ಪುಟ:ನವೋದಯ.pdf/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

481

ಆ ಮನುಷ್ಯ ಅಲ್ಲಿರಲೇ ಇಲ್ಲ. ಹೊಗಳುವವರ ಕಣ್ಣಿಗೆ ಬೀಳಬಾರದೆಂದು
ಅವರು ಹೊರಕ್ಕೆ ನುಸುಳಿ ಕತ್ತಲೆಯಲ್ಲಿ ಮರೆಯಾಗಿದ್ದರು.



೧೭

ವಾರ್ಷಿಕೋತ್ಸವ ಮುಗಿದ ಮಾರನೆಯ ದಿನ ಸುನಂದೆಗೆ ಏನೇನೂ ಬಿಡು
ವಿರಲಿಲ್ಲ.
"ಇವತ್ತು ಮಧ್ಯಾಹ್ನದವರೆಗೂ ಇದ್ಬಿಟ್ಟು ಹೋಗು," ಎಂದು ಕೆಲಸದವಳಿಗೆ
ಆಕೆ ನಿರ್ದೇಶವಿತ್ತಳು.
ಮನೆಯೊಳಗಿನ ಚಟುವಟಿಕೆ ಕಂಡು ಆ ಹೆಂಗಸಿಗೆ ಕುತೂಹಲ. ಆಕೆ ಕೇಳಿದಳು:
"ನೆಂಟರು ಬತ್ತಾರೇನವ್ವ?"
ಸಂಬಂಧಿಕರ ಆಗಮನ ಎಂದರೇನೆಂಬುದನ್ನು ತಿಳಿಯದ ಆ ಮನೆಗೆ ನೆಂಟರು!
ಸುನಂದಾ ನಸುನಕ್ಕಳು. ಸುಳ್ಳಾಡುವುದೇ ಸರಿ ಎನಿಸಿತು ಆಕೆಗೆ.
"ಹೂಂ ಕಣೇ. ನೆಂಟರು ಬರ್ತಾರೆ."
ಅದನ್ನು ತಿಳಿದ ಮೇಲಂತೂ ಕೆಲಸದಾಕೆ ಎಲ್ಲಿಲ್ಲದ ಸಡಗರದಿಂದ ಓಡಾಡಿದಳು.
ಹೆಜ್ಜೆ ಹೆಜ್ಜೆಗೂ ರುಚಿನೋಡುತ್ತ ಅಡುಗೆ ಮಾಡಿದಳು ಸುನಂದಾ. ಯಾವು
ದಕ್ಕಾದರೂ ಉಪ್ಪು ಕಡಮೆಯಾಯ್ತೆ? ಸಿಹಿ ಸಾಕೆ? ಅನ್ನ ಸರಿಯಾಗಿ ಬೆಂದಿದೆಯೆ?
ಪ್ರತಿಯೊಂದೂ.
ಕೆಲಸದ ಹೆಂಗಸು ಗಾಡಿಯನ್ನು ಇದಿರು ನೋಡಿದಳು. ಆದರೆ, ನೆಂಟರು
ಬಂದಿಳಿದುದು ಕಾಲ್ನಡಿಗೆಯಲ್ಲೇ. ಅವರ ಪರಿಚಯ ಆಕೆಗಿಲ್ಲವೆ? ಸುಳ್ಳು ಹೇಳಿದ್ದರು
ಅಮ್ಮಾವರು.
ಜಯದೇವ ಅಡುಗೆ ಮನೆಯತ್ತ ತಲೆಹಾಕಿ ಕೇಳಿದ:
"ಎಲ್ಲಾ ಸಿದ್ದವಾಗಿದೆಯೇನೆ?"
"ಹೂಂ."
ಇನ್ನು ಊಟದೆಲೆಗಳನ್ನು ತೊಳೆಯೋಣವೆಂದು ಕೈ ಹಾಕಿದರೆ ಅಲ್ಲೇನಿತ್ತು?
"ಅಯ್ಯೋ! ಊಟಕ್ಕೆ ಎಲೆಯೇ ಇಲ್ಲಾಂದ್ರೆ."
ಕೆಲಸದವಳು ಊಟದ ಎಲೆಗಳನ್ನು ಮಾರುತ್ತಿದ್ದ ಮನೆಗೆ ಓಡಿದಳು.
...ಇಂದಿರೆ, ಆಕೆಯ ತಾಯಿ, ಜಯದೇವ_ಮೂವರು ಊಟಕ್ಕೆ ಕುಳಿತರು.
ಬಡಿಸತೊಡಗಿದಾಗ ಪುನಃ ಸುನಂದೆಗೆ ಅಳುಕಿತು:

61