ಪುಟ:ನವೋದಯ.pdf/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

501

ವರೆಗೂ ಪಾಠ ಹೇಳುತ್ಲೇ ಇರ್ಬೇಕು ಅನ್ನೋ ಇರಾಧೆಯೇನೂ ನನಗಿಲ್ಲ. ಮಹಾತ್ವಾ
ಕಾಂಕ್ಷೆಯ ಮನುಷ್ಯನಂತೂ ನಾನಲ್ಲವೇ ಅಲ್ಲ. ಕಾರ್ಯದರ್ಶಿಯಾಗಿದ್ದು ಶಾಲೆ
ಸಮರ್ಪಕವಾಗಿ ನಡಕೊಂಡು ಹೋಗುವಂತೆ ಮಾಡ್ತೀನಿ."
"ಕಾರ್ಯದರ್ಶಿಯ ಸ್ಥಾನವೂ ಮುಖ್ಯವಾದದ್ದೇ ಅಂತ. ಒಪ್ಕೋತೀನಿ," ಎಂದ
ಜಯದೇವ.
"ಇಷ್ಟರೊಳಗೇ ನಾನು ರಾಜಿನಾಮೆ ಕೊಟ್ಟಿದ್ದರೆ ಚೆನ್ನಾಗಿ‍ರ್‍ತಿತ್ತು. ನಾಡದ್ದು
ಶಂಕುಸ್ಥಾಪನೆಯ ದಿವಸ ಅಧಿಕೃತವಾಗಿ ನಾನು ಓಡಾಡೋ ಹಾಗೇ ಇಲ್ಲ. ಇಷ್ಟೆಲ್ಲಾ
ಕೆಲಸ ಮಾಡಿರೋನು ನಾನು. ಆದರೆ ಹೆಸರು ಬರೋದೆಲ್ಲಾ ಬೇರೆಯವರಿಗೆ.
ಹ್ಯಾಗಿದೆ?"
"ಹಾಗಾದರೆ ಯಾವತ್ತು ರಾಜಿನಾಮೆ ಕೋಡೋಣಾಂತ ಮಾಡಿದೀರಿ?" ಎಂದು
ಜಯದೇವ ಕೇಳಿದ.
"ಬೇಸಗೆಯೊಳಗೆ ಬಿಟ್ಕೊಡೀಂತ ತಿಳಿಸ್ತೀನಿ. ನೀವು ವರ್ಷದ ಕೊನೇಲಿ
ಬಂದರೆ ಸಾಕು ಅನಿಸುತ್ತೆ," ಎಂದು ನಂಜುಂಡಯ್ಯ ತಮ್ಮ ಅಭಿಪ್ರಾಯವನ್ನು ವ್ಯಕ್ತ
ಪಡಿಸಿದರು.
...ಅವರು ಹೊರಡುವ ಹಿಂದಿನ ದಿನ, ನಂಜುಂಡಯ್ಯ ಮತ್ತು ಶಂಕರಪ್ಪ
ಇಬ್ಬರನ್ನೂ ಜಯದೇವ ಊಟಕ್ಕೆ ಕರೆದ.
ಆದರೆ, ಮನೆಯಲ್ಲೆ ಇದ್ದ ಶ್ರೀಪತಿರಾಯರು ಇದಿರ್ಗೊಂಡುದು ನಂಜುಂಡಯ್ಯ
ಒಬ್ಬರನ್ನೇ.
"ಮೊನ್ನೆ ಜಯದೇವ ಹೊರಡುವ ಹೊತ್ತಿಗೆ ನಾನೂ ನಿಮ್ಮೂರಿಗೆ ಬಂದಿದ್ದೆ.
ವಾಪಸು ಬರುವ ಅವಸರದಲ್ಲಿ ತಮ್ಮನ್ನು ಭೇಟಿಯಾಗೋದು ಸಾಧ್ಯವಾಗ್ಲಿಲ್ಲ,"
ಎಂದರು ಶ್ರೀಪತಿರಾಯರು.
"ತಾವು ಬಂದಿದ್ದಿರೀಂತ ಆಗಲೆ ನನಗೆ ತಿಳೀತು. ಆದರೆ, ತಮ್ಮನ್ನು ಕಾಣ
ಬೇಕು ಅನ್ನುವಷ್ಟರಲ್ಲೆ ತಾವು ಹೊರಟಿದ್ದಿರಿ," ಎಂದು ನಂಜುಂಡಯ್ಯ ನುಡಿದರು.
ಶಂಕರಪ್ಪನವರು ಊಟಕ್ಕೆ ಬರಲಿಲ್ಲ.
"ಅಸೆಂಬ್ಲಿ ಸ್ಪೀಕರು ಅವರನ್ನ ಮನೆಗೆ ಕರೆದ್ಬಿಟ್ಟಿದಾರೆ. ಹಳೇ ಸ್ನೇಹಿತರಂತೆ,"
ಎಂದು ನಂಜುಂಡಯ್ಯ ನುಡಿದರು. "ನಿರಾಶೆಗೊಳಿಸಿದ್ದಕ್ಕೆ ಕ್ಷಮೆ ಕೇಳಿದಾರೆ" ಎಂದು,
ಶಂಕರಪ್ಪನವರ ಪರವಾಗಿ ಅವರೇ ಶಿಷ್ಟಾಚಾರದ ಒಂದು ಮಾತನ್ನೂ ಆಡಿದರು.
ಶಂಕರಪ್ಪನವರು ಬರಲಿಲ್ಲವೆಂದು ನಿರಾಶೆಯಂತೂ ಯಾರಿಗೂ ಆಗಲಿಲ್ಲ. ಅವ
ರಿಬ್ಬರನ್ನು ಊಟಕ್ಕೆ ಕರೆಯುವ ವಿಷಯದಲ್ಲಿ ಶ್ರೀಪತಿರಾಯರು ಉತ್ಸುಕತೆ ತೋರಿ
ದುದೂ ಉಪಾಧ್ಯಾಯನಾದ ಅಳಿಯನ ಭಾವೀ ಜೀವನದ ಹಿತದ ದೃಷ್ಟಿಯಿಂದಲೇ.
ಸುನಂದಾ ಬಡಿಸಲು ಹೊರಡುವುದು ಸಾಧ್ಯವಿಲ್ಲವೆಂದು ಆಕೆಯ ತಾಯಿಯೇ
ಸೆರಗು ಬಿಗಿದರು. ಆದರೆ ಸುನಂದೆಯ ಪಕ್ಕದ ಮನೆ ಸ್ನೇಹಿತೆ ಬಂದು, "ನಾನು