ಪುಟ:ನವೋದಯ.pdf/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

482

ಸೇತುವೆ

"ಅಡುಗೆ ನಿಮಗೆ ರುಚಿಯಾಗುತ್ತೊ ಇಲ್ವೋ?"
"ಬಡಿಸಮ್ಮಾ. ತಿಂದುನೋಡಿ ಹೇಳ್ತೀವಿ," ಎಂದರು ಇಂದಿರೆಯ ತಾಯಿ.
"ನಮ್ಮನೇಲಿ ಟೀಕೆ ಮೆಚ್ಚುಗೆಯೆಲ್ಲ ಊಟ ಮುಗಿದ ಮೇಲೆ. ಇದೊಂದು ಹಳೆ
ಪದ್ದತಿ," ಎಂದ ಜಯದೇವ.
ಆ ಪದ್ದತಿಯನ್ನು ಇಂದಿರೆಯ ತಾಯಿ ಮುರಿದರು. ಸಿಹಿಯ ರುಚಿ ನೋಡಿ,
ಹುಳಿಯನ್ನವನ್ನು ಬಾಯಿಗಿಟ್ಟು, ಪಲ್ಯವನ್ನು ಮುಟ್ಟಿ, ಅವರೆಂದರು:
"ಸೊಗಸಾಗಿದೆಯಮ್ಮಾ!"
"ಸುಮ್ಸುಮ್ನೆ ಹೇಳ್ತೀರಾ," ಎಂದಳು ಸುನಂದಾ.
"ಚೆನ್ನಾಗಿದೆ ಕಣ್ರೀ ನಿಜವಾಗ್ಲೂ," ಎಂದು ಇಂದಿರಾ, ತಾಯಿಯ ಅಭಿಪ್ರಾಯ
ವನ್ನು ಸಮರ್ಥಿಸಿದಳು.
ಅದನ್ನು ನಂಬುವುದಕ್ಕೂ ಸುನಂದಾ ಸಿದ್ಧಳಿರಲಿಲ್ಲ. ಆಕೆ ಗಂಡನ ಮುಖವನ್ನು
ಸೂಕ್ಷ್ಮವಾಗಿ ದಿಟ್ಟಿಸಿದಳು. ಅಲ್ಲಿ ಯಾವ ರೀತಿಯ ಅಸಮಾಧಾನವೂ ಇರಲಿಲ್ಲ.
ಮೆಚ್ಚುಗೆಯ ಮಾತು ಕೇಳಿಬರದೆ ಇದ್ದರೂ ಆ ಕೆಲಸವನ್ನು ನೋಟ ಮಾಡಿತು.
ಪರೀಕ್ಷೆಯಲ್ಲಿ ಉತ್ತೀರ್ಣಳಾದೆನೆಂದು ಹಿಗ್ಗಿದಳು ಸುನಂದಾ. ಗಲ್ಲದ ಮೇಲಿದ್ದ
ಬೆವರನ್ನು ಆಕೆ ಸೆರಗಿನ ಅಂಚಿನಿಂದ ಮೆಲ್ಲನೆ ಒರೆಸಿದಳು.
ಊಟದ ನಡುವೆ ಮಾತನಾಡಲು ವಿಷಯವಿತ್ತು, ವಾರ್ಷಿಕೋತ್ಸವ, ನಾಟಕ
ಗಳು, ತಿಮ್ಮಯ್ಯನವರ ಪ್ರಶಂಸೆ, ಅಭಿನಯಿಸಿದ ಹುಡುಗಿಯರು.
ಇಂದಿರಾ ಸುಮ್ಮನಿರುತ್ತಿದ್ದಳೆಂದು ಜಯದೇವ ಆಗಾಗ್ಗೆ ಕೇಳುತ್ತಿದ್ದ, "ಅಲ್ವೇ
ನಮ್ಮ?” ಎಂದು.
"ಹೂಂ," ಎಂಬ ಉತ್ತರವೇ ಬರುತ್ತಿತ್ತು ಪ್ರತಿ ಸಾರಿಯೂ.
ತಾಯಿ ಮಗಳಿಗೆ ಅಂದರು:
"ಅಣ್ಣನ ಜತೆ ಮಾತಾಡೋಕೆ ಅದೇನು ಸಂಕೋಚವೆ ನಿನಗೆ?"
ಇಂದಿರಾ ಸುಮ್ಮನೆ ನಕ್ಕು, ಪಲ್ಯದೊಡನೆ ಆಟವಾಡಿದಳು. ಎಲೆಯಲ್ಲಿ ಅನ್ನ
ವಿರಲಿಲ್ಲ. ಅದನ್ನು ನೋಡಿದ ಜಯದೇವ ಸುನಂದೆಯ ಗಮನವನ್ನು ಆ ಕಡೆಗೆ ಎಳೆದ.
ಸುನಂದಾ ಇಂದಿರೆಗೆ ಅನ್ನ ಬಡಿಸಿದಳು.
ಅವರ ಊಟ ಮುಗಿದ ಮೇಲೆ ಸುನಂದೆಯ ಸರದಿ. ಆಗ ಇಂದಿರಾ ಆಕೆಗೆ
ನೆರವಾದಳು.
ಅವರಿಬ್ಬರೂ ಹೊರಬಂದಾಗ ಇಂದಿರೆಯ ತಾಯಿ ಸುನಂದೆಯನ್ನು ಸಮೀಪಕ್ಕೆ
ಕರೆದು ಕೇಳಿದರು:
"ಆಯಾಸವಾಯ್ತಾ?"
"ಇಲ್ಲ," ಎಂದಳು ಸುನಂದಾ.
ಅವರನ್ನು ನೋಡುತ್ತ ಸುನಂದೆಗೆ, ಹಿಂದೆಯೊಮ್ಮೆ ಆಗಿದ್ದಂತೆ ತಾಯಿಯ