ಪುಟ:ನವೋದಯ.pdf/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

498

ಸೇತುವೆ

"ಪರವಾಗಿಲ್ಲ. ಅಲ್ಲಿ ಅನುಕೂಲವಾಗಿಯೇ ಇದೆ."
ಒಳಗಿನಿಂದ ಬಂದು ಮುಖ ತೋರಿಸದೆ ಸುನಂದೆಗೆ ನಂಜುಂಡಯ್ಯ ನಮಸ್ಕ
ರಿಸಿದರು.
"ಪಾರ್ವತಮ್ಮ ಬರಲಿಲ್ವೇನು?" ಎಂದು ಸುನಂದಾ ಕೇಳಿದಳು.
"ಇಲ್ಲವ್ವಾ. ಇಲ್ಲಿ ತುಂಬ ಕೆಲಸವಿದೇಂತ ಆಕೇನ ಕರಕೊಂಡು ಬರ್ಲಿಲ್ಲ."
ಬೆಂಗಳೂರಿಗೆ ಬಂದ ಕೆಲಸದ ವಿಷಯ ಪ್ರಸ್ತಾಪಿಸುತ್ತ ನಂಜುಂಡಯ್ಯನೆಂದರು:
"ಮುಖ್ಯ ಸಚಿವರನ್ನು ಶಂಕರಪ್ಪ ನಾಳೆ ನೋಡ್ತಾರೆ. ನಾನು ಸರಕಾರಿ ನೌಕರ
ನಾಗಿರೋದರಿಂದ ಈ ಸಂಬಂಧದಲ್ಲಿ ಸಚಿವರನ್ನು ಕಾಣೋದು ಚೆನ್ನಾಗಿರೋದಿಲ್ಲ.
ಆದರೆ ಪತ್ರಿಕಾ ಸಂಪಾದಕರನ್ನು ಮಾತ್ರ ನಾವಿಬ್ಬರೂ ಹೋಗಿ ಭೇಟಿಯಾಗೋಣ.
ಏನ್ಹೇಳ್ತೀರಾ?"
ಅಂತಹ ಭೇಟಿಯಿಂದ ಯಾವ ಪ್ರಯೋಜನವೂ ಇಲ್ಲವೆಂಬುದು ಖಚಿತ
ವಾಗಿದ್ದರೂ, ನಂಜುಂಡಯ್ಯನವರ ಉತ್ಸಾಹವನ್ನು ಭಂಗಗೊಳಿಸಲು ಜಯದೇವ
ಯತ್ನಿಸಲಿಲ್ಲ.
"ಆಗಲಿ ಸಾರ್, ಹೋಗಿ ಬರೋಣ."
"ಇವತ್ತು ನೀವು ಬಿಡುವಾಗಿದೀರಾ?" ಎಂದು ನಂಜುಂಡಯ್ಯ ಕೇಳಿದರು.
"ಬಿಡುವಲ್ದೆ ಇನ್ನೇನು? ಹೇಳಿ. ಎಲ್ಲಿಗಾದರೂ ಹೋಗೊಣ್ವೆ?"
ಹತ್ತಿರ ಯಾರೂ ಇಲ್ಲದಿದ್ದರೂ ನಂಜುಂಡಯ್ಯ ಸ್ವರ ತಗ್ಗಿಸಿ ಹೇಳಿದರು:
"ಬನ್ನಿ. ಒಂದು ಸಿನಿಮಾ ನೋಡೋಣ. ಶಂಕರಪ್ಪ ಯಾರೋ ಸ್ನೇಹಿತರ
ಮನೆಗೆ ಹೋಗಿದಾರೆ. ಬರೋದು ತಡವಾಗುತ್ತೆ."
"ಹೋಗೋಣ."
"ನನಗೆ ಇಂಗ್ಲಿಷ್ ಚಿತ್ರ ಅಂದರೆ ಇಷ್ಟ."
"ಪ್ಲಾಜಾದಲ್ಲಿ ಚೆನ್ನಾಗಿರೋದು ಯಾವುದೋ ಇದೇಂತ ನನ್ನ ಭಾವ
ಹೇಳ್ತಿದ್ದ."
"ಅವರೂ ಬರ್ತಾರೇನು?"
"ಇಲ್ಲ. ಆತ ಟೆಲಿಫೋನ್ ಇಂಡಸ್ಟ್ರೀಸ್ ನಲ್ಲಿದಾರೆ. ಮನೆಗೆ ಬರೋದು ತಡ
ವಾಗುತ್ತೆ."
ಮತ್ತೆ ಹೊರಬರಲು ಇಷ್ಟಪಡದ ಸುನಂದಾ ಬಾಗಿಲ ಮರೆಯಲ್ಲೆ ನಿಂತು,
ಗಂಡನಿಗೆ ಎದ್ದು ಬರಲು ಸನ್ನೆ ಮಾಡಿದಳು. ಓವಲ್ಟಿನ್ ಸಿದ್ಧವಾಗಿತ್ತು. ಎರಡು
ಕಪ್ಪುಗಳನ್ನಿರಿಸಿದ್ದ ದೊಡ್ಡ ತಟ್ಟೆಯನ್ನೆತ್ತಿ ತಂದು ನಂಜುಂಡಯ್ಯನವರ ಮುಂದೆ
ಜಯದೇವ ಹಿಡಿದ.
ಓವಲ್ಟಿನ್ ಹೀರುತ್ತ ಅವರೆಂದರು:
"ಸಿನಿಮಾದ ವಿಷಯದಲ್ಲಿ ನನಗೆ ಇತಿಮಿತಿ ಇಲ್ಲ. ಈಗಿರೋ ನಮ್ಮ ಜವಾನ