ಪುಟ:ನವೋದಯ.pdf/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

491

ಆತ ಅಷ್ಟೇ ಹೇಳಿದನಲ್ಲಾ ಎಂದು ರಾಮಾಚಾರಿ ಸರಾಗವಾಗಿ ಉಸಿರಾಡ
ತೊಡಗಿದ.
...ತಿಮ್ಮಯ್ಯ ಸಂಜೆ ಬಂದು ಏನಾಯಿತೆಂದು ವಿಚಾರಿಸಿದರು.
ವಿವರ ತಿಳಿದು ಅವರೆಂದರು:
"ಇಷ್ಟಕ್ಕೆಲ್ಲ ಅವನು ಸುಧಾರಿಸೋದಿಲ್ಲ ಜಯದೇವರೆ. ಇಂದಿರಾ ಅಲ್ದಿದ್ರೆ
ಇನ್ನೊಬ್ಬಳು. ನೋಡ್ತಿರಿ."
....ವರ್ಷಾವಧಿ ಪರೀಕ್ಷೆ ಹತ್ತಿರ ಬಂದು ಹುಡುಗರ ಓದು ಹೆಚ್ಚಿತು. ಉಪಾ
ಧ್ಯಾಯರಿಗೆ ಬಿಡುವು.
ವರ್ಷವಿಡೀ ಓದಿ ಸಾಧಿಸಿದ್ದ 'ಪ್ರಾವೀಣ್ಯ'ವನ್ನು ಕೆಲವೇ ಗಂಟೆಗಳ ಅವಧಿ
ಯಲ್ಲಿ ಪ್ರದರ್ಶಿಸುವ ಅದ್ಭುತ ಕಸರತ್ತಿಗೆ ವಿದ್ಯಾರ್ಥಿಗಳು ಸಿದ್ಧರಾದರು.
ಒಂದರ ಮೇವನ್ನು ಇನ್ನೊಂದು ಕುರಿ ತಿನ್ನದಂತೆ ಉಪಾಧ್ಯಾಯರು ಕಾವಲು
ನಿಂತರು.
ತಿಮ್ಮಯ್ಯನವರ ಶಾಲೆಯಲ್ಲಿ ಪರೀಕ್ಷೆ ಅಷ್ಟು ಕಷ್ಟವಾಗಿರಲಿಲ್ಲ. ಆದರೂ ಆ
ನೂರಾರು ಪುಟಾಣಿಗಳು, "ನಮಗೂ ಪರೀಕ್ಷೆ" ಎನ್ನುತ್ತ ಶಾಲೆಯವರೆಗೂ ಹೋಗಿ
ಬಂದುವು.
...ತಿಮ್ಮಯ್ಯನವರಿಗೆ ಸಂಬಂಧಿಸಿ ಮಾಡಬೇಕಾದೊಂದು ಕೆಲಸವನ್ನು ಜಯ
ದೇವ ಬಹಳ ದಿನಗಳಿಂದ ಹಾಗೆಯೇ ಉಳಿಯಗೊಟ್ಟಿದ್ದ. ಆ ವಿಷಯದಲ್ಲಿ ಸಮ
ಭಾಗಿನಿಯಾಗಿದ್ದ ಸುನಂದೆ ಮತ್ತೆ ಅದರ ನೆನಪು ಮಾಡಿಕೊಟ್ಟಳು:
"ಈ ಸಲ ನಾವು ಹೋಗೋಕ್ಮುಂಚೆನೇ ಆ ಕೆಲಸ ಮುಗಿಸಬಹುದಲ್ವೆ?"
"ಹೂ೦. ಒಪ್ಪಿಸ್ಬೇಕಲ್ಲಪ್ಪ ಆ ಮಹಾರಾಯನನ್ನ."
ಮಹಾರಾಯರು ಜಯದೇವನನ್ನು ಕಾಣಲೆಂದು ಬಂದರು.
"ಸಾಹೇಬರು ಹೊರಟೇಬಿಡ್ತೀರಿ ಇನ್ನು. ಭೇಟಿ ಸರ್ವೋದಯದ ದಿನವೋ?"
ಎಂದರು.
"ಹೂಂ. ತಿಮ್ಮಯ್ಯನವರೆ. ನೀವೂ ಬರ್ರ್ತೀರೇನು ಬೆಂಗಳೂರಿಗೆ?"
"ನಾನೇ! ಇನ್ನು ಆ ವೈಭವವೊಂದು ಬಾಕಿ."
"ಯಾಕೆ ಹಾಗಂತೀರಾ? ಕಾಶ್ಮೀರ ಕೆಟ್ಹೋಯ್ತೆ ಬೆಂಗಳೂರು?"
"ಸರಿ. ನಿವೃತ್ತಿಯಾಗೋಕ್ಮುಂಚೆ ಒಮ್ಮೆ ಬರ್ರ್ತೀನಪ್ಪ ನಿಮ್ಮೂರಿಗೆ. ಬೋರೇ
ಗೌಡ ಬಂದ ಬೆಂಗ್ಳೂ‌ರ್‍ಗೆ_ಅಂತ ಕೈಲಾಸಂ ಹಾಡ್ಲಿಲ್ವೆ? ಹಾಗೇ ಆಗುತ್ತೆ ನಾನು
ಬಂದ್ರೆ!"
"ಕೋಟಿ ರೂಪಾಯಿ ಖರ್ಚು ಮಾಡಿ ವಿಧಾನ ಸೌಧ ಕಟ್ತಾ ಇದಾರೆ. ಬೇಗನೆ
ಕರ್ನಾಟಕ ಪ್ರಾಂತ ರಚನೆಯಾಗುತ್ತೆ. ನಮ್ಮ ನಾಡಿನ ಮುಖ್ಯ ಪಟ್ಟಣಕ್ಕೆ ನಮ್ಮ ಜನ
ಬರೋದು ಬೇಡ್ವೆ?"