ಪುಟ:ನವೋದಯ.pdf/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

478

ಸೇತುವೆ



"ಯಾವುದಾದರೂ ಪಾರ್ಟುಮಾಡ್ತಿಯೇನು?"
"ಸಾಕು ತಮಾಷೆ."
"ಅಂದ ಹಾಗೆ, ಪ್ರತಿಮಾ ನಾಟಕದಲ್ಲಿ ಹಿಂದೆ ನಿಂತ್ಕೊಂಡು ಹಾಡೋರು
ಒಬ್ಬರು ಬೇಕು ಸುನಂದಾ."
ಆಕೆ ಒಂದು ಕ್ಷಣ ಗಂಡನ ಮುಖವನ್ನೇ ಪರೀಕ್ಷಿಸಿದಳು. ಅದು ತಿಳಿ ನೀರಿನಂತೆ
ಇದ್ದುದನ್ನು ಕಂಡು ಆಕೆಯೇ ಅಂದಳು:
"ರಾಧಾ ಇದಾಳಲ್ಲ."
“ಯಾವ ರಾಧಾ?"
"ಕೃಷ್ಣಪ್ರೇಮದ ರಾಧಾ ಕಣ್ರೀ."
"ಓ ಹೌದು! ಆದರೆ ಆಕೆ ಈಗ ವಿದ್ಯಾರ್ಥಿನಿಯಲ್ಲವಲ್ಲ...”
"ನಿಮ್ಮ ಮಾತೇ ಅರ್ಥವಾಗೋದಿಲ್ಲ ನನಗೆ. ಅಲ‍್ರೀ. ತಿಮ್ಮಯ್ಯ ಮೇಸ್ಟ್ರೇ
ಇರಬಹುದಂತೆ. ಹಳೆಯ ವಿದ್ಯಾರ್ಥಿನಿ ಭಾಗವಹಿಸಕೂಡದೊ?"
ಇಂದಿರೆಯನ್ನು ಕರೆಯುವುದು ಯಾವ ರೀತಿಯಿಂದಲೂ ತಪ್ಪಲ್ಲ ಎಂದು ಜಯ
ದೇವನಿಗೆ ಸುಲಭವಾಗಿ ಮನದಟ್ಟಾಯಿತು.
ಆತ ಹೆಂಡತಿಗೆ ಹೇಳಿದ;
"ನಾಡದು ಹ್ಯಾಗೂ ರಜಾ ತಗೋತಿನಿ. ಅವರ ಮನೆಗೊಮ್ಮೆ ಹೋಗ್ಬಿಟ್ವು
ಬರೋಣವೇನೆ? ವಾರ್ಷಿಕೋತ್ಸವದ ಮಾರನೆಯ ದಿವಸ ಇಲ್ಲಿಗೆ ಊಟಕ್ಕೂ ಕರೆದ
ರಾಯ್ತು."
ಆಕೆ, "ಹೂ೦" ಎ೦ದಳು.
...ಇಂದಿರಾ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿದು
ದನ್ನು ಕೇಳಿ ತಿಮ್ಮಯ್ಯನವರಿಗೆ ಸಂತೋಷವಾಯಿತು.
ಆದರೆ ಶಾಲೆಯಲ್ಲಿ ನಾಟಕಗಳ ಅಭ್ಯಾಸವಾಗತೊಡಗಿದಾಗ ರಾಮಾಚಾರಿಯೂ
ಬರಲಾರಂಭಿಸಿದ.
'ಹೆಸರ ಘಟ್ಟದಲ್ಲಿ ನಾವು ಆ ನಾಟಕ ಆಡಿದ್ವಿ, ಈ ನಾಟಕ ಆಡಿದ್ವಿ'ಎನ್ನುವ
ಮಾತೇ ಆತನ ಬಾಯಲ್ಲಿ. ಆರಂಭದ ದಿನ, ಆತನ ಗತ [ವರ್ಷದ] ವೈಭವದ
ಮಾತುಗಳಿಗೆ ತಿಮ್ಮಯ್ಯ ಮೇಸ್ಟ್ರು ಕಿವಿಗೊಟ್ವರು. ಮಾರನೆಯ ದಿನ, ಅಭ್ಯಾಸ
ವಾಗುತ್ತಿದ್ದ ತರಗತಿಯೊಳಗೆ ರಾಮಾಚಾರಿಯ ಇರವನ್ನೇ ಆತ ಮರೆತರು.
ಜಯದೇವನಿಗೂ ಸೂಕ್ಷ್ಮಹೊಳೆಯಿತು. ಆದರೆ, ಆತನೇನು ಮಾಡಬೇಕು?
ರಾಮಾಚಾರಿ ಎಷ್ವೆಂದರು ತನ್ನ ಸಹೋದ್ಯೋಗಿ. ನಾಟಕದ ಅಭ್ಯಾಸವಾಗುವಾಗ
ಇಲ್ಲಿರಬೇಡ_ಎನ್ನುವುದೆ?ಅದು ಖಂಡಿತವಾಗಿಯೂ ಶಿಷ್ವಾಚಾರವಗುವಂತಿರಲಿಲ್ಲ.
ಜಯದೇವನ ಪಾಲಿಗೆ ಕ್ಲಿಷ್ಟವಾಗಿದ್ದ ಆ ಸಮಸ್ಯೆಯನ್ನು ತಿಮ್ಮಯ್ಯನವರು
ಬಲು ಸುಲಭವಾಗಿ ಬಗೆಹರಿಸಿದರು.