ಪುಟ:ನವೋದಯ.pdf/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

510

ಸೇತುವೆ

"ಸಂಸ್ಥಾನ ವಿಸ್ತಾರವಾದ್ಮೇಲೆ ನಮ್ಮನ್ನೂ ದೂರ ದೂರಕ್ಕೆ ಅವರು ವರ್ಗ
ಮಾಡಿದರೆ ವಾಸಿ."

****

ಪಂಚಾಯತ್ ಬೋರ್ಡು ಚುನಾವಣೆ ಮುಗಿಯಿತು. ಶಂಕರಪ್ಪನವರ ಪಂಗಡವೇ
ಬಹುಮತದಿಂದ ಆರಿಸಿ ಬಂತು.
ನಂಜುಂಡಯ್ಯ ಪರಮ ಸಂತುಷ್ಟರಾಗಿ ಹೇಳಿದರು:
"ಇನ್ನು ಶಾಲೆಯ ಕಟ್ಟಡದ ಕೆಲಸ ಸಸೂತ್ರವಾಗಿ ಸಾಗುತ್ತೆ."

****

ಯುಗಾದಿಗೆ ಹಿಂದಿನ ದಿನ ಸುನಂದೆಯ ಕಾಗದ ಬಂತು.
"ನೀವಿಲ್ಲದೇ ಹೊಸ ವರ್ಷ ಆರಂಭವಾಗ್ತಿದೆ. ಬೇಜಾರು. ಮನ್ಮಥ ಸಂವತ್ಸರ
ಚೆನ್ನಾಗಿತ್ತು. ಇನ್ನು ಬರುವುದು ದುರ್ಮುಖಿಯಂತೆ. ಯಾರು ಹೆಸರಿಟ್ಟರೊ?
ನಾವಂತೂ ಒಳ್ಳೆಯ ಹೆಸರನ್ನೆ ಆರಿಸಬೇಕು. ಹೆಸರು ಯಾಕೆ ಅಂತ ತಿಳೀತು ತಾನೆ?
ಹೇಳಿ; ಬರೆಯಿರಿ. ನಿಮಗೆ ಯಾವ ಹೆಸರು ಇಷ್ಟ?"

****

ಯುಗಾದಿಗೆ ಮಾರನೆಯ ದಿನ ಪ್ರೌಢಶಾಲೆಯ ಕಟ್ಟಡದ ಕೆಲಸ ಮೊದಲಾ
ಯಿತು. ಪಂಚಾಯತ್ ಬೋರ್ಡ್ ಅಧ್ಯಕ್ಷ ಶಂಕರಪ್ಪನವರೇ ನಿಂತು, ಆ ಸಮಾ
ರಂಭವನ್ನು ನಡೆಸಿಕೊಟ್ಟರು.

****

ಬಿಸಿಲು ಹೆಚ್ಚುತ್ತಿತ್ತು ಹೊರಗೆ. ಆಕಾಶದಲ್ಲಿ ಎಲ್ಲೆಲ್ಲೂ ಬಿಳಿಯ ಮೋಡ.
ಎಲ್ಲರೂ ಹೇಳುತ್ತಿದ್ದರು:
"ಅಸಾಧ್ಯ ಸೆಖೆ! ಭಾರೀ ಸೆಖೆ!"
ಹಸಿರು ಒಣಗಿ ದನಕರುಗಳು ಬಾಯಿ ಬಿಟ್ಟುವು. ಒಣಗಿ ಒಡೆದಿದ್ದ ನೆಲದಲ್ಲಿ
ಕಂಬನಿಯೊಸರುವಷ್ಟೂ ತೇವವಿರಲಿಲ್ಲ.
“ಶಾಲೆಗೆ ಈ ಸಮಯದಲ್ಲಿ ರಜಾ ಕೊಟ್ಟಿದ್ದರೆ ಚೆನ್ನಾಗಿತ್ತು," ಎಂದರು
ತಾಯ್ತಂದೆಯರು.
ಆದರೆ ಆಗ ಕೊಡಲು ರಜಾ ಇದ್ದರಲ್ಲವೆ?
ಹೊರಗೆ ಹಾಗೆ ದಹಿಸುತ್ತಿದ್ದರೂ ಜಯದೇವನ ಒಳಗು ಸದಾ ಹಸುರಾಗಿಯೇ
ಇತ್ತು. ಬಿಸಿಲಲ್ಲಿ ಬಾಡುತ್ತಿದ್ದರೂ ತುಂಟ ಆಟಗಳನ್ನಾಡುತ್ತಿದ್ದ ಎಳೆಯ ಮಕ್ಕಳು,
ಅವರ ನಗೆ, ಕಲರವ, ನಿಮಿಷದ ಸ್ನೇಹ, ನಿಮಿಷದ ಜಗಳ, ಎಲ್ಲವೂ ಆತನಿಗೆ ಪ್ರಿಯ
ವಾಗಿದ್ದುವು. ಅವರ ಆಟಪಾಠಗಳೊಡನೆ ಆತ ಸಮರಸನಾದ.