ಪುಟ:ನವೋದಯ.pdf/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

486

ಸೇತುವೆ

ಅವರೆಂದರು:
"ಇದು ಸಂಪಾದನೆಗೋಸ್ಕರ ಕೋಚಿಂಗ್ ಅಲ್ಲ ಜಯದೇವ್. ನೀವು ಹೇಳಿ
ದಿರೀಂತ ಒಪ್ಕೊಂಡಿದೀನಿ. ಒಂದು ರೀತಿಯ ವಿದ್ಯಾದಾನ."
ನಂಜುಂಡಯ್ಯ ಪಾಠ ಹೇಳಲು ಒಪ್ಪಿದ ಸುದ್ದಿಯನ್ನು ಚೂಡಾಮಣಿ ಇಂದಿ
ರೆಯ ಮನೆಗೆ ಮುಟ್ಟಿಸಿದಳು.
ಆ ಸಂಜೆ, ತಿಮ್ಮಯ್ಯನವರೊಡನೆ ಜಯದೇವ ಮನೆ ಸೇರಿದ ಐದು ನಿಮಿಷ
ಗಳಲ್ಲೆ ಇಂದಿರೆಯ ತಾಯಿಯ ಆಗಮನವಾಯಿತು. ಪಾಠ ಹೇಳಿಸುವ ವಿಷಯ
ವಾಗಿಯೇ ಮಾತನಾಡಲು ಆಕೆ ಬಂದಿರಬಹುದೆಂದು ಜಯದೇವ ಭಾವಿಸಿದ.
"ಬನ್ನೀಮ್ಮಾ, ಒಳಗ್ಬನ್ನಿ," ಎಂದ.
ಅವರು ಮುಗುಳುನಗಲು ಯತ್ನಿಸಿದರಾದರೂ ಮುಖದಲ್ಲಿ ಗೆಲುವಿರಲಿಲ್ಲ.
ತಿಮ್ಮಯ್ಯನವರನ್ನು ನೋಡಿ ಅವರು ಕಕ್ಕಾವಿಕ್ಕಿಯಾದಂತೆ ತೋರಿತು.
"ನಾನು ಬರಲಾ ಹಾಗಾದರೆ?" ಎಂದರು ಸೂಕ್ಷ್ಮಗ್ರಾಹಿಯಾದ ತಿಮ್ಮಯ್ಯ.
ಆಗ ಆಕೆಯೇ ಅಂದರು:
"ಬೇಡಿ, ಬೇಡಿ. ನೀವೂ ಇರಿ. ನಿಮಗೂ ಗೊತ್ತಾಗಲಿ."
ಪರಿಚಿತ ಧ್ವನಿ ಕೇಳಿ ಸುನಂದೆಯೂ ಒಳ ಬಾಗಿಲಿಗೆ ಬಂದು ನಿಂತಳು. ಆದರೆ,
ಇಂದಿರೆಯ ತಾಯಿಯ ಮುಖದ ಮೇಲಿದ್ದ ದುಗುಡದ ಭಾವವನ್ನು ಕಂಡು ಆಕೆಗೆ
ಗಾಬರಿಯಾಯಿತು.
ಮಡಿಲಿನಿಂದೊಂದು ಲಕೋಟೆಯನ್ನು ಹೊರತೆಗೆದು ಅದನ್ನು ಜಯದೇವನ
ಕೈಗಿತ್ತಳು ಇಂದರೆಯ ತಾಯಿ.
ಒಡೆದಿದ್ದ ಲಕೋಟೆ ಮಡಚಿತ್ತು.
"ಏನಮ್ಮಾ ಇದು?"
"ಓದಿ ನೋಡಿ. ನಾನು ಕೆಲಸದವಳನ್ನ ಕರಕೊಂಡು ಅಂಗಡಿಗೆ ಹೋಗಿದ್ದಾಗ
ಯಾವನೋ ಬೀದಿ ಹುಡುಗ ಇಂದಿರೆಯ ಕೈಗೆ ಕೊಟ್ಟು ಹೋದನಂತೆ."
ಮುಂದಿನದನ್ನು ಊಹಿಸಿಕೊಂಡ ತಿಮ್ಮಯ್ಯ ಟೋಪಿಯನ್ನು ಹಿಂದಕ್ಕೂ
ಮುಂದಕ್ಕೂ ಸರಿಸಿದರು.
ಜಯದೇವ ಕಾಗದವನ್ನು ಹೊರತೆಗೆದು ಓದಿದ. ಅದು ಪ್ರೇಮ ಪತ್ರ:
'ನಾಟ್ಯ ವಿಲಾಸಿನಿ ಇಂದಿರೆಗೆ.'
'ನಿನ್ನನ್ನು ನೋಡಿದ ಕ್ಷಣದಿಂದ ನಾನು ಹುಚ್ಚನಾಗಿದ್ದೇನೆ. ನಾನು ಕೇಳು
ತ್ತಿರುವುದು ಪ್ರೇಮ ಭಿಕ್ಷೆ. ನನ್ನ ಜೀವಮಾನದಲ್ಲಿ ಹೀಗೆ ಪ್ರಾರ್ಥಿಸುತ್ತಿರು
ವುದು ಇದೇ ಮೊದಲನೆಯ ಸಲವೆಂಬುದನ್ನು ದಯವಿಟ್ಟು ನಂಬು. ಬರಿಯ
ಉಪಾಧ್ಯಾಯ ಎಂದು ಉಪೇಕ್ಷೆ ಮಾಡಬೇಡ. ನನ್ನ ಯೋಗ್ಯತೆಯ ಪರಿಚಯ
ಮಾಡಿಕೊಡಲು ಅವಕಾಶ ನೀಡು. ನಮ್ಮೊಳಗಿನ ಸಂಬಂಧ ಯಾವ ರೀತಿ ಇರ