ಪುಟ:ನವೋದಯ.pdf/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

493



ಅವರ ಕಣ್ಣುಗಳಿಂದ ಕಂಬನಿ ತುಳುಕುತ್ತಿತ್ತು.
"ನನ್ನ ಕೈಗೆ ಆ ಮಾರವಾಡಿ ಅದನ್ನು ಕೊಡುವ ಹಾಗಿದ್ದಿ ದ್ದರೆ ಯಾವತ್ತೋ
ತಂದ್ಬಿಡ್ತಾ ಇದ್ದೆ," ಎನ್ನುತ್ತ ಜಯದೇವ, ಹತ್ತು ರೂಪಾಯಿಯ ನೋಟನ್ನು ಒಳಗಿ
ನಿಂದ ತಂದು ತಿಮ್ಮಯ್ಯನವರ ಕೈಯಲ್ಲಿರಿಸಿದ:
ಗಂಭೀರವಾದ ಧ್ವನಿಯಲ್ಲಿ ತಿಮ್ಮಯ್ಯ ಅಂದರು:
"ಆತನಿಗೆ ಬಡ್ಡಿ ಕೊಡ್ಬೇಕಾಗುತ್ತೆ.”
ಆ ಅಂಶ ಜಯದೇವನಿಗೆ ಹೊಳೆದೇ ಇರಲಿಲ್ಲ.
"ಎಷ್ಟಾಗಬಹುದು?"
“ಎರಡೂವರೆಯಾದರೂ ಆದೀತು."
ಅಷ್ಟು ಹಣವನ್ನೂ ಜಯದೇವ ಒಳಗಿನಿಂದ ತಂದುಕೊಟ್ಟ.
ಆ ಬಳಿಕ ಆ ಸಂಜೆಯೆಲ್ಲ ತಿಮ್ಮಯ್ಯ ಹೆಚ್ಚು ಮಾತನಾಡಲೇ ಇಲ್ಲ. ಏನಾ
ದರೂ ಕೇಳಿದರೆ ಒಂದೆರಡು ಪದಗಳಲ್ಲೆ ಉತ್ತರಕೊಟ್ಟು ಮುಗಿಸುತ್ತಿದ್ದರು.
...ಮಾರನೆಯ ದಿನವೆ ತಿಮ್ಮಯ್ಯ ಮಾರವಾಡಿಯ ಅಂಗಡಿಗೆ ಹೋದರು.
"ಬನ್ನಿ ಮೇಸ್ಟ್ರೆ,ಏನು ತಂದಿದೀರಿ?" ಎಂದು ಕೇಳಿದ ಮಾರವಾಡಿ.
"ಹಣ ತಂದಿದೀನಿ," ಎನ್ನುತ್ತ ತಿಮ್ಮಯ್ಯ ನಶ್ಯದ ಡಬ್ಬವನ್ನೇ ಹೊರ
ತೆಗೆದರು.
ಬಡ ಉಪಾಧ್ಯಾಯ ಹಾಸ್ಯಕ್ಕೋಸ್ಕರ ಹೀಗೆ ಹೇಳುತ್ತಿರಬಹುದೇ ಎಂದು
ಮಾರವಾಡಿಗೆ ಸಂದೇಹ ಹುಟ್ಟಿತು.
ಅದನ್ನು ಗಮನಿಸಿದ ತಿಮ್ಮಯ್ಯ ಹೇಳಿದರು:
"ನಮ್ಮದು ಗಡಿಯಾರ ಬೇಕಾಗಿದೆ."
ಮಾರವಾಡಿಯ ಆಕ್ಷೇಪವಿರಲಿಲ್ಲ.
“ಸಂತೋಷ."
ಆತ ಕೈ ಮುಂದಕ್ಕೆ ಚಾಚಿದ.
ಮೊದಲು ಹತ್ತು ರೂಪಾಯಿ ಮತ್ತು ಚೀಟಿ, ಮಾರವಾಡಿ ಬಡ್ಡಿ ಎಣಿಸಿದ
ಬಳಿಕೆ ಎರಡೂವರೆ ರೂಪಾಯಿ.
[ತಿಮ್ಮಯ್ಯನವರ ಲೆಕ್ಕ ಸರಿಯಾಗಿಯೇ ಇತ್ತು. ಪ್ರತಿದಿನವೂ ಅವರು ಅದನ್ನು
ಸ್ಮರಿಸುತ್ತಿದ್ದುದರಿಂದ ಮರೆಯುವುದಾದರೂ ಹೇಗೆ ಸಾಧ್ಯ?]
ಮಾರವಾಡಿ ಒಳಗಿನಿಂದ ಆ ಗಡಿಯಾರವನ್ನು ತಂದ. ಮ್ಹಾಲು ತಲಪಿತೆಂದು
ಬರೆಸಿಕೊಂಡು, ಅದನ್ನು ತಿಮ್ಮಯ್ಯನವರ ಕೈಗಿತ್ತ.
'ಮ್ಯೂಸಿಯಂಗೆ ಹೋಗೋ ಯೋಗ್ಯತೆ ಇದಕ್ಕಿಲ್ದೆ ಹೋಯ್ತು' ಎಂದು ಮನ
ಸಿನಲ್ಲೆ ಗೊಣಗುತ್ತ ತಿಮ್ಮಯ್ಯ, ಗಡಿಯಾರವನ್ನು ಅಂಗೈಯಲ್ಲಿಟ್ಟು ಎತ್ತಿ
ನೋಡಿದರು: