ಪುಟ:ನವೋದಯ.pdf/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

500

ಸೇತುವೆ

ದ್ಯೋಗಿಗಳ ವಾಹನ ಅವರ ಹಿಂದೆಯೇ ಬರುತ್ತೆ."
ಮತ್ತೊಬ್ಬ ಸಂಪಾದಕರಿಂದಲೂ ಅಂತಹದೇ ಭರವಸೆ ದೊರೆಯಿತು.
ಜಯದೇವ ನಂಜುಂಡಯ್ಯನಿಗೆ ಹೇಳಿದ:
"ಇಲ್ಲಿ ಪ್ರಬಲವಾಗಿರೋ ಪತ್ರಿಕೆಗಳು ಇವೆರಡೇ ಸಾರ್."
"ನಮ್ಮೂರಲ್ಲಿ ಒಳ್ಳೆಯ ಒಬ್ಬಿಬ್ಬರು ಸುದ್ದಿಗಾರರನ್ನೂ ನಾವು ತಯಾ‍‍‍‍‍‍ರ್‍ಮಾ
ಡ್ಬೇಕು. ಇದು ಬಹಳ ಅಗತ್ಯ," ಎಂದರು ನಂಜುಡಯ್ಯ.
....ಮತ್ತೊಂದು ಸಂಜೆ ಜಯದೇವ ಮತ್ತು ನಂಜುಂಡಯ್ಯ ಇಬ್ಬರೇ ಇದ್ದಾಗ,
ಹೈಸ್ಕೂಲಿಗೋಸ್ಕರ ಅಧ್ಯಾಪಕರನ್ನು ನೇಮಿಸಿಕೊಳ್ಳುವ ಮಾತು ಬಂತು.
"ಇನ್ನೂ ಇಬ್ಬರು ಮೂವರು ಬೇಕಾಗ್ತಾರೆ ಜಯದೇವ್."
"ಉಪಾಧ್ಯಾಯರು ಸಿಗೋದೇನೂ ಕಷ್ಟವಾಗದೂಂತ ತೋರುತ್ತೆ. ಒಂದೆರಡು
ಪತ್ರಿಕೆಗಳಲ್ಲಿ ಜಾಹೀರಾತು ಕೊಟ್ಟರಾಯ್ತು."
"ಛೆ! ಛೆ! ಮೊದಲು ಬೇಕಾದವರನ್ನು_ಯೋಗ್ಯರನ್ನು_ಆರಿಸಿಕೊಂಡ್ಮೇಲೆ
ಜಾಹೀರಾತು ಕೊಡ್ಬೇಕು. ಇಲ್ದೇ ಹೋದರೆ ಫಜೀತಿಯಾಗ್ಬಿಡುತ್ತೆ."
"ಅದು ಹ್ಯಾಗೆ ಸಾಧ್ಯ ಸಾರ್?"
ಆ ಪ್ರಶ್ನೆಯಿಂದ ನಂಜುಂಡಯ್ಯ ಆಶ್ಚರ್ಯಗೊಂಡರು.
"ನಿಮಗೇನೂ ತಿಳೀದು ಜಯದೇವ್. ಈಗ ಪತ್ರಿಕೆಗಳಲ್ಲಿ 'ಬೇಕಾಗಿದಾರೆ'
ಜಾಹೀರಾತು ನೋಡ್ತೀವಲ್ಲ. ಇವೆಲ್ಲಾ ಪ್ರಕಟವಾಗೋದು ನೇಮಕಗಳಾದ್ಮೇಲೆಯೇ.
ನಿಮಗೆ ಗೊತ್ತೆ ಈ ವಿಷಯ?"
"ಇಲ್ಲ."
"ಆಹಾ! ಇದೀಗ ಸಂಘಟನೆಯ ಗುಟ್ಟು."
ಸಂಘಟಕರಾದ ನಂಜುಂಡಯ್ಯನವರನ್ನು ಜಯದೇವ ಕೇಳಿದ:
"ಟ್ರೇನಿಂಗ್ ಆದವರೇ ಮುಖ್ಯೋಪಾಧ್ಯಾಯರಾಗ್ಬೇಕೂಂತ ನಿಯಮವೇನಾ
ದರೂ ಇದೆಯೇನು?"
"ಖಾಸಗಿ ಸಂಸ್ಥೇಲಿ ಮೊದಲೇನೂ ಆ ಪ್ರಶ್ನೆ ಬರೋದಿಲ್ಲ. ಆದರೂ ಮುಂದೆ
ಬೇಕಾಗುತ್ತೆ. ನಿಮ್ಮನ್ನಂತೂ ನಾವೇ ಆರಿಸಿ ತರಬೇತಿಗೆ ಕಳಿಸ್ತೀವಿ. ಮೈಸೂರಲ್ಲೋ
ಬೆಂಗಳೂರಲ್ಲೋ ಬಿ.ಇಡಿ. ಮಾಡ್ಕೊಂಡು ಬನ್ನಿ."
"ನನ್ನ ವಿಷಯ ಹೇಗೂ ಇರ್‍ಲಿ ಸಾರ್. ತಾವು?"
"ನಾನೇ? ಇಲ್ಲಪ್ಪ. ಇಷ್ಟು ವಯಸ್ಸಾದ್ಮೇಲೆ ಇನ್ನು ಕಲಿಯೋದು ಕಷ್ಟ.
ಅಲ್ಲದೆ, ನನಗ್ಯಾತಕ್ರಿ ಬೇಕು? ಸ್ವಲ್ಪ ದಿವಸ, ಎಲ್ಲಾ ಸರಿ ಹೋಗೋವರೆಗೆ, ನಾನೇ
ಎಚ್.ಎಮ್. ಆಗಿರ್‍ತೀನಿ. ಆ ಮೇಲೆ ಬೇರೆಯವರು ಬರ್‍ಲಿ."
"ತಾವು?"
"ನಾನು ಆಡಳಿತ ಸಮಿತಿಗೆ ಕಾರ್ಯದರ್ಶಿಯಾಗ್ತೀನಿ ಜಯದೇವ್. ಸಾಯುವ