ಪುಟ:ನವೋದಯ.pdf/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



504

ಸೇತುವೆ

ಎಂದು ಜಯದೇವನೆಂದ.
ಪ್ರಭಾ ನಾಚುತ್ತ ಹಳೆಯ ಗುರುವಿಗೆ ವಂದಿಸಿದಳು.
ಗುರು ಜಯದೇವ ಕೇಳಿದ:
"ಪರೀಕ್ಷೇಲಿ ಚೆನ್ನಾಗಿ ಮಾಡಿದೀಯ?"
"ಹೂಂ."
“ಮನೇಲಿ ಏನಂತಾರೆ?”
"ಕಾಲೇಜಿಗೆ ಹೋಗೂಂತ."
"ನಿಮ್ಮ ಫಲಿತಾಂಶವೇನೋ ಈಗ್ಲೇ ಬಂದ್ಬಿಡುತ್ತೆ. ಆದರೆ ಕಾಲೇಜು ಶುರು
ವಾಗೋಕೆ ಇನ್ನೂ ಆರು ತಿಂಗಳಿದೆಯಲ್ಲ. ಏನ್ಮಾಡ್ತೀಯ ಅಷ್ಟು ಸಮಯ?"
"ಮನೇಲೆ ಇರ್‍ತೀನಿ."
"ಸರೀನಮ್ಮ . ಅದಲ್ದೆ, ನಂಜುಡಯ್ಯನವರ ಜತೆಗೆ ನಿನ್ನ ರಾಧೆಗೆ ನೀನೂ
ಸ್ವಲ್ಪ ಪಾಠ ಹೇಳ್ಕೊಡು."
ಪ್ರಭಾಮಣಿ ನಕ್ಕಳು. ರಾಧಾ ಯಾರೆಂಬುದು ಆ ಕೃಷ್ಣನಿಗೆ ಗೊತ್ತಿತ್ತು.
"ಆಗಲಿ ಸಾರ್, ಹೇಳ್ತೀನಿ."
“ಈಗೇನೂ ಸಂಶಯ ಇಲ್ವೊ?"
ಕೊನೆ ಇಲ್ಲದ ಸಂದೇಹಗಳು, ಪ್ರಶ್ನೆ-ಉಪಪ್ರಶ್ನೆಗಳ, ರಾಣಿ ಆಕೆ.
ಪ್ರಭಾಮಣಿ ನಕ್ಕು ಸುಮ್ಮನಾದಳು.
... ಅಷ್ಟು ತಿಂಗಳ ಕಾಲ ಸುನಂದೆಯ ಜತೆಯಲ್ಲಿದ್ದ ಬಳಿಕ ಜಯದೇವನಿಗೆ
ಒಂಟಿ ಜೀವನ ದುಸ್ಸುಹವಾಯಿತು. ಆನಂದ ವಿಲಾಸಕ್ಕೆ ಹೋಗುವುದಿಲ್ಲವೆಂದು,
ಮತ್ತೆ ಕಾಹಿಲೆ ಬೀಳುವುದಿಲ್ಲವೆಂದು, ಸುನಂದೆಗೆ ಆತ ಮಾತುಕೊಟ್ಟಿದ್ದ. ಆ
ಮಾತನ್ನು ನಡೆಸುವುದೆಂದರೆ ಸ್ವಯಂಪಾಕ ಆರಂಭಿಸುವುದು. ಕ್ರಮಬದ್ಧವಾದ
ಜೀವನ...
ಬಂದ ಮೊದಲ ದಿನದಿಂದಲೆ ಗಂಡು ಅಡುಗೆಯನ್ನು ಆರಂಭಿಸಿದ ಜಯದೇವ.
ಬಿಕೋ ಎನ್ನುತ್ತಿದ್ದ ಆ ಮನೆ ಹೆಜ್ಜೆ ಹೆಜ್ಜೆಗೂ ಸುನಂದೆಯ ನೆನಪು ಮಾಡಿಕೊಡು
ತ್ತಿತ್ತು .ಹೆಂಚುಗಳ ಎಡೆಯಿಂದ ಇಳಿದಿದ್ದ ಧೂಳು ನೆಲದ ಮೇಲೆ ಒಂದಂಗುಲ
ದಪ್ಪನೆ ಬಿದ್ದಿತ್ತು. ಅದೆಲ್ಲವನ್ನೂ ಆತ ಗುಡಿಸಿ ಸ್ವಚ್ಛಗೊಳಿಸಿದ.
ಕೆಲಸದವಳು ದಿನಕ್ಕೊಮ್ಮೆ ಬಂದು ಪಾತ್ರೆ ಬೆಳಗಿ ಕೊಡುತ್ತಿದ್ದಳು.
ತಿಮ್ಮಯ್ಯ , ಜಯದೇವನಿಗೆ ನಳರಾಯನೆಂದು ಮತ್ತೊಂದು ಹೆಸರಿಟ್ಟರು.
...... ಪಾಠದ ವೇಳಾಪಟ್ಟಿ ಸಿದ್ಧವಾದೊಡನೆ ಜಯದೇವ ತರಗತಿಗಳನ್ನು
ಆರಂಭಿಸಿದ.
ಮಾಧ್ಯಮಿಕ ಅಂತಿಮ ತರಗತಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಮೊದಲ
ಪಾಠವನ್ನು ಮಾಡುತ್ತ ಜಯದೇವ ಕೇಳಿದ: