ಪುಟ:ನವೋದಯ.pdf/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

506

ಸೇತುವೆ


...ಪಾಠಗಳು ಹೇಗೇ ಇರಲಿ ಏನೇ ಇರಲಿ-ಕಾಟಾಚಾರಕ್ಕೆ ಹೋಗಿ ಬರುವವ
ರಂತೆ ದಿನ ಕಳೆಯುತ್ತಿದ್ದ ರಾಮಾಚಾರಿ ಕ್ರಮೇಣ ಉಲ್ಲಸಿತನಾದ. ಅದಕ್ಕೆ ಕಾರಣ
ದೂರವಿರಲಿಲ್ಲ.
ಆತ ನಂಜುಂಡಯ್ಯನನ್ನು ಕೇಳಿದ:
"ಸಾರ್,ತಮ್ಮಿಂದ ನನಗೊಂದು ಸ್ಪಷ್ಟೀಕರಣ ಬೇಕಾಗಿದೆ."
"ಏನಪ್ಪಾ?"
"ಪಂಚಾಯತ ಬೋರ್ಡ್ ಚುನಾವಣೆಗೂ ನಮಗೂ ಇರುವ ಸ೦ಬ೦ಧವೇನು?"
ಆ ಸಲ ನಂಜುಂಡಯ್ಯನ ಪಾಲಿಗೂ ಅದು ಸೂಕ್ಷ್ಮವಾದ-ತೊಡಕಿನ-ಪ್ರಶ್ನೆ
ಯಾಗಿತ್ತು. ಪ್ರಚಾರದ ಕಣಕ್ಕೆ ನೇರವಾಗಿ ಧುಮುಕಿ ತಾವು ಶಂಕರಪ್ಪನವರ ಪಂಗಡದ
ಪರವಾಗಿ ದುಡಿಯಲು ಅವರು ಇಚ್ಛಿಸಿದ್ದರು.
ಆದರೆ, ಹಾಗೇನಾದರೂ ಮಾಡಿದರೆಂದರೆ, ನಾರಾಯಣ ಗೌಡರ ಗು೦ಪಿನಿಂದ
ನಂಜುಂಡಯ್ಯನವರ ಮೇಲೆ ದೂರು ಹೋಗುವುದು; ಮುಂದಿನ ಕೆಲಸಕ್ಕೆ ತೊಂದರೆ
ಯಾಗುವುದು.
ಹೀಗೆ ಎಲ್ಲವನ್ನೂ ಕೂಡಿಸಿ ಕಳೆದು, ಪ್ರತ್ಯಕ್ಷವಾಗಿ ಪಂಚಾಯತ ಚುನಾವಣೆ
ಯಲ್ಲಿ ಭಾಗವಹಿಸಬಾರದೆಂದೇ ಅವರು ನಿರ್ಧರಿಸಿದ್ದರು.
ಅವರು ಹೇಳಿದರು:
"ಉಪಾಧ್ಯಾಯರಿಗೂ ರಾಜಕೀಯಕ್ಕೂ ಯಾವ ಸಂಬಂಧವೂ ఇల్ల ಎನ್ನು
ವುದು ನಿಮಗೆ ತಿಳಿದೇ ಇದೆ. ಅಲ್ವಾ ರಾಮಾಚಾರಿ?"
"ಆದರೆ, ಪೌರನೀತಿ ಮತ್ತು ರಾಜಕೀಯ ಬೇರೆ ಬೇರೆ ಅಲ್ವೆ ಸಾರ್?"
[ಲಕ್ಕಪ್ಪಗೌಡರ ಮೂಲಕ ಈತ ಪ್ರಚಾರಕ್ಕೋಸ್ಕರ ಹಣ ಪಡೆದಿರಬೇಕೆಂದು
ನಂಜುಂಡಯ್ಯ ಊಹಿಸಿದರು.]
"ತಾತ್ತ್ವಿಕ ಪ್ರಶ್ನೆಯ ಚರ್ಚೆ ಈಗ ಅಗತ್ಯವಿಲ್ಲ. ಊರಿನ ವಾತಾವರಣ
ಈಗಾಗ್ಲೇ ಕೆಟ್ಟಿದೆ. ನಾವು ಉಪಾಧ್ಯಾಯರೂ ಸೇರ್ರ್ಕೊಂಡು ಇನ್ನಷ್ಟು ಕೆಡಿಸೋದು
ಬೇಕಾಗಿಲ್ಲ."
"ಇದು ಈ ಸಲದ ಚುನಾವಣೆಗೆ ಮಾತ್ರ ಅನ್ವಯಿಸುತ್ತೋ ಅಥವಾ-"
"ಪ್ರತಿಯೊಂದು ಸಲಕ್ಕೂ ಅನ್ವಯವಾಗುತ್ತೆ."
ರಾಮಾಚಾರಿ, ಸುಮ್ಮನೆ ಕುಳಿತ. ಆತನ ಕೈಲಿದ್ದ ಸಿಗರೇಟು ಹೊಗೆ
ಯಾಡುತ್ತಿತ್ತು.
"ತೃಪ್ತಿಯಾಯ್ತೇನು?" ಎಂದು ನಂಜುಂಡಯ್ಯ ಕೇಳಿದರು:
"ಏನೆಂದಿರಿ?"
"ನನ್ನ ಸ್ಪಷ್ಟೀಕರಣದಿಂದ ತೃಪ್ತಿಯಾಯ್ತೇನು-ಅಂತ ಕೇಳ್ದೆ."
"ಧಾರಾಳವಾಗಿ ಆಯ್ತು."