ಪುಟ:ನವೋದಯ.pdf/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



480

ಸೇತುವೆ

ಆ ಸಂಭಾಷಣೆ ಕಿವಿಗೆ ಬಿದ್ದಿದ್ದ ತಿಮ್ಮಯ್ಯ ನಿಂತಲ್ಲಿಂದಲೇ ಹೇಳಿದರು:
"ಏನು ಮೇಕಪ್ಪೆ? ಅದೆಲ್ಲಾ ನನ್ನದೇ ಗುತ್ತಿಗೆನಪ್ಪಾ. ಬಿಟ್ಟುಕೊಡೇಕೆ ಆಗಲ್ಲ."
"ಸಂತೋಷ," ಎಂದ ರಾಮಾಚಾರಿ, ಈ ಬಾಣವೂ ನಾಟದೆ ಹೋಯಿತಲ್ಲ
ಎಂದು ದುಃಖಪಡುತ್ತ.
ಆ ಸಂಜೆ ಚೂಡಾಮಣಿ ಮತ್ತಿತರ ಹುಡುಗಿಯ ಜತೆಯಲ್ಲಿ ಇಂದಿರಾ ಹೊರಟು
ಹೋದ ಬಳಿಕ, ಹುಡುಗರು ಚೆದರಿದ ಮೇಲೆ, ಉಪಾಧ್ಯಾಯತ್ರಯರು ಹೊರ
ಬಿದ್ದರು.
ಸ್ವಲ್ಪ ದೂರ ಹಾದಿ ಕ್ರಮಿಸಿ ಕವಲುದಾರಿಗೆ ಬಂದೊಡನೆ ತಿಮ್ಮಯ್ಯ, ರಾಮಾ
ಚಾರಿಯನ್ನು ಕುರಿತು ಕೇಳಿದ:
“ನೀವು ಆನಂದ ವಿಲಾಸಕ್ಕೆ ತಾನೆ ಹೋಗೋದು?"
ಅವರೂ ಅಲ್ಲಿಗೇ ಬರುತ್ತಿರಬಹುದೆಂದು ಭಾವಿಸಿ ರಾಮಾಚಾರಿಯೆಂದ:
"ಹೌದು."
"ಹಾಗಾದರೆ ನೀವು ಹೋಗಿ. ನಾವು ಈ ಕಡೆ ತಿರುಗ್ತೀವಿ."
“ಆಗಲಿ," ಎಂದು ರಾಮಾಚಾರಿ, ಸಿಟ್ಟಿನಿಂದ ಮತ್ತಷ್ಟು ಕಪ್ಪಗಾದ ಮುಖ
ದೊಡನೆ ತನ್ನ ನಿವಾಸದ ಕಡೆಗೆ ನಡೆದ.
ಇಬ್ಬರೇ ಉಳಿದಾಗ ತಿಮ್ಮಯ್ಯನೆಂದರು:
"ಆತ ಶುದ್ಧ ಪೋಲಿ. ಈ ಊರಲ್ಲಿ ಆತನಿಗೆ ಚಪ್ಪಲಿ ಏಟು ಬೀಳದಿದ್ದರೆ
ಆಮೇಲೆ ಹೇಳಿ."
*** *
ಊರಿನ ಜನರ ಪಾಲಿಗೆ ಸ್ಮರಣೀಯ ಎನ್ನಿಸುವ ರೀತಿಯಲ್ಲಿ ಆ ವರ್ಷದ ಶಾಲಾ
ದಿನ_ವಾರ್ಷಿಕೋತ್ಸವ_ಜರಗಿತು. ಸಮಾರಂಭ ಕಳೆಗಟ್ಟಿದುದು ಆ ಊರಿನ ಇತಿಹಾಸ
ದಲ್ಲಿ ಅಭೂತಪೂರ್ವವಾಗಿದ್ದ ಮನೋರಂಜನೆಯಿಂದ.
ನಂಜುಂಡಯ್ಯನವರ ವರದಿ, ಬಹುಮಾನ ವಿನಿಯೋಗ. ಬಲು ಪ್ರಯಾಸ
ಪಟ್ಟು ಧರ್ಮಪ್ರವರ್ತಕರು ಓದಿದ ಅಧ್ಯಕ್ಷಭಾಷಣ_ಎಲ್ಲವನ್ನೂ ಜನ ಮರೆತು ಬಿಡು
ವಂತೆ ಮಾಡಿತ್ತು ವಿವಿಧ_ವಿನೋದಾವಳಿಯ ಕಾರ್ಯಕ್ರಮ.
ಅಧ್ಯಕ್ಷರು, ಶಂಕರಪ್ಪನವರು, ಇನ್ನಿತರರು ಪರದೆಯ ಹಿಂದೆ ಬಂದರು.ಆಗ
ತಾನೆ ಪ್ರೇಕ್ಷಕರ ನಡುವಿನಿಂದೆದ್ದು ಗಂಡನೆಡಗೆ ಬಂದಿದ್ದ ಸುನಂದೆಯೊಡನೆ ಜಯದೇವ
ಅಲ್ಲಿ ನಿಂತಿದ್ದ. ಆತನ ಹಿಂದೆ, ಭುಜದ ಮೇಲಿದ್ದ ಅಂಗವಸ್ತ್ರದಿಂದ ತಿಮ್ಮಯ್ಯ
ಮುಖದ ಬೆವರು ಒರೆಸಿಕೊಳ್ಳುತಿದ್ದರು.
ಬಂದಿದ್ದವರು ಅಭಿನಂದಿಸತೊಡಗಿದೊಡನೆ ಜಯದೇವ "ಅದರ ಯಶಸ್ಸಿ
ಗೆಲ್ಲ ತಿಮ್ಮಯ್ಯನವರೇ ಕಾರಣ," ಎಂದು ಕೈಯೆತ್ತಿತೋರಿಸುತ್ತ ಪಕ್ಕಕ್ಕೆ ಹೊರಳಿದ.