ಪುಟ:ನವೋದಯ.pdf/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

474

ಸೇತುವೆ

"ಆಗಲಿ. ಸಹಾಯಕ್ಕೆ ತಿಮ್ಮಯ್ಯನವರಿದ್ದಾರಲ್ಲಾ."
ಬೇರೆ ದಿನವಾಗಿದ್ದರೆ, ತಿಮ್ಮಯ್ಯನ ವಿಷಯದಲ್ಲಿ ತಮಗೆ ಒಳ್ಳೆಯ ಅಭಿಪ್ರಾಯ
ವಿಲ್ಲವೆ೦ಬುದನ್ನು ಖ೦ಡಿತವಾಗಿಯೂ ನಂಜುಂಡಯ್ಯ ವ್ಯಕ್ತಪಡಿಸುತ್ತಿದ್ದರು. ಅಂತಹ
ಅವಕಾಶವನ್ನು ಎಂದೂ ಅವರು ಕಳೆದುಕೊಳ್ಳುತ್ತಿರಲಿಲ್ಲ. ಆದರೆ ಈ ದಿನ ಸುಮ್ಮ
ನಿದ್ದರು.
"ಹೇಳಿದೆನಲ್ಲಾ ನಿಮ್ಮ ಜವಬ್ದಾರೀ೦ತ. ಸಹಾಯಕ್ಕೆ ಯಾರನ್ನು ಬೇಕಾದರೂ
ಕರಕೊಳ್ಳಿ."
...ಉಪಾಧ್ಯಾಯರ ಸಭೆಯಲ್ಲಿ ಈ ವಿಷಯಗಳು ಚರ್ಚೆಯಾದಾಗ ಮಾತ್ರ
ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿ ಒಮ್ಮತ ತೋರಲಿಲ್ಲ.
ಲಕ್ಕಪ್ಪಗೌಡರು ಸಿಟ್ಟಾಗಿ ಕೇಳಿದರು:
"ಧರ್ಮಪ್ರವರ್ತಕ ಚೆನ್ನಣ್ಣನವರ ಹೊರತಾಗಿ ಯೋಗ್ಯರಾದವರು ಬೇರೆ
ಯಾರೂ ಇಲ್ವೇನು?"
"ಯಾಕೆ, ಚೆನ್ನಣ್ಣನವರಿಗೆ ಏನಾಗಿದೆ?" ಎ೦ದರು ನ೦ಜು೦ಡಯ್ಯ, ಕೆಣಕಿದ
ಫಣಿಯಂತೆ.
"ಬೇರೆ ಯಾರೂ ಇಲ್ವೇ ಅ೦ತ ಕೇಳ್ದೆ."
"ವಿದ್ಯಾಸಂಸ್ಥೆಗೋಸ್ಕರ ಭೂದಾನ ಮಾಡಿರೋರು ನಮ್ಮಲ್ಲಿ ಅವರೊಬ್ಬರೇ."
"ಮಾಧ್ಯಮಿಕ ಶಾಲೆಗೇಂತ ಅವರು ಭೂದಾನ ಮಾಡಿಲ್ವಲ್ಲ?"
"ಯಾವ ಶಾಲೆಗೋಸ್ಕರ ಮಾಡಿದರೆ ಏನ್ರಿ? ಸಂಕುಚಿತ ದೃಷ್ಟಿಯಿ೦ದ ಯಾಕೆ
ನೋಡ್ತೀರಿ ಅದನ್ನ?"
"ಸ೦ಕುಚಿತ ದೃಷ್ಟಿ ಇರೋದು ತಮಗೇ ಸಾರ್."
"ಏನೆ೦ದಿರಿ?"
"ತಮಗೆ ಇಷ್ಟ ಬಂದ ಹಾಗೆ ಮಾಡ್ಕೋಬಹುದು, ಅ೦ದೆ."
"ಇದಕ್ಕೆಲ್ಲ ಜಗಳ ಯಾತಕ್ಕೆ ಗೌಡರೆ?" ಎಂದು ಜಯದೇವ ಸಮಾಧಾನಪಡಿಸಲು
ಯತ್ನಿಸಿದ.
ಲಕ್ಕಪ್ಪಗೌಡರು ಶಾಂತರಾಗಲೆ ಇಲ್ಲ. ಕೊಡೆಯನ್ನು ಕೈಗೆತ್ತಿಕೊಂಡು ಹೊರ
ಬಿದ್ದರು.
ರಾಮಾಚಾರಿ ಯಾವ ಅಭಿಪ್ರಾಯವನ್ನೂ ವ್ಯಕ್ತಪಡಿಸದೆ ಸಿಗರೇಟು ಸೇದುತ್ತ
ಕುಳಿತ.
......ಹೆಚ್ಚು ದಿನ ಉಳಿಯಲಿಲ್ಲವೆಂದು ವಾರ್ಷಿಕೋತ್ಸವಕ್ಕೋಸ್ಕರ ಅವಸರ
ಅವಸರವಾಗಿಯೆ ತಯಾರಿ ನಡೆಸಬೇಕಾಯಿತು. ಮೊದಲ ದಿನ ರೇಗಿದ್ದ ಲಕ್ಕಪ್ಪ
ಗೌಡರೂ ಹುಡುಗರನ್ನು ಇದಿರಿಸುವುದು ಕಷ್ಟವಾಯಿತು. ವಿವಿಧ ಸ್ಪರ್ಧೆಗಳು
ಪಂದ್ಯಾಟಗಳು ಆರ೦ಭವಾದುವು. ಆ ಎಳೆಯರು ತೋರಿಸುತ್ತಿದ್ದಷ್ಟು ಉತ್ಸಾಹ