೋ ಸಾವಿರ ಜನ. ಸದ್ವ್ಯಯವಾಗುತ್ತಿರಲಿಲ್ಲ. ಅಷ್ಟೇ ಅಲ್ಲ, ಆ
ಶಕ್ತಿಯ ಅಪವ್ಯಯವಾಗುತ್ತಿತ್ತು.......
ಹುಡುಗರು ಹೂದೋಟದ ಕಳೆ ಕಿತ್ತರು. ಆಟದ ಬಯಲಿನಿಂದ ಕಾಗದದ
ಚೂರುಗಳನ್ನು ಎತ್ತಿ ದೂರ ಎಸೆದರು. ಶ್ರಮದಾನದ ಅಂಗವಾಗಿ ಅ೦ಗಳದಿಂದ
ಕೆಳಗಿನ ಬೀದಿಯವರೆಗೆ ನಿರ್ಮಿಸಿದ್ದ ರಸ್ತೆಯನ್ನು, ಮತ್ತೊಮ್ಮೆ ಮುಟ್ಟಿನೋಡಿ ಒಪ್ಪ
ಗೊಳಿಸಿದರು.
ಆಗಮಿಸಿದ ಇನ್ಸ್ಪೆಕ್ಟರು ಬಲು ಸಪ್ಪಗಿನ ಮನುಷ್ಯ. ಆ ಸಂದರ್ಭದಲ್ಲಿ
ಪ್ರಮುಖ ವ್ಯಕ್ತಿಯಾಗಿ ಓಡಾಡುತ್ತಿದ್ದವನು ಅವರ ಜವಾನನೇ.
ಶಾಲೆಯ ಉಪಾಧ್ಯಾಯರಲ್ಲಿ ಇಬ್ಬರು ಪದವೀಧರರೆಂದು ಇನ್ಸ್ಪೆಕ್ಟರು,
ನಿತ್ಯದ ಮೃದುತನಕ್ಕಿಂತಲೂ ಹೆಚ್ಚಿನ ವಿನಯದಿಂದಿದ್ದರು. ತಮ್ಮ ಗುಣಪರೀಕ್ಷೆ
ಯನ್ನು ಅವರೇ ಮಾಡುತ್ತಿರುವರೇನೋ ಎನ್ನುವ ಹಾಗೆ.
ನಂಜುಂಡಯ್ಯ ಜಯದೇವನನ್ನು ಪಕ್ಕಕ್ಕೆ ಕರೆದು ಹೇಳಿದರು:
"ಈತ ಯಾವ ಜನ ಗೊತ್ತಾಯ್ತೆ ನಿಮಗೆ?"
[ ರಾಧಾಕೃಷ್ಣಯ್ಯನ ಜಾತಿ ತಿಳಿಯಲು ವೆಂಕಟರಾಯರೂ ಯತ್ನಿಸಿದ್ದರು,
ಹಿಂದೆ.]
"ಇಲ್ಲ."
"ಜವಾನ ಹೇಳಿದ. ['ಹೇಳುವುದೇನು? ಕೇಳಿ ತಿಳಕೊಂಡದ್ದು'] ಎ. ಕೆ.
ನಂತೆ."
"ಎ. ಕೆ.?"
"ಹೂಂ. ಆದಿ ಕರ್ನಾಟಕ. ಅದಕ್ಕೇ ನೀರಲ್ಲಿ ಬಿದ್ದಿರೋ ಬೆಕ್ಕಿನ ಹಾಗೆ ಮೆತ್ತ
ಗಿದಾನೆ."
ಕುಲವನ್ನು ತಿಳಿದು ನಡತೆಯನ್ನು ಅಳೆಯುವ ಅಲ್ಪ ಗುಣ. ನಂಜುಂಡಯ್ಯನ
ಮಾತನ್ನು ಕೇಳಿ ಯಾವ ಮುಖಭಾವವನ್ನೂ ತೋರ್ಪಡಿಸಲಿಲ್ಲ ಜಯದೇವ. ಆತ
ಕೇಳಿದ:
"ಎಲ್ಲ ಆದಿ ಕರ್ನಾಟಕ ಅಧಿಕಾರಿಗಳೂ ಹೀಗೇಯೇ ಮೆತ್ತಗಿರ್‍ತಾರೇನು?"
"ಛೆ! ಛೆ! ಹಾಗೇಂತ ನಾನು ಹೇಳ್ಲಿಲ್ಲ. ಅವರಲ್ಲಿ ಜೋರಾಗಿರೋರೂ