ಪುಟ:ನವೋದಯ.pdf/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನವೋದಯ

509

ಆದರೆ ಬಿಟ್ಟಿರೋದು ಸಾಧ್ಯವಿಲ್ಲ."
ಒಳಗೆಲ್ಲಾ ದೀಪವಿಲ್ಲದೆ ಇದ್ದುದನ್ನು ಗಮನಿಸಿ ನಂಜುಂಡಯ್ಯ ಹೇಳಿದರು:
"ಇದೇನು? ಈಗ ತಾನೆ ಬಂದಿರಾ ನೀವು?"
"ಹೌದು," ಎಂದ ಜಯದೇವ.
"ಅಡುಗೆ?"
"ಏನು ಮಹಾ ಅಡುಗೆ? ಮಾಡಿದರಾಯ್ತು."
"ಬೇಡಿ. ನಮ್ಮ ಮನೆಗೆ ಬಂದ್ಬಿಡಿ ಇವತ್ತು. ಮಹಾರಾಯಿತಿ ಏನು ಮಾಡಿ
ದಾಳೊ ಗೊತ್ತಿಲ್ಲ. ಆದರೂ ಬನ್ನಿ."
"ಪರವಾಗಿಲ್ಲ ಸಾರ್. ಯಾಕೆ ತೊಂದರೆ? ಇಲ್ಲೆ ಮಾಡ್ಕೊತೀನಿ."
"ತೊಂದರೆ ಎಂಥಾದ್ರಿ? ಬನ್ನಿ. ಇಷ್ಟೊಳ್ಳೆ ಸುದ್ದಿ ಬಂದಿರೋ ದಿವಸ ಊಟ
ಜತೇಲಿ ಮಾಡೋಣ."
ನಿರುಪಾಯನಾಗಿ ಜಯದೇವ, ಮತ್ತೆ ಮನೆಗೆ ಬೀಗ ತಗಲಿಸಿ ನಂಜುಂಡಯ್ಯ
ನವರ ಜತೆ ಹೊರಟ.
...ಶಾಲೆಗೆ ಬಂದ ಲಕ್ಕಪ್ಪಗೌಡರ ಮುಖ ಸಪ್ಪಗಿತ್ತು. ಜಯದೇವನನ್ನು
ಕಾಣುತ್ತಲೆ ಅವರೇ ಹೇಳಿದರು:
"ನಿಮ್ಮ ಇಷ್ಟದಂತೆಯೇ ಆಯಿತಲ್ಲ ಜಯದೇವರೆ."
"ನಿಮ್ಮದೇನು? ನಮ್ಮದೇನು? ದೇಶ ಎಲ್ಲರದೂ ಅಲ್ಲವೆ?"
"ನಂಜುಂಡಯ್ಯ ಇನ್ನು ನಮ್ಮನ್ನು ಹ್ಯಾಗೆ ನಡೆಸ್ಕೋತಾರೋ ನೋಡ್ಬೇಕು.
ಗೆದ್ದವರು ಸೋತವರ ವಿಷಯದಲ್ಲಿ ದಯೆ ತೋರಿಸ್ತಾರೋ ಇಲ್ಲವೋ."
"ಯಾರೂ ಗೆದ್ದಿಲ್ಲ ಯಾರೂ ಸೋತಿಲ್ಲ ಲಕ್ಕಪ್ಪಗೌಡರೆ. ಎಲ್ಲಾ ಬರಿಯ
ಭ್ರಮೆ."
ಲಕ್ಕಪ್ಪಗೌಡರು ನಸುನಕ್ಕು ಅಂದರು:
"ಆದರೆ ನಮ್ಮ ಸ್ನೇಹಿತರ ಕರ್ನಾಟಕ ಪ್ರಾಂತ ಮಾತ್ರ ಆಗಲಿಲ್ಲ."
"ಅಂದರೆ?"
"ನಮ್ಮ ಮೈಸೂರು ವಿಶಾಲವಾಗುತ್ತೆ ಅಷ್ಟೆ."
[ಜಯದೇವನಿಗೊಂದು ಗಾದೆ ನೆನಪಾಯಿತು: ಅಡಿಗೆ ಬಿದ್ದರೂ-]
ಉತ್ತರದ ಅಗತ್ಯವಿಲ್ಲವೆಂದು ಜಯದೇವ ನಕ್ಕ.
[ಕಟ್ಟೆಗಳೊಡೆದು ಸಾಗರದ ನೀರು ನುಗ್ಗಿ ಬಂದಿದ್ದರೂ ಸರೋವರ ಹೇಳು
ತಿತ್ತು: 'ನಾನೇ ಹೊರಕ್ಕೆ ಹರಿದು ವಿಶಾಲವಾಗ್ತಿದೀನಿ.']
...ರಾಮಾಚಾರಿಗೆ ಆ ವಿಷಯದಲ್ಲಿ ತೀಕ್ಷ್ಣವಾದ ಅಭಿಪ್ರಾಯವೇನೂ ಈಗ
ಇರಲಿಲ್ಲ. ಬದಲಾಗುತ್ತಿದ್ದ ಕಾಲಕ್ಕೆ ಹೊಂದಿಕೊಳ್ಳಲು ಆತ ಸಿದ್ಧನಾಗುತ್ತಿದ್ದ.
ಆತನೆಂದ: