ಪುಟ:ನವೋದಯ.pdf/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



492

ಸೇತುವೆ

"ವಿಧಾನ ಸೌಧದ ಉದ್ಘಾಟನಾ ಸಮಾರಂಭಕ್ಕಂತೂ ಎಲ್ಲಾ ಪ್ರಾಥಮಿಕ
ಉಪಾಧ್ಯಾಯರಿಗೂ ಆಹ್ವಾನ ಕೊಡ್ತಾರೇಂತ ಕೇಳಿದೀನಿ. ನಾವು ಕಾರಿನಲ್ಲಿ ಬರಬೇಕೆ,
ಬಸ್ನಲ್ಲಿ ಬರ್‍ಬೇಕೆ, ಅನ್ನೋದು ಮಾತ್ರ ತೀರ್ಮಾನವಾಗಿಲ್ವಂತೆ!"
"ಏನು ಹೇಳಿದರೂ ನೀವು ಗಾಳಿಗೆ ಊದ್ತೀರಾ. ಮುಂದಿನ ವರ್ಷ ನೀವು
ನಮ್ಮ ಜತೇಲಿ ಬರೋದು ಖಂಡಿತ. ತಿಳೀತೆ?"
"ಚಿತ್ತ."
ಅದೇ ಸರಿಯಾದ ಅವಕಾಶವೆಂದು ಜಯದೇವನೆಂದ:
"ಹಾಗೇ ನನ್ನ ಇನ್ನೊಂದು ಮಾತು ನೀವು ನಡೆಸ್ಕೊಡ್ಬೇಕು."
"ಅಪ್ಪಣೆಯಾಗಲಿ."
"ನಿಮ್ಮ ಕಿಸೆ ಗಡಿಯಾರ ನೀವು ವಾಪಸು ತಗೋಬೇಕು."
ಉತ್ತರ ಬರಲಿಲ್ಲ. ತಿಮ್ಮಯ್ಯ ತಲೆಯೆತ್ತಿ ಜಯದೇವನನ್ನು ನೋಡಿದರು.
"ಜಯದೇವರೆ, ದಯವಿಟ್ಟು ಕ್ಷಮಿಸಿ. ಆ ವಿಷಯ ನೀವು ಪ್ರಸ್ತಾಪಿಸ್ಬಾರದು"
ತೊಡಕು ಮೊದಲಾಯಿತೆಂದು ಜಯದೇವ ಚಡಪಡಿಸಿದ.
"ನಮ್ಮ ಸ್ನೇಹಕ್ಕೆ ಹತ್ತು ರೂಪಾಯಿ ಬೆಲೆಯೂ ಇಲ್ಲವೆ ಹಾಗಾದರೆ?"
ತಿಮ್ಮಯ್ಯ, ಒತ್ತಾಯವನ್ನು ಪ್ರತಿಭಟಿಸುವ ಮಗುವಿನಂತೆ ತುಟಿಗಳೆರಡನ್ನೂ
ಮುಂದಕ್ಕೆ ಚಾಚಿ, ಎರಡು ಮೊಣಕಾಲುಗಳನ್ನೂ ಒಂದೇ ಸಮನೆ ಆಡಿಸಿದರು.
"ಬೇಡಿ! ನಮ್ಮ ಸ್ನೇಹಕ್ಕೆ ದಯವಿಟ್ಟು ರೂಪಾಯಿಯ ಬೆಲೆ ಕಟ್ಬೇಡಿ!"
"ಕಟ್ಟೋದಿಲ್ಲ. ಆದರೆ ನಮ್ಮ ಸ್ನೇಹ ನಿಜವಾದ್ದೂಂತ ನೀವು ತೋರಿಸ್ಕೊ
ಡ್ಬೇಕು."
ಹೇಗೆ?_ಎಂಬುದನ್ನು ಕೇಳಬೇಕಾದುದಿರಲಿಲ್ಲ. ಅದಕ್ಕೆ ದೊರೆಯುವ ಉತ್ತರ
ವನ್ನು ತಿಮ್ಮಯ್ಯ ಆಗಲೇ ಊಹಿಸಿದ್ದರು.
ಅವರು ಸುಮ್ಮನಿದ್ದುದನ್ನು ಕಂಡು ಜಯದೇವನೆ ಹೇಳಿದ:
"ನೋಡಿ. ಈ ಮಾತನ್ನ ನಡೆಸ್ಕೊಡೀಂತ ಕೇಳ್ತಿರೋದು ನಾನೊಬ್ಬನೇ ಅಲ್ಲ."
ಸುನಂದಾ ಧ್ವನಿ ಕೂಡಿಸಿದಳು:
"ಗಡಿಯಾರ ಇದ್ದರೆ ಎಷ್ಟೊಂದು ಅನುಕೂಲವಾಗುತ್ತೆ ನಿಮಗೆ. ನೀವು ಅದನ್ನ
ಇಟ್ಕೊಳ್ಳೋದು ಷೋಕಿಗೋಸ್ಕರ ಅಲ್ವಲ್ಲಾ. ದಿನಾ ಎಷ್ಟೊಂದು ದೂರದಿಂದ
ಬರಬೇಕು ನೀವು!"
ತಿಮ್ಮಯ್ಯ ನೆಲನೋಡುತ್ತ ಒಂದೇ ಸಮನೆ ಆಗದೆಂದು ತಲೆಯಲ್ಲಾಡಿಸಿದರು.
ಪುನಃ ನಿರಾಕರಣೆಯ ಉತ್ತರವೇ ಬರುವುದೆಂದು ನಿರೀಕ್ಷಿಸಿದರು ಸುನಂದೆ ಜಯ
ದೇವರು.
ಆಗ ಒಮ್ಮೆಲೆ ತಲೆಯೆತ್ತಿ ತಿಮ್ಮಯ್ಯನೆಂದರು:
"ಆಗಲಿ. ಬಿಡಿಸ್ಕೋತೀನಿ."