ಪುಟ:ನವೋದಯ.pdf/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

503

ಮಾತುಗಳು! ಎಂತೆಂತಹ ಬೈಗಳು! ಪಡಖಾನೆಯಲ್ಲಿ ಹೆಂಡ ಹೆಚ್ಚು ಖರ್ಚಾಯಿತು.
ಹೋಟೆಲುಗಳಲ್ಲಿ ವ್ಯಾಪಾರ ಇಮ್ಮಡಿಸಿತು.
ಸಮಾಜದೊಳಗಿನ ಈ ನಡೆನುಡಿಗಳನ್ನು ಮಕ್ಕಳೂ ಪ್ರತಿಬಿಂಬಿಸಿದರು. ಅವರ
ಬಾಯಲ್ಲೂ ಬಿರುಸಾದ ವಾದವಿವಾದವೇ.
ಆ ಗೊಂದಲದಲ್ಲಿ, ಅಲ್ಲಿಂದಲ್ಲಿಗೇ ಮರೆಯಾದ ಪ್ರಕರಣ ರಾಮಾಚಾರಿಯದು.
ಜಯದೇವ ಊರಿನಿಂದ ಹಿಂತಿರುಗಿದೊಡನೆ ಆತನನ್ನು ಭೇಟಿಯಾಗಿ ತಿಮ್ಮಯ್ಯ
ವರದಿ ಕೊಟ್ಟರು:
"ನಾನು ಹೇಳಿದ ಹಾಗೇ ಆಯ್ತು ಆ ರಾಮಾಚಾರಿಯ ವಿಷಯ."
“ಏನಾಯಿತು?"
"ಚಪ್ಪಲಿ ಏಟು,ಇನ್ನೇನು?"
ಆ ರಜಾದಲ್ಲಿ ತನ್ನೂರಿಗೆ ಹೋಗದೆ ಅಲ್ಲಿಯೇ ನಿಂತಿದ್ದ ರಾಮಾಚಾರಿ,
ಮಗ್ಗುಲು ಬೀದಿಯಲ್ಲೆ ಇದ್ದ ಯುವತಿಯಾದ ವಿಧವೆಯೊಬ್ಬಳನ್ನು ಕೆಣಕಿದ್ದ. ಅದು,
ಕಾಯಿಯೋ ಹಣ್ಣೋ ಎಂದು ತಿಳಿಯಲು ಮಾಡಿದ್ದ ಯತ್ನ .ಯತ್ನಕ್ಕೆ ಅಪ
ಯಶಸ್ಸು ದೊರೆಯಿತು; ಆತನಿಗೆ ಚಪ್ಪಲಿ ಏಟು. ಲಕ್ಕಪ್ಪಗೌಡರ ಮನೆ ಅಲ್ಲೆ
ಸಮೀಪದಲ್ಲಿ ಇದ್ದುದರಿಂದ ರಾಮಾಚಾರಿ ಬದುಕಿದ.
ಮಾರನೆಯ ದಿನ ರಾಮಾಚಾರಿ ಆ ಊರಲ್ಲೆಲ್ಲೂ ಕಾಣಿಸಲಿಲ್ಲ. ಹೈಸ್ಕೂಲಿನ
ಶಂಕುಸ್ಥಾಪನೆಯಾದಾಗಲೂ ಯಾರೂ ಆತನನ್ನು ನೋಡಲಿಲ್ಲ.
ಶಾಲೆ ಆರಂಭವಾದಾಗ ನಂಜುಂಡಯ್ಯನ ಕೈಸೇರಿದುದು ರಜೆಯ ಅರ್ಜಿ.
ಈ ಆಸಾಮಿ ಇನ್ನು ಬರುವುದೇ ಇಲ್ಲವೇನೊ ಎಂಬ ಭಾವನೆ ಬಲಗೊಳ್ಳು
ತ್ತಿದ್ದಾಗಲೆ ಆತ ಆಗಮಿಸಿದ. ಅಡ್ಡಪಂಚೆ, ಶರಟು, ಕೋಟು, ಚಪ್ಪಲಿ. ಕೈಲಿ ಸಿಗ
ರೇಟು. ಪ್ರತಿಯೊಂದೂ ಹಿಂದಿನಂತೆಯೇ.
'ಹೋದ ತಿಂಗಳು ಹೀಗಾಯಿತಂತಲ್ಲಾ' ಎಂದು ಯಾರಾದರು ಕೇಳಿದ್ದರೆ,
'ಹೌದೆ? ಎಲ್ಲಿ? ಯಾರು?' ಎಂದು ಪ್ರಶ್ನಿಸುವ ಮುಖ ಭಾವವಿತ್ತು ಆ ಮನುಷ್ಯನಿಗೆ.
"ಯಾರಾದರೂ ಒ೦ದು ದೂರು ಬರಕೊಟ್ಟಿದ್ದರೆ ಸಾಕಿತ್ತು. ಮುಂದಿನ ಕೆಲಸ
ನಾನು ಮಾಡ್ತಿದ್ದೆ,"ಎಂದು ನಂಜುಂಡಯ್ಯ, ಒಳ್ಳೆಯದೊಂದು ಅವಕಾಶ ತಪ್ಪಿ
ತಲ್ಲಾ_ಎಂದು ವಿಷಾದಿಸಿದರು.
ಅದಕ್ಕೂ ಹಿಂದೆ ಒದಗಿದ್ದ ಒಂದು ಅವಕಾಶದ ವಿಷಯ ಜಯದೇವ ಪ್ರಸ್ತಾ
ಪಿಸಲಿಲ್ಲ.
...ಪರೀಕ್ಷೆ ಮುಗಿಸಿ ಬಂದಿದ್ದ ಪ್ರಭಾಮಣಿ ಊರಲ್ಲೇ ಇದ್ದಳು. ಒಂದು
ಸಂಜೆ ಅಕ್ಕ ತಂಗಿಯರು ಬೀದಿಯಲ್ಲಿ ಹೋಗುತ್ತಿದ್ದಾಗ ಜಯದೇವ ಅವರಿಗೆ ಕಾಣಲು
ದೊರೆತ.
"ಏನಮ್ಮ ಪ್ರಭಾ? ಎಷ್ಟೊಂದು ಬೆಳೆದ್ಬಿಟ್ಟಿದೀಯೆ_ಗುರುತೇ ಸಿಗೊಲ್ವಲ್ಲ,"