ಪುಟ:ನವೋದಯ.pdf/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

479

ತರಗತಿಯ ಹೊರಗೆ ಕಿಟಿಕಿಗೊರಗಿಕೊಂಡು ರಾಮಾಚಾರಿ ಸಿಗರೇಟು ಹಚ್ಚಿದಾಗ
ತಿಮ್ಮಯ್ಯ ಎಲ್ಲರಿಗೂ ಕೇಳಿಸುವಂತೆ ಗಟ್ಟಿಯಾಗಿ ಹೇಳಿದರು:
“ಸ್ವಾಮೀ! ಧೂಮಪಾನ ನಿಷೇಧಿಸಲಾಗಿದೆ.”
ಆ ಮಾತಿಗೆ ಕೆಲ ಹುಡುಗರು ನಕ್ಕು ಬಿಟ್ಟರು.
ರಾಮಾಚಾರಿಗೆ ಮುಖಭಂಗವಾಯಿತು. ಪ್ರಾಥಮಿಕ ಶಾಲೆಯ ಉಪಾಧ್ಯಾಯ
ರಿಂದ ಎಂತಹ ಅವಮಾನ! ತನಗೆ ಹೇಳಲು ಯಾರು ಆತ? ಎದೆಗಾರಿಕೆಯಾದರೂ
ಎಷ್ಟರದು?
ರಾಮಾಚಾರಿ ಸಿಗರೇಟು ಆರಿಸಲೂ ಇಲ್ಲ; ಅಂಗಳಕ್ಕಿಳಿಯಲೂ ಇಲ್ಲ.
ಮುಗುಳುನಕ್ಕು ಶಾಂತವಾದ ಸ್ವರದಲ್ಲಿ ಜಯದೇವನೆಂದ:
“ರಾಮಾಚಾರ್, ಸಿಗರೇಟು ಸೇದಬಾರದು ಅಂತಾರೆ ನಮ್ಮ ನಿರ್ದೇಶಕರು.”
“ನಮ್ಮ ಶಾಲೆಯ ನಾಟಕಕ್ಕೆ ಅವರು ನಿರ್ದೇಶಕರೇನು?” ಎಂದು ಕೇಳಿದ
ರಾಮಾಚಾರಿ, ಸಿಟ್ಟಿನಿಂದ, 'ನಮ್ಮ' ಮತ್ತು 'ಅವರು' ಪದಗಳನ್ನು ಒತ್ತಿಹೇಳುತ್ತ.
ತಿಮ್ಮಯ್ಯನವರೇ ಉತ್ತರವಿತ್ತರು:
“ಹೌದು ಸ್ವಾಮಿ. ನಮ್ಮ ಶಾಲೆಯಲ್ಲಿ ನಾಟಕವಾದರೆ ನೀವು ನಿರ್ದೇ
ಶಕರಾಗಿ.”
'ನಮ್ಮ' ಮತ್ತು 'ನೀವು' ಪದಗಳನ್ನು ಅವರೂ ಒತ್ತಿ ಹೇಳಿದರು.
“ಅಂಗಳದಲ್ಲಿ ಸೇದಬಹುದು ತಾನೆ?” ಎಂದ ರಾಮಾಚಾರಿ, ಪ್ರಯತ್ನ ಪೂರ್ವಕ
ವಾಗಿ ನಗುತ್ತ, ತನಗಾದ ಪರಾಭವವನ್ನು ಮರೆಮಾಚಲು.
“ಓಹೋ. ಧಾರಾಳವಾಗಿ. ನಾನು ನಶ್ಯ ಹಾಕಿಕೊಳ್ಳೋದೂ ಅಲ್ಲೆ!”
ರಾಮಾಚಾರಿ ಅಂಗಳಕ್ಕಿಳಿಯುತ್ತಿದ್ದಂತೆ ಹುಡುಗಿಯರು ಕಿಸಕ್ಕನೆ ನಕ್ಕರು.
“ಹೂಂ. ನಗಬೇಡಿ. ಎಲ್ಲಿ ಕುಂತಿ? ಮುಂದಕ್ಬಾಮ್ಮ,” ಎಂದರು ತಿಮ್ಯಯ್ಯ.
ಅಷ್ಟು ಸುಲಭವಾಗಿ ಬಿಟ್ಟುಕೊಡುವವನೇ ರಾಮಾಚಾರಿ? ಸಿಗರೇಟು ಸೇದಿ
ಮುಗಿಸಿದ ಬಳಿಕ ಆತ ಹಿಂತಿರುಗಿದ; ಮಾರನೆಯ ದಿನವೂ ಬಂದ.
ಆತನ ಕಣ್ಣುಗಳು ಉಣ್ಣುತ್ತಿದ್ದುದು ಇಂದಿರೆಯನ್ನೇ ಎಂಬುದು ಸ್ಪಷ್ಟ
ವಾಗಿತ್ತು.
ವಾರ್ಷಿಕೋತ್ಸವ ಎರಡೇ ದಿನಗಳ ಅಂತರದಲ್ಲಿದ್ದಾಗ ಆತ ಜಯದೇವನನ್ನು
ಕೇಳಿದ:
“ಹೆಸರಘಟ್ಟದಲ್ಲಿ, ಮೇಕಪ್ ನಾನೇ ಮಾಡ್ತಾ ಇದ್ದೆ. ಇಲ್ಲೂ ಸಹಾಯ
ಬೇಕಾದರೆ_”
ಒಳಗೆ ಏರುತ್ತಲಿದ್ದ ಕಾವನ್ನು ಹತೋಟಿಯಲ್ಲಿರಿಸಿಕೊಳ್ಳುತ್ತ ಜಯದೇವ
ತಿಮ್ಮಯ್ಯನವರೆಡೆಗೆ ಬೊಟ್ಟುಮಾಡಿದ.
“ನೋಡೀಪ್ಪಾ. ಎಲ್ಲಾ ಅವರದೇ ಜವಾಬ್ದಾರಿ.”